Advertisement

Bigg Boss 10: ಬಿಗ್‌ ಬಾಸ್‌ ಮನೆಯಲ್ಲಿ ತಾರಕಕ್ಕೇರಿದ ವಿನಯ್‌ – ಪ್ರತಾಪ್‌ ಜಗಳ

09:45 AM Jan 08, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ -10 ಕಾರ್ಯಕ್ರಮದಲ್ಲಿ ವಾರ ಕಳೆದಂತೆ ಒಂದೊಂದಾಗಿ ಸ್ಪರ್ಧಿಗಳು ದೊಡ್ಮನೆಯಿಂದ ಹೊರಬರುತ್ತಿದ್ದಾರೆ. ಫಿನಾಲೆ ತಲುಪುವ ದಿನಗಳು ಸಮೀಪಿಸುತ್ದಿದ್ದಂತೆ ಸ್ಪರ್ಧಿಗಳ ನಡುವೆ ವಾದ – ಪ್ರತಿವಾದಗಳು ಹೆಚ್ಚಾಗುತ್ತಿದೆ.

Advertisement

ಮೈಕಲ್‌ ಮನೆಯಿಂದ ಹೊರಬಂದಿದ್ದಾರೆ. ಮಣ್ಣಿನ ಮಗನೆಂದು ಬಿಗ್‌ ಬಾಸ್‌ ಮನೆಯಲ್ಲಿ ಖ್ಯಾತಿಗಳಿಸಿದ ಮೈಕಲ್‌ ಎಲಿಮಿನೇಟ್‌ ಆಗಿದ್ದಾರೆ. ಇನ್ನೊಂದೆಡೆ ಮನೆಯೊಳಗೆ ವಿನಯ್‌ – ಪ್ರತಾಪ್‌ ನಡುವಿನ ಮಾತು ತಾರಕಕ್ಕೇರಿದೆ.

ಕಿಚ್ಚನ ಪಂಚಾಯತ್‌ ನಲ್ಲಿ ಪ್ರತಾಪ್‌ ವಿನಯ್‌ ಅವರ ಬಗ್ಗೆ ಮಾತನಾಡಿದ್ದನ್ನು ಕೇಳಿ ವಿನಯ್‌ ಭಾವುಕರಾಗಿದ್ದರು. ಈ ವಿಚಾರದಲ್ಲಿ ಪ್ರತಾಪ್‌ – ವಿನಯ್‌ ಇಬ್ಬರಿಗೂ ಮಾತನಾಡಲು ಕಿಚ್ಚ ಅವಕಾಶ ಕೊಟ್ಟಿದ್ದರು.

ಇಂದಿನ ಸಂಚಿಕೆಯಲ್ಲಿ ವಿನಯ್‌ ಅವರು ಪ್ರತಾಪ್‌ ಅವರ ಬಗ್ಗೆ “ಎಲ್ಲರಿಗೂ ಬೂದಿ ಎರಚಿಕೊಂಡು ಇರವುದು ಪ್ರತಾಪ್”‌ ಎಂದಿದ್ದಾರೆ. ಇದಕ್ಕೆ ಪ್ರತಾಪ್‌ “ನೀವು ಅಂದುಕೊಂಡ ಹಾಗೆ ಕೇಳಿಸಿಕೊಂಡು ಇರೋಕೆ ಆಗಲ್ಲ. ಇದರ ಪರಿಣಾಮ ನೆಟ್ಟಗೆ ಇರಲ್ಲ” ಎಂದಿದ್ದಾರೆ. “ನೀನು ನಾಟಕ ಆಡುತ್ತಾ ಇದ್ದೀಯಾ” ಎಂದು ವಿನಯ್‌ ದೊಡ್ಡ ಧ್ವನಿಯಲ್ಲಿ ಪ್ರತಾಪ್‌ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಇಬ್ಬರ ನಡುವಿನ ಜಗಳವನ್ನು ತಿಳಿಗೊಳಿಸಲು ಮನೆಯ ಇತರೆ ಸ್ಪರ್ಧಿಗಳು ಪ್ರಯತ್ನಿಸಿದ್ದಾರೆ. ಈ ಸಂಚಿಕೆ ಸೋಮವಾರ ರಾತ್ರಿ(ಜ.8 ರಂದು) ಪ್ರಸಾರ ಕಾಣಲಿದೆ.

Advertisement

ಪ್ರತಾಪ್‌ ಎಲಿಮಿನೇಷನ್‌ ನಿಂದ ಬಚಾವದ ಆಗಿದ ಬಳಿಕ, ಇನ್ಮುಂದೆ ಮನೆಯಲ್ಲಿ ಉತ್ತಮವಾಗಿ ಆಡುತ್ತೇನೆ. ಎಲ್ಲರೂ ಮೆಚ್ಚುವಂತೆ ತೋರಿಸಿ ಕೊಡುತ್ತೇನೆ ಎಂದಿದ್ದರು. ಪ್ರತಾಪ್‌ ಅವರ ಇಂದಿನ ಅವತಾರವನ್ನು ನೋಡಿ ಇಂಟರ್‌ ನೆಟ್‌ ನಲ್ಲಿ ಅವರ ಅಭಿಮಾನಿಗಳು ಶಹಬ್ಬಾಸ್‌ ಎಂದಿದ್ದಾರೆ. ಇನ್ನೊಂದೆಡೆ ವಿನಯ್‌ ಸತ್ಯ ಹೇಳಿದ್ದಾರೆ ಎಂದು ಕೆಲವರು ಕಮೆಂಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next