Advertisement

BBK11: ಯಾವ್ ಸೀಮೆ ಕ್ಯಾಪ್ಟನ್ ರೀ ನೀವು.. ಹಂಸಾ ಮೇಲೆ ನರಕ ವಾಸಿಗಳ ಕೂಗಾಟ

10:54 AM Oct 09, 2024 | Team Udayavani |

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ (Bigg Boss Kannada-11) ಎರಡನೇ ವಾರದ ಟಾಸ್ಕ್ ಗಳು ಆರಂಭವಾಗಿದೆ. ಟಾಸ್ಕ್ ಗಳ ಸ್ಪರ್ಧಿಗಳ ಗೇಮಿಂಗ್ ಸ್ಟಾರ್ಟಜಿ ಕೂಡ ಜೋರಾಗಿಯೇ ಸದ್ದು ಮಾಡುತ್ತಿದೆ.

Advertisement

ಸ್ವರ್ಗ ಹಾಗೂ ನರಕ ನಿವಾಸಿಗಳ ಪೈಕಿ ತಲಾ ನಾಲ್ವರು ಗೊಬ್ಬರದ ಅಬ್ಬರ ಎನ್ನುವ ಟಾಸ್ಕ್ ಗಳನ್ನು ಆಡಲಿದ್ದಾರೆ‌. ಇದರಲ್ಲಿ ಕಾಲು ಹಾಗೂ ಕೈಗೆ ಹಗ್ಗ ಕಟ್ಟಿಕೊಂಡು ಬಣ್ಣದ ಚೆಂಡುಗಳನ್ನು ತಳ್ಳಿ ಹಾಕಿಕೊಂಡೇ ತಮಗೆ ಮೀಸಲಿರುವ ಜಾಗದಲ್ಲಿ ಹಾಕಬೇಕು.

ಈ ಟಾಸ್ಕ್ ನ ಉಸ್ತುವಾರಿಯನ್ನು ಕ್ಯಾಪ್ಟನ್ ಹಂಸಾ ಅವರು ವಹಿಸಿಕೊಂಡಿದ್ದಾರೆ. ಚೆಂಡುಗಳನ್ನು ತಳ್ಳಿಕೊಂಡು ಹೋಗಬೇಕೆನ್ನುವ ನಿಯಮವಿದ್ದರೂ ಸ್ವರ್ಗ ವಾಸಿಗಳು ಜಂಪ್ ಮಾಡಿಕೊಂಡು ಚೆಂಡನ್ನು ಹಾಕಿದ್ದಾರೆ. ಇದನ್ನು ಗಮನಿಸಿಯೂ ಏನು ಕ್ರಮಕೈಗೊಳ್ಳದ ಹಂಸಾ ಮೇಲೆ ನರಕವಾಸಿಗಳು ರೇಗಾಡಿದ್ದಾರೆ.

ಕಣ್ಣಿಲ್ವಾ ನಿನಗೆ ನೋಡೋಕೆ. ಊಟ ಮಾಡೋಕೆ ಇದ್ರೆ ಅವರ ಮನೆಗೆ ಹೋಗಿ ಖುಣ ತೀರಿಸಿ. ಆಟದಲ್ಲಿ ಅಲ್ಲ ಎಂದು ಜಗದೀಶ್ ಕೂಗಾಡಿದ್ದಾರೆ. ಇನ್ನು ಚೈತ್ರಾ ಕ್ಯಾಪ್ಟನ್ ಹಂಸಾ ಮೇಲೆ ಗರಂ ಆಗಿದ್ದು ಯಾವ್ ಸೀಮೆ ಕ್ಯಾಪ್ಟನ್ ನೀವು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಬಿಗ್ ಬಾಸ್ ಇನ್ಮುಂದೆ ನಾವು ಯಾವ್ ಗೇಮ್ ಆಡಲ್ಲ. ಮೋಸ, ಅನ್ಯಾಯವೆಂದು ಸುರೇಶ್ ಹೇಳಿದ್ದಾರೆ.

ನಿಯಮ ಉಲ್ಲಂಘನೆ; ಸ್ಪರ್ಧಿಗಳಿಗೆ ಶಾಕ್ ಕೊಟ್ಟಒಂದು ತ್ ಬಾಸ್:

ಟಾಸ್ಕ್ ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಹಾಕಿದ್ದ ಬಿಳಿ ಬಣ್ಣದ ಪರೆದಯನ್ನು ಸ್ಪರ್ಧೆಯೊಬ್ಬರು ಇಣುಕಿ ನೋಡಿದ ಪರಿಣಾಮ ಬಿಗ್ ಬಾಸ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಇಡೀ ಮನೆಗೆ ಬಿಗ್ ಬಾಸ್ ನಾಮಿನೇಟ್ ಶಿಕ್ಷೆಯನ್ನು ನೀಡಿದ್ದಾರೆ.

ಸುರೇಶ್ ಅವರು ಪರದೆ ಆಚೆ ರೆಡಿಯಾಗುತ್ತಿರುವ ಸ್ಪರ್ಧೆಯನ್ನು ‌ನೋಡಿ ಬಾ ಎಂದು ಮಾನಸ ಅವರಿಗೆ ಹೇಳಿದ್ದಾರೆ. ಮಾನಸ ಹೋದ ಬಳಿಕ ಜಗದೀಶ್ ಕೂಡ ಪರದೆ ಆಚೆ ಹೋಗಿದ್ದಾರೆ. ಇದಕ್ಕೂ ಮೊದಲು ಶಿಶಿರ್, ಮೋಕ್ಷಿತಾ ಅವರು ಪರದೆ ಆಚೆ ಇಣುಕಿ ನೋಡಿದ್ದಾರೆ. ಆ ಮೂಲಕ ಮುಖ್ಯವಾದ ನಿಯಮದ ಉಲ್ಲಂಘನೆ ಆಗಿದೆ.

ಕ್ಯಾಪ್ಟನ್ ಇದನ್ನು ನೋಡಿಯೂ ಯಾವ ಕ್ರಮವನ್ನು ತೆಗೆದುಕೊಳ್ಳದೆ ಇರುವುದರಿಂದ ಮನೆಯ ಎಲ್ಲರನ್ನೂ ನಾಮಿನೇಟ್ ಮಾಡಿದ್ದಾರೆ. ಕ್ಯಾಪ್ಟನ್ ಹಂಸಾ ಅವರಿಗೆ ಶಿಕ್ಷೆ ಕೊಟ್ಟು ಎಚ್ಚರಿಕೆ ಕೊಟ್ಟಿದ್ದಾರೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ಯಾಪ್ಟನ್ ಒಬ್ಬರ ವಿಶೇಷ ಅಧಿಕಾರ ಇದರಿಂದ ಕಳೆದುಕೊಂಡಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next