Advertisement

BBK11: ಜಗದೀಶ್‌ ಬಿಗ್‌ ಬಾಸ್‌ನಿಂದ ಆಚೆ ಬಂದಿರುವುದು ನಿಜವೇ? ಪತ್ನಿ ಹೇಳಿದ್ದೇನು?

12:57 PM Oct 17, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ (Bigg Boss Kannada-11) ಕಾರ್ಯಕ್ರಮದಲ್ಲಿ ಆಟಕ್ಕಿಂತ ಜಗಳವೇ ದೊಡ್ಡ ಸುದ್ದಿಯಾಗಿ ಸದ್ದು ಮಾಡುತ್ತಿದೆ. ಸ್ಪರ್ಧಿಗಳ ನಡುವಿನ ಕಿತ್ತಾಟ ತಾರಕಕ್ಕೇರಿದೆ.

Advertisement

ಸದ್ಯ ಬಿಗ್‌ ಬಾಸ್‌ ಮನೆಯಲ್ಲಿ ಲಾಯರ್‌ ಜಗದೀಶ್‌ (Lawyer Jagadish) ಅವರು ಒಂಟಿ ಸಲಗದಂತೆ ಅಬ್ಬರಿಸುತ್ತಿದ್ದಾರೆ. ಅವರ ಎದುರಿಗೆ ಇರುವವರು ತೋಳ – ನರಿಗಳಂತೆ ಎಂದು ನೆಟ್ಟಿಗರು ಜಗದೀಶ್‌ ಅವರ ಪರವಾಗಿ ಬ್ಯಾಟ್‌ ಬೀಸುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಜಗದೀಶ್‌ ಅವರಿಗೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ.

ಆದರೆ ಬಿಗ್‌ ಬಾಸ್‌ ಮನೆಯಲ್ಲಿ ಹೊಡೆದಾಡಿಕೊಂಡ ಹಿನ್ನೆಲೆಯಲ್ಲಿ ಜಗದೀಶ್‌ ಹಾಗೂ ರಂಜಿತ್‌ ಅವರನ್ನು ಮನೆಯಿಂದ ಆಚೆ ಕಳುಹಿಸಲಾಗಿದೆ ಎನ್ನುವ ವಿಚಾರ ನಿನ್ನೆಯಿಂದ ಭಾರೀ ಸದ್ದು ಮಾಡುತ್ತಿದೆ.

ಹೆಣ್ಮಕ್ಕಳ ಬಗ್ಗೆ ಜಗದೀಶ್‌ ಅವರು ಅಸಭ್ಯವಾಗಿ ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ರಂಜಿತ್‌ ಜಗದೀಶ್‌ ಅವರ ಮೇಲೆ ರೇಗಾಡಿದ್ದು, ಇಬ್ಬರು ಮುಖಾಮುಖಿ ಆದಾಗ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಈ ವೇಳೆ ಬಿಗ್‌ ಬಾಸ್‌ ನಿಯಮದ ಉಲ್ಲಂಘನೆ ಬಗ್ಗೆ ಪ್ರಸ್ತಾಪಿಸಿ, ಇಬ್ಬರನ್ನು ಮೆನಯಿಂದ ಆಚೆ ಕಳುಹಿಸಿದ್ದಾರೆ ಎನ್ನಲಾಗಿದೆ.

Advertisement

ಜಗದೀಶ್‌ ಹೊರಗೆ ಹೋಗಿರುವುದು ನಿಜವೇ? ಪತ್ನಿ ಹೇಳಿದ್ದೇನು? : ಬಿಗ್‌ ಬಾಸ್‌ ಮನೆಯಿಂದ ಜಗದೀಶ್‌ ಅವರು ಹೊರಗೆ ಹೋಗಿದ್ದಾರೆ ಎನ್ನಲಾಗಿದೆ. ಆದರೆ ಅವರು ಮನೆಗೆ ಇದುವರೆಗೆ ಬಂದಿಲ್ಲ ಎನ್ನಲಾಗಿದೆ. ಹಾಗಾದ್ರೆ ಅವರನ್ನು ಮತ್ತೆ ಬಿಗ್‌ ಬಾಸ್‌ ಮನೆಯೊಳಗೆ ಕಳುಹಿಸಲಾಗಿದೆಯೇ? ಎನ್ನುವ ಪ್ರಶ್ನೆ ಮೂಡಿದೆ.

ಈ ಬಗ್ಗೆ ಸ್ವತಃ ಜಗದೀಶ್‌ ಅವರ ಪತ್ನಿಯೇ ಮಾತನಾಡಿದ್ದಾರೆ. ಈ ಬಗ್ಗೆ ಪತ್ನಿ ʼಜೀ ಕನ್ನಡ ನ್ಯೂಸ್‌ʼ ಜತೆ ಮಾತನಾಡಿರುವ ಸೌಮ್ಯ ಜಗದೀಶ್‌ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಪತಿಯನ್ನು ಮನೆಯಲ್ಲಿನ ಉಳಿದ ಸ್ಪರ್ಧಿಗಳು ಟಾರ್ಗೆಟ್‌ ಮಾಡುತ್ತಿದ್ದಾರೆ. ಅವರು ಮನೆಯಲ್ಲಿ ಹೆಚ್ಚಿನ ಕಂಟೆಂಟ್‌ ನೀಡುತ್ತಿರುವ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದು ವೀಕ್ಷಕರ ಕಣ್ಣಿಗೆ ಕಾಣುತ್ತಿದೆ. ಎಲ್ಲರೂ ಒಂದಾಗಿ ಅವರನ್ನು ಒಂಟಿ ಮಾಡುತ್ತಿದ್ದಾರೆ ಎಂದಿದ್ದಾರೆ.

ಜಗದೀಶ್‌ ಹೊರಗೆ ಬಂದಿರುವ ಬಗ್ಗೆ ನನಗೇನೂ ಗೊತ್ತಿಲ್ಲ. ಜಗದೀಶ್‌ ಮನೆಗೆ ಬಂದಿಲ್ಲ.  ಅವರು ಹೊರ ಬಂದಿದ್ದಾರೋ ಅಲ್ಲೆಯೇ ಇದ್ದಾರೋ ತಿಳಿದಿಲ್ಲ. ಬಿಗ್‌ ಬಾಸ್‌ ಟೀಮ್‌ ಕಡೆಯಿಂದ ಯಾವುದೇ ಕಾಲ್‌ ಬಂದಿಲ್ಲ. ಈ ಬಗ್ಗೆ ನಾನು ಸಹ ಸುದ್ದಿ ಮತ್ತು ಸೋಷಿಯಲ್‌ ಮೀಡಿಯಾ ಮೂಲಕವೇ ತಿಳಿದುಕೊಂಡಿದ್ದು ಎಂದು ಅವರು ಹೇಳಿದ್ದಾರೆ.

ಹೆಣ್ಮಕ್ಕಳ ಬಗ್ಗೆ ಜಗದೀಶ್ ಮಾತು; ಇಡೀ ಮನೆಯೇ ಗರಂ:
ಹೆಣ್ಮಕ್ಕಳ ‌ಬಗ್ಗೆ ಮಾತನಾಡುವಾಗ ಎಚ್ಚರವೆಂದು ಗೋಲ್ಡ್ ಸುರೇಶ್ ಅವರು ಹೇಳಿದಾಗ, ಜಗದೀಶ್ ಮಾತನಾಡ್ತೀನಿ ನೀನ್ಯಾರೋ ಕೇಳೋಕೆ ಎಂದಿದ್ದಾರೆ. ಈ ವೇಳೆ ಚೈತ್ರಾ ಅವರೊಂದಿಗೂ ಜಗದೀಶ್ ವಾಗ್ವಾದಕ್ಕೆ ಇಳಿದಿದ್ದಾರೆ. ಇತ್ತ ಹಂಸಾ ಅವರು ಇಲ್ಲಿ ಏನೆಲ್ಲ ಹೇಳಿಸಿಕೊಳ್ಳೋಕ್ಕೆ ನಾವು ರೆಡಿಯಿಲ್ಲ. ನಿನ್ನ ಅಪ್ಪನಿಗೆ ಹುಟ್ಟಿದರೆ ಬಾ ಎಂದು ಚೈತ್ರಾ ಸವಾಲು ಎಸೆದಿರುವುದನ್ನು ತೋರಿಸಲಾಗಿದೆ.

ಆ ಪದ ಉಪಯೋಗಿಸಿದ್ದೀರಾ ಇಲ್ವಾ? ಎಂದು ಚೈತ್ರಾ ಜಗದೀಶ್ ಗೆ ಪ್ರಶ್ನೆ ಮಾಡಿದ್ದಾರೆ. ತಾಕತ್ತಿದ್ರೆ ಏನೂ ಬೇಕೋ ಅದನ್ನು ಮಾಡ್ಕೋ ಹೋಗು ಎಂದು ಮರು ಪ್ರಶ್ನೆ ಹಾಕಿದ್ದಾರೆ.

ಸೀರೆ ಕೊಡ್ತೀನಿ ಹಾಕ್ಕೋ ಎಂದು ಮಾನಸ ಜಗದೀಶ್ ಗೆ ಹೇಳಿದ್ದಾರೆ. ಸೀರೆ ಏನಕ್ಕೆ ಹೆಣ್ಣು ಆಗೋಕ್ಕೂ ಈತನಿಗೆ ಯೋಗ್ಯತೆ ಇಲ್ಲ ಎಂದು ಹಂಸಾ ಗರಂ ಆಗಿರುವುದನ್ನು ತೋರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next