Advertisement

BBK11: ಈ ವಾರ ಮನೆಯಿಂದ ಯಾರು ಹೋಗಲ್ಲ.. ಕಾರಣವೇನು?

01:37 PM Oct 13, 2024 | Team Udayavani |

ಬೆಂಗಳೂರು: ಬಿಗ್‌ಬಾಸ್‌  ಕನ್ನಡ -11(Bigg Boss Kannada-11) ದೊಡ್ಮನೆ ಆಟ ಎರಡನೇ ವಾರ ಮುಕ್ತಾಯ ಕಂಡು ಮೂರನೇ ವಾರದತ್ತ ಕಾಲಿಡುತ್ತಿದೆ.

Advertisement

ದಿನ ಕಳೆದಂತೆ ದೊಡ್ಮನೆ ರಂಗೇರುತ್ತಿದೆ. ಸ್ವರ್ಗ – ನರಕದಲ್ಲಿ ಮನೆ ಈಗ ಒಂದೇ ಬಾಗಿಲಿನ ಮನೆಯಾಗಿದೆ. ಎಲ್ಲ ಸ್ಪರ್ಧಿಗಳು ಸ್ವರ್ಗದಲ್ಲೇ ಇದ್ದಾರೆ. ನಿಜವಾದ ಸ್ವರ್ಗ ನರಕ ನೀವು ಬದುಕುವ ರೀತಿಯಲ್ಲಿದೆ. ನಿಮ್ಮ ದೃಷ್ಟಿಕೋನದಲ್ಲಿ. ಈ‌ ಮನೆ  ಒಂದಾಗುವ ಸಮಯ ಬಂದಿದೆ. ಒಂದಾದ ಮನೆ ಸ್ವರ್ಗವಾಗಿ ಇರುತ್ತಾ, ನರಕವಾಗಿ ಉಳಿಯುತ್ತದೆ ಎನ್ನುವುದು ನಿಮ್ಮ ಕೈಯಲ್ಲಿದೆ ಎಂದು ಬಿಗ್ ಬಾಸ್ ಹೇಳಿದ್ದಾರೆ ‌.

ಎರಡನೇ ವಾರದಲ್ಲಿ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಢವ ಢವ ಶುರುವಾಗಿದೆ.

ಕಿಚ್ಚ ಪಂಚಾಯ್ತಿಯಲ್ಲಿ  ಸ್ಪರ್ಧಿಗಳಿಗೆ ಪಾಪದ ಪ್ರಾಯಶ್ಚಿತ ಹಾಗೂ ಪ್ರಾಮಾಣಿಕತೆಯ ಪಾಠವನ್ನು ಮಾಡಲಾಗಿದೆ. ಇನ್ನು ಸ್ಪರ್ಧಿಗಳು ಮನೆಯಲ್ಲಿ ಹೇಗಿದ್ದಾರೆ? ಎನ್ನುವುದನ್ನು ಜನರಿಂದ ಬಂದ ಪತ್ರದ ಮೂಲಕ ತಿಳಿಸಲಾಗಿದೆ.

Advertisement

ಈ ನಡುವೆ ಈ ವಾರ ಯಾರು ಮನೆಯಿಂದ ಹೊರಹೋಗುತ್ತಾರೆ ಎನ್ನುವ ಪ್ರಶ್ನೆ ಕಾಡಿದೆ. ಭವ್ಯಾ ಗೌಡ, ಧನರಾಜ್, ಧರ್ಮ ಕೀರ್ತಿರಾಜ್​, ರಂಜಿತ್, ತ್ರಿವಿಕ್ರಂ, ಮಾನಸಾ, ಐಶ್ವರ್ಯಾ, ಗೋಲ್ಡ್ ಸುರೇಶ್, ಹಂಸಾ, ಜಗದೀಶ್, ಅನುಷಾ ರೈ ನಾಮಿನೇಟ್‌ ಆಗಿದ್ದಾರೆ.

ಈ ವಾರ ಎಲಿಮಿನೇಷನ್ ಇಲ್ಲ..‌  ಮೂಲಗಳ ಪ್ರಕಾರ ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಎಲಿಮಿನೇಷನ್‌ ಇರಲ್ಲ ಎನ್ನಲಾಗಿದೆ. ಪ್ರತಿ ಸೀಸನ್‌ನಲ್ಲಿ ಒಂದು ವಾರ ಎಲಿಮಿನೇಷನ್‌ ಇರುವುದಿಲ್ಲ. ಕೆಲವೊಮ್ಮೆ ಸ್ಪರ್ಧಿಗಳನ್ನು ಸೀಕ್ರೆಟ್‌ ರೂಮ್‌ ನಲ್ಲಿ ಕೂರಿಸಿ ಆ ಬಳಿಕ ಎಲಿಮಿನೇಷನ್‌ ಇಲ್ಲವೆಂದು ಹೇಳಲಾಗುತ್ತದೆ.

ಈ ಬಾರಿ ನವರಾತ್ರಿ ವಾರ ಆದ ಕಾರಣ ಎಲಿಮಿನೇಷನ್‌ ಇರಲ್ಲವೆಂದು ಹೇಳಲಾಗುತ್ತಿದೆ. ಆ ಮೂಲಕ ಸ್ಪರ್ಧಿಗಳಿಗೆ ಸರ್ಪೈಸ್‌ ನೀಡಲಾಗುತ್ತದೆವೆಂದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next