Advertisement

ಪರ್ಯಾಯ ಬೀಜ ವಿತರಿಸಿ: ಖಾಶೆಂಪುರ

04:06 PM Jul 01, 2020 | Naveen |

ಬೀದರ: ಇತ್ತೀಚೆಗೆ ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ಸೋಯಾಬೀನ್‌ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿ ಮೊಳಕೆ ಬಾರದೆ ಬೆಳೆ ನಷ್ಟಕ್ಕೆ ತುತ್ತಾದ ರೈತರ ಜಮೀನುಗಳಿಗೆ ಶಾಸಕ ಬಂಡೆಪ್ಪ ಖಾಶೆಂಪುರ ಅವರು ಕೃಷಿ ಅಧಿಕಾರಿಗಳು, ಕೃಷಿ ವಿಜ್ಞಾನಿಗಳ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲಿಸಿದರು.

Advertisement

ತಾಲೂಕಿನ ಬಗದಲ್‌ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಖಾಶೆಂಪುರ (ಬಿ) ಗ್ರಾಮದ ರವೀಂದ್ರ ಗುಮಾಸ್ತಿ ಎಂಬ ರೈತರ ಜಮೀನು ಹಾಗೂ ಸುತ್ತಮುತ್ತಲಿನ ಜಮೀನುಗಳಿಗೆ ಭೇಟಿ ನೀಡಿದ ಶಾಸಕರು, ಬೆಳೆ ನಷ್ಟದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅಲ್ಲದೇ ಮೊಳಕೆ ಬಾರದೆ ನಷ್ಟಕ್ಕೆ ತುತ್ತಾದ ರೈತರಿಗೆ ಪರಿಹಾರ ನೀಡುವಂತೆ ಹಾಗೂ ಪರ್ಯಾಯವಾಗಿ ಉದ್ದು, ಹೆಸರು ಬೀಜಗಳನ್ನು ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಈಗಾಗಲೇ ಸೋಯಾಬಿನ್‌ ಬೆಳೆ ನಷ್ಟದ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿಲಾಗಿದೆ. ಕೃಷಿ ಇಲಾಖೆಯಿಂದ ಸೋಯಾಬಿನ್ ಬೀಜಗಳನ್ನು ಖರೀದಿಸಿದ ರೈತರು ಇನ್ನೂ ಬಿತ್ತನೆ ಮಾಡಿರದಿದ್ದರೆ, ವಾಪಸ್‌ ಮಾಡಬಹುದು. ವಾಪಸ್‌ ಮಾಡುವ ರೈತರ ಖಾತೆಗಳಿಗೆ ಹಣ ಮರಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next