Advertisement

ಪತಿಯ ಆತ್ಮಹತ್ಯೆ ಪರಿಹಾರಕ್ಕಾಗಿ ಅಧಿಕಾರಿಯ ಮುಂದೆ ಸೆರಗೊಡ್ಡಿದ ಮಹಿಳೆ

02:11 PM Dec 11, 2019 | keerthan |

ಬೀದರ್: ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಪತಿಯ ಪರಿಹಾರಕ್ಕಾಗಿ ರೈತ ಮಹಿಳೆ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಮುಂದೆ ಸೆರಗು ಒಡ್ಡಿ, ಕಣ್ಣೀರು ಹಾಕಿದ ಹೃದಯಸ್ಪರ್ಶಿ ಘಟನೆ ಬುಧವಾರ ನಗರದಲ್ಲಿ ನಡೆದಿದೆ.

Advertisement

ಕರವೇ ಕಾರ್ಯಕರ್ತರು ಹಾಗೂ ಮೊಮ್ಮಗಳ ಜೊತೆ ಜಂಟಿ ಕೃಷಿ ಇಲಾಖೆಯ ಮುಂಭಾಗ ರೈತ ಮಹಿಳೆ ಸಿದ್ದಮ್ಮ ಪ್ರತಿಭಟನೆ ಮಾಡುವಾಗ ಸ್ಥಳಕ್ಕೆ ಬಂದ ಜಂಟಿ ಕೃಷಿ ನಿರ್ದೇಶಕ ಸಿ. ವಿದ್ಯಾನಂದ್ ಮುಂದೆ ಪತಿಗೆ ಪರಿಹಾರ ನೀಡಿ ಎಂದು ಸೀರೆ ಸೆರಗೊಡ್ಡಿ ಕಣ್ಣೀರು ಹಾಕಿದರು.

ಎರಡು ವರ್ಷಗಳ ಹಿಂದೆ ಔರಾದ ತಾಲೂಕಿನ ಮುದೋಳ ಗ್ರಾಮದ ಬಾಬುರಾವ್ (60) ಎಂಬ ರೈತ ಸಾಲಬಾಧೆ ಹಿನ್ನಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಪರಿಹಾರ ಕೋರಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪರಿಹಾರ ಸಿಕ್ಕಿರಲಿಲ್ಲ. ಇದರಿಂದ ನೊಂದಿರುವ ರೈತ ಮಹಿಳೆ ಸಿದ್ದಮ್ಮ ಇಂದು ಸೆರಗು ಒಡ್ಡುವ ಮೂಲಕ ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದಾರೆ‌

Advertisement

Udayavani is now on Telegram. Click here to join our channel and stay updated with the latest news.

Next