Advertisement

BBK11 ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ 5 ಕೋಟಿ ಲಂಚ, ರೋಲ್ ಕಾಲ್ ಲಾಯರ್..

11:16 PM Oct 17, 2024 | Team Udayavani |

ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada-11) ಕಾರ್ಯಕ್ರಮದ ಮೂರನೇ ವಾರದ ದೊಡ್ಮನೆ ಆಟ ಮನೆಯ ಹೊರಗೂ ಸದ್ದು ಮಾಡಿದೆ.

Advertisement

ಕಳೆದ ಎರಡು ದಿನಗಳಿಂದ ಬಿಗ್ ಬಾಸ್ ಆಟ ಜಗದೀಶ್ ಸುತ್ತವೇ ಹೆಚ್ಚು ಸದ್ದು ಮಾಡುತ್ತಿದೆ. ಜಗದೀಶ್ ಮಾತು, ನಡವಳಿಕೆ ಹಾಗೂ ಮೌನ ಕೂಡ ಬಿಗ್ ಬಾಸ್ ವೀಕ್ಷಕರನ್ನು ಸೆಳೆಯುತ್ತಿದೆ.

ಹೆಣ್ಮಕ್ಕಳ ಬಗ್ಗೆ ಜಗದೀಶ್ ಅವರು ಏನೋ ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ಇಡೀ ಮನೆಯೇ ಜಗದೀಶ್ ಅವರ ಮೇಲೆ ತಿರುಗಿ ಬಿದ್ದಿದೆ. ಮಂಜು, ರಂಜಿತ್, ಚೈತ್ರಾ, ಮಾನಸ ಸೇರಿದಂತೆ ಮನೆಯವರು ಜಗದೀಶ್ ಮೇಲೆ ಆಕ್ರೋಶ ವ್ಯಕಪಡಿಸಿದ್ದಾರೆ.

ನಾನು ಲೈಫ್ ಅಲ್ಲಿ ಯಾರಿಗೂ ಮೋಸ ಮಾಡಿಲ್ಲ. ಬಿಗ್ ಬಾಸ್ ಒಂದು ದೊಡ್ಡ ವೇದಿಕೆ. ಇಲ್ಲಿ ನಾವು ಫರ್ಫೆಮೆನ್ಸ್ ಮಾಡಿದ್ದೇವೆ ಅಂದರೆ ಸುಮ್ಮನೆ ಅಲ್ಲ. ನಾನು ಇಲ್ಲಿಂದ ಹೋಗಬೇಕೆಂದು ಅನ್ನಿಸಿದ್ರೂ ನನಗೆ ಹೋಗಲು ಮನಸ್ಸು ಆಗ್ತಾ ಇಲ್ಲ ಎಂದು ಜಗದೀಶ್ ಶಿಶಿರ್ ಜತೆ ಮಾತನಾಡಿದ್ದಾರೆ.

ಟಾಸ್ಕ್ ನಲ್ಲಿ ಜತೆಯಾದ ಮಂಜು – ಜಗದೀಶ್:
ನಾಮಿನೇಷನ್ ನಿಂದ ಪಾರಾಗುವ ಟಾಸ್ಕ್ ನಲ್ಲಿ ಏಳು ಜೋಡಿಗಳನ್ನು ಮಾಡಲಾಗಿದೆ. ಇದರಲ್ಲಿ ಮಂಜು ಹಾಗೂ ಜಗದೀಶ್ ಅವರು ಜೋಡಿ ಆಗಿದ್ದಾರೆ. ಟಾಸ್ಕ್ ಬಗ್ಗೆ ಇಬ್ಬರು ಮಾತನಾಡಿದ್ದಾರೆ.

Advertisement

ಅಂತಿಮವಾಗಿ ನಾಮಿನೇಷನ್ ನಲ್ಲಿರುವವರು:
ಅಂತಿಮವಾಗಿ ನಾಮಿನೇಷನ್ ನಲ್ಲಿ ಧನರಾಜ್, ಜಗದೀಶ್, ಮಂಜು, ಮಾನಸ,ಹಂಸಾ, ಸುರೇಶ್, ಮೋಕ್ಷಿತಾ ನಾಮಿನೇಷನ್ ಪಟ್ಟಿಯಲ್ಲಿ ಉಳಿದುಕೊಂಡಿದ್ದಾರೆ.

ತಾಳ್ಮೆ ಕಳೆದುಕೊಂಡ ಬಿಗ್ ಬಾಸ್:
ನಾಮಿನೇಷನ್ ದೃಷ್ಟಿಯಲ್ಲಿ ಮುಖ್ಯವಾಗಿರುವ ಟಾಸ್ಕ್ ಸಮಯದಲ್ಲಿ  ಗೋಲ್ಡ್ ಸುರೇಶ್ ಅವರ ಹಂಸಾ ಅವರ ಬಗ್ಗೆ ಕೆಟ್ಟದಾಗಿ ಏನೋ ಮಾತನಾಡಿದ್ದಾರೆ. ಇದಕ್ಕೆ ಗೋಲ್ಡ್ ಸುರೇಶ್ ಅವರು ಈ ರೀತಿ ‌ನನ್ನ ಹತ್ರ ಮಾತನಾಡಬೇಡ ಎಂದಿದ್ದಾರೆ. ಸುರೇಶ್
ಹೆಣ್ಮಕ್ಕಳ ‌ಬಗ್ಗೆ ಮಾತನಾಡುವಾಗ ಎಚ್ಚರವೆಂದು ಹೇಳಿದ್ದಾರೆ. ಇದಕ್ಕೆ  ಜಗದೀಶ್ ಮಾತನಾಡ್ತೀನಿ ನೀನ್ಯಾರೋ ಕೇಳೋಕೆ. ನನಗೆ ‌ಮೋಸ ಮಾಡಿದವರ ಬಗ್ಗೆ ನಾನು ಮಾತನಾಡ್ತೇನೆ ಎಂದಿದ್ದಾರೆ. ಈ ವೇಳೆ ಚೈತ್ರಾ ಅವರೊಂದಿಗೂ ಜಗದೀಶ್ ವಾಗ್ವಾದಕ್ಕೆ ಇಳಿದಿದ್ದಾರೆ. ಇತ್ತ ಹಂಸಾ ಅವರು ಇಲ್ಲಿ ಏನೆಲ್ಲ ಹೇಳಿಸಿಕೊಳ್ಳೋಕ್ಕೆ ನಾವು ರೆಡಿಯಿಲ್ಲ. ನಿನ್ನ ಅಪ್ಪನಿಗೆ ಹುಟ್ಟಿದರೆ ಬಾ ಎಂದು ಜಗದೀಶ್ ಅವರಿಗೆ ಸವಾಲೆಸೆದ ಚೈತ್ರಾ.

ಯಾರು ಮೋಸ ಮಾಡಿದ್ರು ನಿನಗೆ, ಆ ಪದವನ್ನು ಬಳಸಿದ್ದೇಕೆ ಎಂದು ಮನೆಯ ಎಲ್ಲಾ ಹೆಣ್ಮಕ್ಕಳು ಜಗದೀಶ್ ಮೇಲೆ ಮುಗಿಬಿದಿದ್ದಾರೆ.

ಚೈತ್ರಾ ಅವರ ವೈಯಕ್ತಿಕ ವಿಚಾರ ತೆಗೆದು, 5 ಕೋಟಿ ರೂಪಾಯಿ ತೆಗೆದು ಇಲ್ಲಿಗೆ ಬಂದಿಲ್ಲ. 5 ಕೋಟಿ ಲಂಚ ತೆಗೆದು ಬಂದಿಲ್ಲ. ಚಾರ್ಜ್ ಶೀಟ್ ಅಲ್ಲೂ ನಿನ್ನ ಹೆಸರು ಇದೆ ಎಂದು ಜಗದೀಶ್ ಹೇಳಿದ್ದಾರೆ. ಇದಕ್ಕೆ ಚೈತ್ರಾ ನಿನ್ನ ಅಪ್ಪನದು ದುಡ್ಡು ನಾನು ತಕ್ಕೊಂಡಿಲ್ಲ. ನಿನ್ನ ಹಾಗೆ ರೋಲ್ ಕಾಲ್ ಲಾಯರ್ ನಾವಲ್ಲ. ರೋಲ್ ಕಾಲ್ ಲಾಯರ್, ಲೈಸನ್ಸ್ ಇಲ್ಲದಿರುವ ಲಾಯರ್ ಎಂದು ಚೈತ್ರಾ ಅವರು ಗರಂ ಆಗಿದ್ದಾರೆ.

ಮಾತು ಎತ್ತಿದ್ರೆ ಹೊಡೆಯೋಕೆ ಬರ್ತಿಯಾ ನೀನು ಎಂದು ರಂಜಿತ್ ಗೆ ಜಗದೀಶ್ ಹೇಳಿದ್ದಾರೆ. ಇದಕ್ಕೆ ರಂಜಿತ್ ಸಿಗೋ‌ ನಿನಗೆ ಐತೆ ಎಂದಿದ್ದಾರೆ. ರಂಜಿತ್ ಕೆಟ್ಟದಾಗಿ ಏನೋ ಹೇಳಲು ಹೋದಾಗ ಸಹ ಸ್ಪರ್ಧಿ ಅವರ ಬಾಯಿ ಮುಚ್ಚಿಸಿದ್ದಾರೆ.

ಇದನ್ನು ನೋಡಿದ ಬಿಗ್ ಬಾಸ್ ನಿಮಗೆ ಕಡೆಯ ಎಲ್ಲರೂ ಕುಳಿತುಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ.

ಜಗದೀಶ್ ಬಗ್ಗೆ ಸಹ ಸ್ಪರ್ಧಿಗಳು ಹೇಳಿದ್ದೇನು?:
ದಯವಿಟ್ಟು ಅವರನ್ನು ‌ಮನೆಯಿಂದ ಹೊರಗೆ ಕಳಿಸುವುದು ಬೇಡ ಆಟ ಇವತ್ತಿನಿಂದ ಶುರುವಾಗುತ್ತದೆ. ನನ್ನ ‌ಮೇಲೆ ಕೇಸ್ ಆಗಿರುವುದು ಹೌದು ಇದು ಜಗತ್ತಿಗೆ ಗೊತ್ತು. ನಾನು ಇದರಿಂದ ಮಾನಸಿಕವಾಗಿ ಕುಗ್ಗಿಲ್ಲ ಎಂದು ಚೈತ್ರಾ ಹೇಳಿದ್ದಾರೆ.

ನಾನು ಅವರ ಅಮ್ಮನ ಬಗ್ಗೆ ಕೆಟ್ಟದಾಗಿ ಹೇಳಿಲ್ಲ ಎಂದು ಮಾನಸ ಸ್ಪಷ್ಟನೆ ನೀಡಿದ್ದಾರೆ.

ಕಂಟೆಂಟ್ ಕೊಡುತ್ತಾರೆ ಅಂಥ ಹೇಳ್ತಾರೆ ಅಲ್ವಾ ಆ ವ್ಯಕ್ತಿ ಮನೆಯಿಂದ ಹೊರಗೆ ಹೋಗುವುದು ಬೇಡ. ಆ ವ್ಯಕ್ತಿ ಮನೆಯಲ್ಲಿರಬೇಕು ಕರುನಾಡಿನ ಜನ ಯಾವ ರೀತಿ ಕಂಟೆಂಟ್ ಕೊಡುತ್ತಾರೆ ಅಂಥ ನೋಡಬೇಕೆಂದು ಭವ್ಯಾ ಅವರು ಜಗದೀಶ್ ಬಗ್ಗೆ ಹೇಳಿದ್ದಾರೆ.

ಹೆಣ್ಮಕ್ಕಳ ಬಗ್ಗೆ ಈ ರೀತಿ ಭಾಷೆಯಲ್ಲಿ ಮಾತನಾಡುವುದು ಖಂಡಿತವಾಗಿ ತಪ್ಪು. ಇದರಿಂದ ನನ್ನ ಮನಸ್ಸಿಗೆ ನೋವಾಗಿದೆ ಎಂದು ಹಂಸಾ ಹೇಳಿದ್ದಾರೆ.

ಜಗದೀಶ್ ಅವರಿಗೆ ಮಹಿಳೆಯರ ಬಗ್ಗೆ ಕನಿಷ್ಠ ಗೌರವ ಕೂಡ ಇಲ್ಲ. ಬಹುಶಃ ಮನೆಯಲ್ಲೂ ಅವರು ಹೀಗೆ ‌ಇರುತ್ತಾರೆ ಎಂದು ಗೌತಮಿ ಅವರು ಹೇಳಿದ್ದಾರೆ.

ಹೆಣ್ಮಕ್ಕಳ ಬಗ್ಗೆ ಆ ವ್ಯಕ್ತಿ ಮಾತನಾಡುವಾಗ ನಮ್ಮ ರಕ್ತ ಕುದಿಯುತ್ತದೆ. ನಾನು ಅವರ ಮೇಲೆ ಕೈ‌ಮೇಲೆ ಮಾಡಿರುವುದು ಹೌದು ಎಂದು ರಂಜಿತ್ ಹೇಳಿದ್ದಾರೆ.

ಬಿಗ್ ಬಾಸ್ ಜಗದೀಶ್ ಅವರು ಹಂಸಾ ಅವರ ಬಗ್ಗೆ ಆಡಿದ ಅವಹೇಳನಕಾರಿ ಮಾತಿಗೆ ಬಗ್ಗೆ ವಿವರ ಕೇಳಿದ್ದಾರೆ.

ಜಗದೀಶ್ ಅವರ ಮೇಲೆ ಯಾರು ಕೈ ಮಾಡಿಲ್ಲ. ಮಾನಸ ಅವರು ತಾಯಿ ಬಗ್ಗೆ ಏನು ಇಲ್ಲ. ಇದರಲ್ಲಿ ಮಾನಸ ಅವರ ತಪ್ಪಿಲ್ಲ ಎಂದು ಶಿಶಿರ್ ಅವರು ಬಿಗ್ ಬಾಸ್ ಗೆ ಹೇಳಿದ್ದಾರೆ.

ಮಹಿಳೆಯರಿಗೆ ನಿಂದನೆ: ದೈಹಿಕ ಹಲ್ಲೆ: ಜಗದೀಶ್, ರಂಜಿತ್ ಮನೆಯಿಂದ ಔಟ್:

ಮಹಿಳೆಯರಿಗೆ ‌ನಿಂದಿಸಿ ಮಾತನಾಡಿದ್ದಕ್ಕೆ ಜಗದೀಶ್ ಅವರನ್ನು ಹಾಗೂ ದೈಹಿಕವಾಗಿ ಹಲ್ಲೆ ನಡೆಸಿದ್ದಕ್ಕೆ ರಂಜಿತ್ ಅವರನ್ನು ಬಿಗ್ ಬಾಸ್ ಮನೆಯಿಂದ ಆಚೆ ಕಳುಹಿಸಿದ್ದಾರೆ.

ಇತ್ತ ಸಹ ಸ್ಪರ್ಧಿಗಳ ಒಂದು ಅವಕಾಶ ಕೊಡಿ ಬಿಗ್ ಬಾಸ್ ಎಂದು ಮನವಿ ಮಾಡಿರುವುದನ್ನು ತೋರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next