Advertisement

Bigg Boss 10: ಬಿಗ್ ಬಾಸ್ ಮನೆಗೆ ಬಂದು ʼಮುಟ್ಟಿನ ಕಪ್‌ʼ ಜಾಗೃತಿ ಮೂಡಿಸಿದ ‘ಕಾಂತಾರ’ ಬೆಡಗಿ

05:56 PM Dec 30, 2023 | Team Udayavani |

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್‌ 10 ರೋಚಕ ಘಟ್ಟದಲ್ಲಿ ಸಾಗುತ್ತಿದೆ. ಇನ್ನೇನು ಕೆಲವೇ ವಾರದಲ್ಲಿ ಫಿನಾಲೆ ನಡೆಯಲಿದೆ.

Advertisement

ಈ ವಾರ ಬಿಗ್ ಬಾಸ್ ಮನೆಗೆ ಸ್ಪರ್ಧೆಗಳ ಮನೆಯವರು ಬಂದಿದ್ದಾರೆ. ತಮ್ಮವರ ಜೊತೆ ಸಮಯ ಕಳೆದು ಸಂತೋಷದಲ್ಲಿದ್ದ ಸ್ಪರ್ಧೆಗಳಲ್ಲಿ ನಾಮಿನೇಷನ್ ನಂತರ ಮತ್ತೆ ಚರ್ಚೆಗಳು ಆರಂಭಗೊಂಡಿದೆ. ಕಿಚ್ಚನ ಪಂಚಾಯತ್ ನಲ್ಲಿ ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.

ಕಳೆದ ವಾರ ಕೆಸಿಸಿ ಕಪ್ ನಿಂದ ಗೈರಾಗಿದ್ದ ಕಿಚ್ಚ ಈ ವಾರ ಸ್ಪರ್ಧಿಗಳಿಗೆ ಕಾಫಿ ಕಪ್ ನೀಡಿ ಪರೋಕ್ಷವಾಗಿ ಮನೆಯಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ.

ಇನ್ನು ಇಂದು ಬಿಗ್ ಬಾಸ್ ಮನೆಗೆ ‘ಕಾಂತಾರ’ ನಟಿ ಸಪ್ತಮಿ ಗೌಡ ಅವರು ಆಗಮಿಸಿ ಹೆಣ್ಣುಮಕ್ಕಳಿಗೆ ಆರೋಗ್ಯ ಜಾಗೃತಿ ಮೂಡಿಸಲಿದ್ದಾರೆ.

ಕರ್ನಾಟಕ ಸರ್ಕಾರ ‘ಮೈತ್ರಿ ಮುಟ್ಟಿನ ಕಪ್’ ಯೋಜನೆಯನ್ನು ಜಾರಿ ಮಾಡಿ ಅದರ ರಾಯಭಾರಿಯಾಗಿ ಸಪ್ತಮಿ ಅವರನ್ನು ನೇಮಿಸಿದೆ. ಈ ಯೋಜನೆಯ ಬಗ್ಗೆ ಸಪ್ತಮಿ ಇಂದು ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ್ದಾರೆ.

Advertisement

“ನಾನು ಬಿಗ್ ಬಾಸ್  ಮನೆಗೆ ಬರೋಕೆ ಕಾರಣವೆಂದರೆ,  ಸರ್ಕಾರ ‘ಮೈತ್ರಿ ಮುಟ್ಟಿನ ಕಪ್’ ಎನ್ನುವ ಯೋಜನೆಯನ್ನು ಆರಂಭಿಸಿದೆ. ಶೇ. 80ರಷ್ಟು ಹೆಣ್ಣು ಮಕ್ಕಳು ಈ ʻಮುಟ್ಟಿನ ಕಪ್‌ʼನ್ನು ಬಳಕೆ ಮಾಡುತ್ತಿದ್ದಾರೆ. ಪ್ಯಾಡ್ಸ್‌ನಿಂದ ಈ ಕಪ್‌ ಕಡೆಗೆ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸಬೇಕು. ಇಲ್ಲಿ ಕೂಡ ಹೆಣ್ಣು ಮಕ್ಕಳು ಇದ್ದೀರಾ” ಎಂದು ಹೇಳಿ ಮುಟ್ಟಿನ ಕಪ್ ನ್ನು ಮಹಿಳಾ ಸ್ಪರ್ಧಿಗಳಿಗೆ ನೀಡುವುದನ್ನು ತೋರಿಸಲಾಗಿದೆ.

ಇಂದು ರಾತ್ರಿ(ಡಿ.30) ಎಪಿಸೋಡ್ ಪ್ರಸಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next