Advertisement

Bigg Boss Kannada 11: ಚೈತ್ರಾ ಕುಂದಾಪುರರನ್ನು ಹೊರಗಿಡಿ; ಭೋಜರಾಜ್ ಆಗ್ರಹ

04:45 PM Oct 03, 2024 | Shreeram Nayak |

ಸಾಗರ: ಖಾಸಗಿ ವಾಹಿನಿಯ ಬಿಗ್ ಬಾಸ್ ಸೀಸನ್ 11 ಕಾರ್ಯಕ್ರಮದಿಂದ ಚೈತ್ರಾ ಕುಂದಾಪುರ ಅವರನ್ನು ಹೊರಗಿಡಿ ಎಂದು ನ್ಯಾಯವಾದಿ ಕೆ.ಎಲ್.ಭೋಜರಾಜ್ ಒತ್ತಾಯಿಸಿದ್ದಾರೆ.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೈತ್ರಾ ಅವರನ್ನು ಕಾರ್ಯಕ್ರಮದಿಂದ ತೆಗೆದುಹಾಕದೆ ಹೋದಲ್ಲಿ ವಾಹಿನಿ ವಿರುದ್ಧ ಕಾನೂನು ಸಮರ ಹೂಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಚೈತ್ರಾ ಅವರನ್ನು ಮೇರುನಟ ಸುದೀಪ್ ಹಿಂದೂ ಫೈರ್ ಬ್ರಾಂಡ್ ಎಂದು ಹೊಗಳಿರುವುದು ದುರದೃಷ್ಟಕರ. ಅವರ ಮೇಲೆ 11 ಪ್ರಕರಣ ವಿವಿಧ ಠಾಣೆಯಲ್ಲಿ ದಾಖಲಾಗಿದೆ.

ಗೋವಿಂದ ಬಾಬು ಪೂಜಾರಿ ಎಂಬುವವರಿಗೆ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುತ್ತೇನೆ ಎಂದು ಐದು ಕೋಟಿ ರೂ. ಪಡೆದಿದ್ದಾರೆ. ಇದೀಗ 3.50 ಕೋಟಿ ರೂ. ವಾಪಾಸ್ ಕೊಡಿಸಲಾಗಿದ್ದು, ಎಫ್‌ಐಆರ್ ಕೂಡ ದಾಖಲಾಗಿದ್ದು 800 ಪುಟಗಳ ಚಾರ್ಜ್‌ಶೀಟ್ ಮಾಡಲಾಗಿದೆ.

ಕುಂದಾಪುರ ತಾಲೂಕಿನ ಜನರು ಚೈತ್ರಾ ಹೆಸರಿನ ಪಕ್ಕದಲ್ಲಿರುವ ಕುಂದಾಪುರ ಹೆಸರು ಬಳಸದಂತೆ ಪ್ರತಿಭಟನೆ ಸಹ ನಡೆಸಿದ್ದಾರೆ ಎಂದು ಹೇಳಿದ್ದಾರೆ.

Advertisement

ಅನೇಕ ಆರೋಪಗಳನ್ನು ತಮ್ಮ ಮೇಲೆ ಇರಿಸಿಕೊಂಡಿರುವ ಚೈತ್ರಾ ಕುಂದಾಪುರ ಅವರನ್ನು ಖಾಸಗಿ ವಾಹಿನಿ ತನ್ನ ಟಿಆರ್‌ಪಿಗಾಗಿ ಬಿಗ್‌ಬಾಸ್ ಸೀಸನ್ -11ರಲ್ಲಿ ಮೂರನೇ ಸ್ಪರ್ಧಿಯಾಗಿ ಸೇರಿಸಿಕೊಂಡಿರುವುದು, ಅವರನ್ನು ಚಿತ್ರನಟ ಸುದೀಪ್ ಹೊಗಳಿ ಅಟ್ಟಕ್ಕೇರಿಸುತ್ತಿರುವುದು ವ್ಯವಸ್ಥೆಯ ದುರಂತವಾಗಿದೆ. ಇಂತಹ ಘಟನೆಗಳಿಂದಾಗಿ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ತಪ್ಪು ಮಾಡಿದವರು ವಿಜೃಂಭಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ. ನಾವು ಸಹ ಅನೇಕ ವರ್ಷಗಳಿಂದ ಬಿಗ್‌ಬಾಸ್ ಅಭಿಮಾನಿಯಾಗಿದ್ದು ಸಾಕಷ್ಟು ಉತ್ತಮ ಅಂಶಗಳನ್ನು ಅದರಿಂದ ಕಲಿತಿದ್ದೇವೆ. ಈ ಕಾರ್ಯಕ್ರಮದಲ್ಲಿ ಚೈತ್ರಾ ಅವರಿಗೆ ಅವಕಾಶ ಕಲ್ಪಿಸಿರುವುದು ನಮಗೆಲ್ಲಾ ಬೇಸರ ತಂದಿದೆ. ಈಗಾಗಲೇ ವಾಹಿನಿಗೆ ನೋಟಿಸ್ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ಅವರನ್ನು ಕಾರ್ಯಕ್ರಮದಿಂದ ತೆಗೆದುಹಾಕದೆ ಹೋದಲ್ಲಿ ರಾಜ್ಯ ಉಚ್ಚ ನ್ಯಾಯಾಲಯ ಹಾಗೂ ಸಾಗರ ನ್ಯಾಯಾಲಯದಲ್ಲಿ ದಾವೆ ಹೂಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುನೈನಾ ಮಾತನಾಡಿದರು. ಗೋಷ್ಠಿಯಲ್ಲಿ ರಂಜಿತ್, ನರೇಂದ್ರ, ಸಚಿನ್, ನವ್ಯ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next