Advertisement

ಹುಚ್ಚ ವೆಂಕಟ್‌ To ಸಂಯುಕ್ತಾ.. ಬಿಗ್‌ಬಾಸ್‌ನಲ್ಲಿ ಕಿರಿಕ್‌ ಮಾಡಿ ಹೊರಬಂದ ಸ್ಪರ್ಧಿಗಳಿವರು

03:39 PM Oct 16, 2024 | Team Udayavani |

ಬೆಂಗಳೂರು: ಪ್ರತಿ ಸಲಿ ಬಿಗ್‌ ಬಾಸ್‌ ಕಾರ್ಯಕ್ರಮ (Bigg Boss Kannada) ದ ಹೊಸ ಸೀಸನ್‌ ಆರಂಭವಾದಾಗ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತದೆ ಅಥವಾ ದೊಡ್ಮನೆಯೊಳಗಿನ ಸ್ಪರ್ಧಿಗಳಿಂದ ಸದ್ದಾಗುತ್ತದೆ.

Advertisement

ಬಿಗ್‌ ಬಾಸ್‌ ಕಾರ್ಯಕ್ರಮ ವ್ಯಕ್ತಿತ್ವಗಳ ಆಟ. ಇಲ್ಲಿ 100 ದಿನ ಉಳಿದು ಟ್ರೋಫಿ ಎತ್ತಿಕೊಳ್ಳುವುದಕ್ಕಿಂತ ಉಳಿದ್ದಷ್ಟು ದಿನ ತನ್ನ ನಿಜವಾದ ವ್ಯಕ್ತಿತ್ವದಿಂದಲೇ ವೀಕ್ಷಕರ ಮನಗೆಲ್ಲುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ.

ಬಿಗ್‌ ಬಾಸ್‌ಗೆ ವಿವಾದಿತ ಕಾರ್ಯಕ್ರಮವೆನ್ನುವ ಹಣೆಪಟ್ಟಿಯೂ ಇದೆ. ಆಯಾ ಭಾಷೆಯಲ್ಲಿ ಬಿಗ್‌ ಬಾಸ್‌ಗೆ ಅಪಾರ ವೀಕ್ಷಕರಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿದಂತೆ ಎಲ್ಲಾ ಭಾಷೆಯ ಬಿಗ್‌ ಬಾಸ್‌ ಒಂದಲ್ಲ ಒಂದು ಕಾರಣಕ್ಕೆ ವಿವಾದವಾಗಿಯೇ ಸುದ್ದಿಯಾಗಿದೆ.

ಇದನ್ನೂ ಓದಿ: BBK11: ಬಿಗ್‌ ಬಾಸ್‌ ಮನೆಯಲ್ಲಿ ಹೊಡೆದಾಟ; ಶೋನಿಂದ ಹೊರಬಿದ್ದ ಜಗದೀಶ್‌ – ರಂಜಿತ್‌?

ಕನ್ನಡ ಬಿಗ್‌ ಬಾಸ್‌ ಇತಿಹಾಸ ಗಮನಿಸಿದರೆ, ಇಲ್ಲೂ ಕೂಡ ಕೆಲ ಸ್ಪರ್ಧಿಗಳ ನಡುವಳಿಕೆ ವಿವಾದಕ್ಕೆ ಕಾರಣವಾಗಿದೆ. ಮಾತಿನ ಮಲ್ಲಯುದ್ದ ಮಾತ್ರವಲ್ಲದೆ, ಕೆಲ ಸ್ಪರ್ಧಿಗಳು ದೈಹಿಕವಾಗಿ ಹಲ್ಲೆ ನಡೆಸಿ ಶೋನಿಂದ ಹೊರಹೋಗಿದ್ದಾರೆ.

Advertisement

ಬಿಗ್‌ ಬಾಸ್‌ ಕನ್ನಡ-11 (Bigg Boss‌ Kannada-11) ದೈಹಿಕವಾಗಿ ಹಲ್ಲೆ ಮಾಡಿ ಇಬ್ಬರು ಹೊರಹೋಗಿದ್ದಾರೆ ಎನ್ನಲಾಗುತ್ತಿದೆ. ಇದು ಕನ್ನಡ ಬಿಗ್‌ ಬಾಸ್‌ನಲ್ಲಿ ಹೊಸದೇನಲ್ಲ. ಈ ರೀತಿ ಘಟನೆಗಳು ಕನ್ನಡ ಬಿಗ್‌ ಬಾಸ್‌ ನಲ್ಲಿ ಹಿಂದೆಯೂ ನಡೆದಿದೆ.

ಹುಚ್ಚ ವೆಂಕಟ್: ಬಿಗ್‌ ಬಾಸ್‌ ಕನ್ನಡ ಇತಿಹಾಸದಲ್ಲಿ ಹುಚ್ಚ ವೆಂಕಟ್ (Huccha Venkat) ಅವರ ಹಲ್ಲೆಯ ಘಟನೆ ಇಂದಿಗೂ ವೀಕ್ಷಕರಿಗೆ ನೆನಪಿದೆ. ತನ್ನ ಭಾಷೆ, ವ್ಯಕ್ತಿತ್ವ ಹಾಗೂ ನೇರ ನುಡಿಯಿಂದ ಗಮನ ಸೆಳೆದಿದ್ದ ಹುಚ್ಚ ವೆಂಕಟ್ 3ನೇ ಸೀಸನ್ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದರು.

ಮನೆಯೊಳಗೆ ಹೋಗಿದ್ದ ಹುಚ್ಚ ವೆಂಕಟ್ ಕಿಚ್ಚ ಸುದೀಪ್ ಎದುರಲ್ಲೇ ಸಹ ಸ್ಪರ್ಧಿ ರವಿ ಮೂರೂರ್ ಮೇಲೆ ಹಲ್ಲೆ ನಡೆಸಿದ್ದರು. ಇದನ್ನು ನೋಡಿದ ಆಯೋಜಕರು ಕೂಡಲೇ ವೆಂಕಟ್‌ ಅವರನ್ನು ಮನೆಯಿಂದ ಆಚೆ ಕಳುಹಿಸಿದ್ದರು. ಇದಾದ ಬಳಿಕ ವೆಂಕಟ್‌ ನಾಲ್ಕನೇ ಸೀಸನ್‌ ನಲ್ಲಿ ದೊಡ್ಮನೆಗೆ ಅತಿಥಿಯಾಗಿ ಬಂದಿದ್ದರು. ಈ ವೇಳೆ ಅವರು ಅಂದಿನ ಸೀಸನ್‌ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದ ನಟ ಪ್ರಥಮ್ ಅವರ ಮೇಲೆ ಹಲ್ಲೆ ನಡೆಸಿದ್ದರು. ಆ ಕೂಡಲೇ ವೆಂಕಟ್‌ ಹೊರಗೆ ಕರೆದುಕೊಂಡು ಬರಲಾಗಿತ್ತು.

11ನೇ ಸೀಸನ್‌ ಆರಂಭವಾಗುವ ಸಮಯದಲ್ಲಿ ವೆಂಕಟ್‌ ತಮಗೆ ಬಿಗ್‌ ಬಾಸ್‌ ಗೆ ಬರಲು ಒಂದು ಅವಕಾಶ ಕೊಡಿ ಎಂದು ಸುದೀಪ್‌ ಅವರಲ್ಲಿ ವಿಡಿಯೋ ಮೂಲಕ ಮನವಿ ಮಾಡಿದ್ದರು.

ಸಂಯುಕ್ತಾ ಹೆಗ್ಡೆ: ʼಕಿರಿಕ್‌ ಪಾರ್ಟಿʼ ಬೆಡಗಿ ಸಂಯುಕ್ತಾ ಹೆಗ್ಡೆ (Samyuktha Hegde) ವೈಲ್ಡ್ ಕಾರ್ಡ್ ಮೂಲಕ ಬಿಗ್‌ ಬಾಸ್‌ -5ಗೆ ಎಂಟ್ರಿ ಆಗಿದ್ದರು. ಆದರೆ ಮನೆಗೆ ಬಂದ 15 ದಿನಯೊಳಗೆಯೇ ಸಂಯುಕ್ತಾ ಸಹ ಸ್ಪರ್ಧಿಯೊಬ್ಬರ ಮೇಲೆ ಹಲ್ಲೆ ಮಾಡಿದ ಕಾರಣಕ್ಕಾಗಿ ಬಿಗ್‌ ಬಾಸ್‌ ಮನೆಯಿಂದ ಆಚೆ ಬಂದಿದ್ದರು.

ಪ್ರತಿ ದಿನದ ಟಾಸ್ಕ್ ನಂತೆ ಸ್ಪರ್ಧಿಗಳಿಗೆ ಟಾಸ್ಕ್ ವೊಂದನ್ನು ನೀಡಲಾಗಿತ್ತು. ಅದರಂತೆ ಮಹಿಳಾ ತಂಡ ಹಾಗೂ ಪುರುಷ ತಂಡದ ಸ್ಪರ್ಧಿಗಳಿಗೆ ದಾರ ಕಟ್ಟಿದ ಗೋಪುರವನ್ನು ನೀಡಲಾಗಿತ್ತು. ಪುರುಷ ಸ್ಪರ್ಧಿಗಳು ಮಹಿಳಾ ಸ್ಪರ್ಧಿಗಳ ಬಳಿ ಇರುವ ಗೋಪುರದ  ದಾರವನ್ನು ಕತ್ತರಿಯಿಂದ ಕತ್ತರಿಸಬೇಕಿತ್ತು. ಈ ವೇಳೆ ತನ್ನನ್ನು ಸಮೀರ್ ಆಚಾರ್ಯ ಮುಟ್ಟಿದ್ರು ಅಂತ ಸಂಯುಕ್ತ ಅವರ ಮೇಲೆ ಕೈ ಮಾಡಿದ್ದರು. ಅಲ್ಲದೆ ಎರಡು ಬಾರಿ ಅವರಿಗೆ ಹೊಡೆದಿದ್ದರು.

ಇದನ್ನೂ ಓದಿ: Bigg Boss: ವಾರದ ಮಧ್ಯದಲ್ಲೇ ಬಿಗ್‌ ಬಾಸ್‌ನಿಂದ ಎಲಿಮಿನೇಟ್‌ ಆದ ವೀಕ್ಷಕರ ಮೆಚ್ಚಿನ ಸ್ಪರ್ಧಿ

ಸಮೀರ್ ಆಚಾರ್ಯ ಅವರ ಕೆನ್ನೆಗೆ ಬಾರಿಸಿದ್ದ ಇದೇ ವಿಚಾರಕ್ಕೆ ಸಂಯುಕ್ತಾ ಅವರನ್ನು ಬಿಗ್‌ ಬಾಸ್‌ ಮನೆಯಿಂದ ಆಚೆ ಕಳುಹಿಸಲಾಗಿತ್ತು.

ಜಗದೀಶ್‌ – ರಂಜಿತ್:‌ ಇತ್ತೀಚೆಗೆ ಆರಂಭಗೊಂಡಿರುವ ಬಿಗ್‌ ಬಾಸ್‌ ಕನ್ನಡ -11 ಮೊದಲಿನಿಂದಲೂ ಸ್ಪರ್ಧಿಗಳ ನಡುವಿನ ಪೈಪೋಟಿಯಿಂದ ಸದ್ದು ಮಾಡುತ್ತಿದೆ. ಜಗದೀಶ್‌ ಅವರು ತನ್ನ ದೊಡ್ಡ ಧ್ವನಿಯಿಂದ ದೊಡ್ಮನೆಯಲ್ಲಿ ಡಾಮಿನೇಟ್‌ ಆಟವನ್ನು ಆಡುತ್ತಿದ್ದಾರೆ. ಆದರೆ ಅವರ ಮೇಲೆ ದೊಡ್ಮನೆಯ ಎಲ್ಲರೂ ಮುಗಿಬಿದ್ದಿದ್ದಾರೆ. ಉಗ್ರಂ ಮಂಜು, ತಿವಿಕ್ರಮ್‌, ರಂಜಿತ್‌, ಚೈತ್ರಾ ಅವರು ಜಗದೀಶ್‌ ಅವರೊಂದಿಗೆ ವಾಗ್ವಾಕ್ಕೆ ಇಳಿದಿದ್ದಾರೆ.

ಕ್ಯಾಪ್ಟನ್‌ ಶಿಶಿರ್‌ ಅವರು ಎಲಿಮಿನೇಷನ್‌ಗೆ ನಾಮಿನೇಟ್‌ ಮಾಡುವಾಗ ಜಗದೀಶ್‌ ಅವರು ಶಿಶಿರ್‌ ಅವರಿಗೆ ನೀವು ಕೆಲ ಸ್ಪರ್ಧಿಗಳನ್ನು ಟಾರ್ಗೆಟ್‌ ಮಾಡಿ ನಾಮಿನೇಟ್‌ ಮಾಡುತ್ತಿದ್ದೀರಿ ಎಂದಿದ್ದಾರೆ. ಇದಕ್ಕೆ ಉಳಿದ ಸ್ಪರ್ಧಿಗಳು ಜಗದೀಶ್‌ ಅವರ ಮೇಲೆಯೇ ಮುಗಿಬಿದ್ದಿದ್ದಾರೆ. ಮಾನಸ ಅವರ ವಿಚಾರದಲ್ಲಿ ಜಗದೀಶ್‌ ಮಧ್ಯ ಮಾತನಾಡಿದ್ದು, ಈ ವೇಳೆ ರಂಜಿತ್‌ ಅವರೊಂದಿಗೆ ಮಾತಿನ ಚಕಮಕಿ ನಡೆದಿದೆ.

ಕೈ- ಕೈ ಮಿಲಾಯಿಸುವ ಹಂತಕ್ಕೆ ಬಂದಿದ್ದು, ದೈಹಿಕವಾಗಿ ಹಲ್ಲೆ ನಡೆಸಿದ ಕಾರಣಕ್ಕೆ ಕಾರ್ಯಕ್ರಮದ ಮೂಲ ನಿಯಮ ಉಲ್ಲಂಘನೆ ಆಗಿದೆ. ಪರಿಣಾಮ ಬಿಗ್‌ ಬಾಸ್‌ ಇಬ್ಬರನ್ನೂ ಮನೆಯಿಂದ ಆಚೆ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.

ಜಗದೀಶ್‌ ಅವರು ಬಿಗ್‌ ಬಾಸ್‌ನಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದ್ದು, ಅಭಿಮಾನಿಯೊಬ್ಬರ ಜತೆಗೆ ತೆಗೆಸಿಕೊಂಡಿರುವ ಫೋಟೋವೊಂದು ವೈರಲ್‌ ಆಗಿದೆ.

ರಂಜಿತ್‌ ಅವರಿಗೆ ಎಚ್ಚರಿಕೆ ನೀಡಿ ಮತ್ತೆ ಮನೆಯೊಳಗೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ. ಯಾವುದಕ್ಕೂ ಕಾರ್ಯಕ್ರಮ ಪ್ರಸಾರವಾದ ಬಳಿಕವೇ ಅಸಲಿಯತ್ತು ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next