Advertisement

ಏನ್ರಿ ಹುಚ್ಚಾಟ; ಪ್ರಥಮ್ ಗೆ ನ್ಯಾಯಾಧೀಶರ ತರಾಟೆ, ಜಾಮೀನು ಮಂಜೂರು

04:00 PM Jul 24, 2017 | Sharanya Alva |

ಬೆಂಗಳೂರು: ಕಿರುತೆರೆ ನಟ ಭುವನ್ ತೊಡೆ ಕಚ್ಚಿದ್ದ ಪ್ರಕರಣದಲ್ಲಿ ಬಿಗ್ ಬಾಸ್ ವಿನ್ನರ್ ಖ್ಯಾತಿಯ ಪ್ರಥಮ್ ಗೆ 2ನೇ ಎಸಿಜೆಎಂ ನ್ಯಾಯಾಲಯ ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

Advertisement

ಸಹನಟ ಭುವನ್ ಗೆ ಕಚ್ಚಿದ್ದ ಪ್ರಕರಣದಲ್ಲಿ ಪ್ರಥಮ್ ಇಂದು ನ್ಯಾಯಾಲಯಕ್ಕೆ ಶರಣಾಗಿದ್ದ. ಏನ್ರಿ ಇದು ನಿಮ್ಮ ಹುಚ್ಚಾಟ ಪ್ರಥಮ್ ಎಂದು ನ್ಯಾಯಾಧೀಶರು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ನ್ಯಾಯಾಧೀಶ ಪ್ರಥ್ವೀರಾಜ್ ವರ್ಣಿಕರ್ ಅವರು, ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತೆ, ನೀವೇನ್ರಿ ಹೀಗೆ? ಸಮಾಜಕ್ಕೆ ನಿಮ್ಮಿಂದ ಉತ್ತಮ ಸಂದೇಶ ರವಾನೆಯಾಗಬೇಕು. ಆದರೆ ನೀವೇನ್ರಿ…ಏನಿದು ನಿಮ್ಮ ಹುಚ್ಚಾಟ ಪ್ರಥಮ್ ಎಂದು ಪ್ರಶ್ನಿಸಿದ್ದರು.

ಸಹನಟ ಭುವನ್ ಗೆ ಕಚ್ಚಿದ ಪ್ರಕರಣದಲ್ಲಿ 5 ಸಾವಿರ ರೂ ಮೊತ್ತದ ನಗದು ಶ್ಯೂರಿಟಿ ನೀಡಲು ಹೇಳಿ ನ್ಯಾಯಾಧೀಶರು ಷರತ್ತುಬದ್ಧ ಜಾಮೀನು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next