Advertisement

BBK11: ಬಿಗ್ ಬಾಸ್ ‌ಮನೆಯಿಂದ ಹೊರ ಹೋದ ಕೂಡಲೇ ಆಡಿಯೋ ಹರಿಬಿಟ್ಟ ಜಗದೀಶ್ ; ವೈರಲ್

11:25 PM Oct 18, 2024 | Team Udayavani |

ಬೆಂಗಳೂರು: ಬಿಗ್ ಬಾಸ್ (bigg Boss kannada season 11) ಮನೆ ರಣರಂಗದಂತೆ ಕಾವೇರಿದೆ. ಆರೋಪ, ಪ್ರತ್ಯಾರೋಪ ‌ಮಾಡುತ್ತಾ ಸ್ಪರ್ಧಿಗಳು ಕಿತ್ತಾಡಿಕೊಳ್ಳುತ್ತಿದ್ದಾರೆ.

Advertisement

ಹಂಸಾ ಅವರ ಬಗ್ಗೆ ‌ಅವಹೇಳನಕಾರಿಯಾಗಿ ಜಗದೀಶ್ ಮಾತನಾಡಿದರು ಎನ್ನುವ ಕಾರಣಕ್ಕೆ ಚೈತ್ರಾ ಹಾಗೂ ಜಗದೀಶ್ ನಡುವೆ ವೈಯಕ್ತಿಕ ವಿಚಾರಕ್ಕೆ ಜಗಳವೇ ನಡೆದಿದೆ. ಜಗದೀಶ್ ವಿರುದ್ಧ ‌ಮನೆಯ ಸದಸ್ಯರು ತಿರುಗಿ ಬಿದ್ದಿದ್ದಾರೆ.

ನಿಯಮ ಉಲ್ಲಂಘನೆ ಆಗಿರುವ ಕಾರಣಕ್ಕೆ ಬಿಗ್ ಬಾಸ್ ಜಗದೀಶ್, ರಂಜಿತ್ ಮೇಲೆ ಶಿಸ್ತು ಕ್ರಮ ಕೈಗೊಂಡಿದ್ದಯ ಮನೆಯಿಂದ ಹೊರಗೆ ಹೋಗಲು ಹೇಳಿದ್ದಾರೆ.

ಜಗದೀಶ್ ಔಟ್ ಆದದಕ್ಕೆ ಸಂಭ್ರಮ ಪಟ್ಟ ಮನೆಮಂದಿ:
ಜಗದೀಶ್ ಅವರನ್ನು ಹೊರಗೆ ಕಳುಹಿಸಿದ ಬಳಿಕ ಎಲ್ಲಾ ಸ್ಪರ್ಧಿಗಳು ಹರ್ಷ ವ್ಯಕ್ತಪಡಿಸಿ ಥ್ಯಾಂಕ್ಯೂ ಎಂದು ಹೇಳಿದ್ದಾರೆ. ಮನೆಯಿಂದ ಒಂದು ತೂಕ ಹೋಯಿತು ಎಂದು ಕೆಲವರು ಹೇಳಿದ್ದಾರೆ.

ಹೆಣ್ಮಕ್ಕಳಿಗೆ ಯಾರು ಗೌರವ ಕೊಡಲ್ವೋ ಅವರಿಗೆಲ್ಲ ಇದೆ ರೀತಿ ಆಗೋದು ಎಂದು ಗೌತಮಿ, ಜಗದೀಶ್ ಅವರ ಬಗ್ಗೆ ಹೇಳಿದ್ದಾರೆ.

Advertisement

ರಂಜಿತ್ ಔಟ್ ಕಣ್ಣೀರಿಟ್ಟ ಸಹ ಸ್ಪರ್ಧಿಗಳು:
ರಂಜಿತ್ ಅವರನ್ನು ಹೊರಗೆ ಹೋಗಲು ಹೇಳಿದಾಗ ಸಹ ಸ್ಪರ್ಧಿಗಳು, ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಅವರು ಉದ್ದೇಶಪೂರ್ವಕವಾಗಿ ಮಾಡಿದಲ್ಲ. ದಯವಿಟ್ಟು ಒಂದು ಅವಕಾಶ ‌ನೀಡಿ ಎಂದು ಸಹ ಸ್ಪರ್ಧಿಗಳು ಮನವಿ ಮಾಡಿ ರಂಜಿತ್ ಅವರನ್ನು ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ.

ಬಿಗ್ ನಿಮ್ಮ ಒಂದು ನಿರ್ಧಾರ ಸರಿ ಇರುತ್ತದೆ ಮತ್ತೊಂದು ‌ನಿರ್ಧಾರ ತಪ್ಪಾಗಿರುತ್ತದೆ ಎಂದ ಮಾನಸ, ಬಿಗ್ ಬಾಸ್ ನಿರ್ಧಾರಕ್ಕೆ  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಬ್ಬರು ಮನೆಯಿಂದ ಹೊರಹೋದ ನಂತರ ಮನೆಮಂದಿ ಜಗದೀಶ್, ರಂಜಿತ್ ಅವರ ಬಟ್ಟೆಗಳನ್ನು ಪ್ಯಾಕ್ ಮಾಡಿ, ಲಗೇಜ್ ಕಳುಹಿಸಿ ಕೊಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಯಾರು ಕುತಂತ್ರಿ, ಅಪ್ರಾಮಾಣಿಕ?:
ಇನ್ನು ಬಿಗ್ ಬಾಸ್ ಮನೆಯ ಮೂರು ವಾರದ ಆಟವನ್ನು ಯಾರು ಪ್ರಾಮಾಣಿಕವಾಗಿ ಆಡಿದ್ದಾರೆ. ಯಾರು ಕುತಂತ್ರದಿಂದ ಇರುವುದು ಎನ್ನುವುದು ಸ್ಪರ್ಧಿಗಳು ಒಬ್ಬೊಬ್ಬರ ತಲೆಗೆ ಆಯಾ ನಾಮದ ಟೇಪ್ ಹಚ್ಚಿ ಕಾರಣವನ್ನು ನೀಡಿದ್ದಾರೆ.

ಅಪ್ರಾಮಾಣಿಕ: ಚೈತ್ರಾ, ತಿವಿಕ್ರಮ್, ಧನರಾಜ್, ಶಿಶಿರ್, ಮಾನಸ, ಐಶ್ವರ್ಯಾ

ಕುತಂತ್ರಿ: ಭವ್ಯಾ ಗೌಡ, ಗೋಲ್ಡ್ ಸುರೇಶ್, ಚೈತ್ರಾ, ಮೋಕ್ಷಿತಾ, ಮಂಜು

ಶಿಶಿರ್ ಅವರು ಅತೀ ಹೆಚ್ಚು ಹಣೆಪಟ್ಟಿ ಪಡೆದ ಸ್ಪರ್ಧಿಗಳನ್ನು ಜೈಲು ವಾಸಕ್ಕೆ ಕಳುಹಿಸಿದ್ದಾರೆ. ಇದರ ಅನುಸಾರ ಚೈತ್ರಾ ಅವರು ಜೈಲುವಾಸಕ್ಕೆ ಹೋಗಿದ್ದಾರೆ.

ಫೈನಲ್ ನಾಮಿನೇಷನ್ ನಲ್ಲಿರುವವರು:
ಗೋಲ್ಡ್ ಸುರೇಶ್, ಉಗ್ರಂ ಮಂಜು , ಐಶ್ವರ್ಯಾ, ಧನರಾಜ್, ಮಾನಸ, ಮೋಕ್ಷಿತಾ, ಅನುಷಾ ಅವರು ಅಂತಿಮ ನಾಮಿನೇಟ್ ನಲ್ಲಿದ್ದಾರೆ.

ಬಿಗ್ ಬಾಸ್ ಜಗದೀಶ್ ಹೋಗಿರುವುದು ಕನ್ಫರ್ಮ್:
ಬಿಗ್ ಬಾಸ್ ಜಗದೀಶ್ ಹೋಗಿದ್ದಾರಾ ಇಲ್ವೋ ಎನ್ನುವ ಪ್ರಶ್ನೆ ಹಲವರನ್ನು ಈಗಲೂ ಕಾಡುತ್ತಿದೆ. ಜಗದೀಶ್ ಅವರು ಹೊರಗೆ ಹೋಗಿರುವುದು ಕನ್ಪರ್ಮ್ ಆಗಿದೆ. ಅವರು ಕಳುಹಿಸಿದ್ದಾರೆ ಎನ್ನಲಾದ ಆಡಿಯೊವೊಂದು ಸಾಮಾಜಿಕ ಜಾಲತಾಣದ ವೈರಲ್ ಆಗಿದೆ.

ಜಗದೀಶ್ ಆಡಿಯೋ ವೈರಲ್:
“ಬಿಗ್‌ಬಾಸ್ ಒಬ್ಬ ವ್ಯಕ್ತಿಯ ಜೀವನವನ್ನು ತೋರಿಸುವಂತಹ ನಾನು ಸಹ ಅಲ್ಲಿ ಸ್ಪರ್ಧಿಸಿದಾಗ ನನ್ನ ನಿಜವಾದ ಮುಖ ನೋಡಿ ನನಗೆ ಆಶ್ವರ್ಯ ಆಯ್ತು. ನನ್ನಲ್ಲಿ ಅಡಗಿದಂತಹ ಪ್ರತಿಭೆ ಆಗಿರಬಹುದು, ಕೋಪ ಆಗಿರಬಹುದು ಎಲ್ಲವೂ ನೋಡಿದ್ದೇನೆ. ನಿಜವಾಗಲೂ ನಾವು ಅದೃಷ್ಟವಂತರು. ಎಷ್ಟೋ ಕೋಟಿಗಳ ಮಧ್ಯೆ ಬಿಗ್‌ಬಾಸ್‌ನಲ್ಲಿ ಭಾಗವಹಿಸುವುದಕ್ಕೆ ನನಗೆ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಅಂದುಕೊಳ್ಳಬಹುದು. ಅದನ್ನು ವಿಭಿನ್ನವಾಗಿ ತೋರಿಸವಂತಹ ಮೀಡಿಯಾ. ಎಂಜಾಯ್ ಮಾಡುವಂತಹ ನಮ್ಮ ವೀಕ್ಷಕರು, ನಮ್ಮ ಅಭಿಮಾನಿ ದೇವರುಗಳು ಕೋಟಿ ಕೋಟಿ ನಮನಗಳು. ನಾನು ಬಿಗ್ ಬಾಸ್ ಮಿಸ್ ಮಾಡಿಕೊಳ್ತೇನೆ”ಎಂದು ಆಡಿಯೋದಲ್ಲಿ ಹೇಳಿದ್ದಾರೆ.

ನನ್ನ ಹೀರೋ ಸುದೀಪ್. ಬಿಗ್‌ಬಾಸ್ ಮನೆಯಲ್ಲಿ ಕೊನೆಯ ದಿನ ನಡೆದ ಘಟನೆ ಬಗ್ಗೆ ರಂಜಿತ್, ಮಾನಸ ಸೇರಿದಂತೆ ಎಲ್ಲರ ಬಳಿ ಜಗದೀಶ್ ಅವರು ಕ್ಷಮೆ ಕೇಳಿರುವುದು ಆಡಿಯೋದಲ್ಲಿದೆ.

ನೀವೆಲ್ಲ ಚಿಕ್ಕ ವಯಸ್ಸಿನಲ್ಲೇ ಅದ್ಭುತ ಕಲಾವಿದರು. ನಿಮ್ಮ ಜೊತೆ ಒಬ್ಬನಾಗಿ ನಗಲು ಪ್ರಯತ್ನ ಪಟ್ಟಿದ್ದೇನೆ. ಈ‌ ನಿಟ್ಟಿನಲ್ಲಿ ನನ್ನಿಂದ ಕೆಲ ತಪ್ಪುಗಳು ಆಗಿವೆ. ಅದು ಮನರಂಜನೆಯ ಒಂದು ಭಾಗ ಅಷ್ಟೇ. ವೈಯಕ್ತಿಕ ದ್ವೇಷ ಯಾವುದೂ ಇಲ್ಲ ಎಂದು ಅವರು ಹೇಳಿದ್ದಾರೆ.

ನೂರಾರು ಕ್ಯಾಮರಾ, ಸಾವಿರಾರು ಬಿಗ್ ಬಾಸ್ ಸಿಬ್ಬಂದಿಗಳು, ಆ ನಿರ್ದೇಶಕ, ಮಾಂತ್ರಿಕ ತಂತ್ರಜ್ಞರು ಅವರ 24/7 ಡೆಡಿಕೇಷನ್ ಹಾಗೂ 20 ಕೋಟಿಗೂ ಹೆಚ್ಚಿನ ಬಿಗ್ ಬಾಸ್ ಅಭಿಮಾನಿ ದೇವರಗಳ ಆಶೀರ್ವಾದ ಈ ಹೊಸ ಕರ್ನಾಟಕ ಕ್ರಶ್ ಲಾಯರ್ ಜಗದೀಶ್ ಆಗಿದ್ದಾನೆ. ‌ನಿಮ್ಮ ಪ್ರತಿಯೊಂದು ಚಪ್ಪಾಳೆ, ಸಂದೇಶ, ನಿಮ್ಮ ಆಶೀರ್ವಾದ ನನ್ನ ಬಿಗ್ ಬಾಸ್ ಪಯಣ ಯಶಸ್ಸು ಅದು ನೀವು ಇಟ್ಟ ನಂಬಿಕೆ. ಮತ್ತೊಮ್ಮೆ ಕೋಟಿ ಕೋಟಿ ನಮನ. ಸಾರ್ಥಕ ಆಯಿತು. ನನ್ನ ಈ ಹುಟ್ಟು, ಈ ಪ್ರೀತಿ, ನನ್ನ ಗೆಲುವಿಗೆ ನೀವು ಕೊಟ್ಟ ಆ ಒಡನಾಟ, ನನ್ನ ಬಳಿ ಪದಗಳು ಕಡಿಮೆ, ವಿಶ್ಲೇಷಣೆ ಮಾಡಲು ಎಂದಿದ್ದಾರೆ.

ಇದಲ್ಲದೆ ಅವರು ತಮ್ಮ ಸಾಮಾಜಿಕ ಜಾಲತಾಣಲ್ಲಿ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next