Advertisement

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

04:00 PM Mar 29, 2024 | Team Udayavani |

ಬೀದರ್: ಪತ್ನಿಯ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಮನನೊಂದು‌ ಪತಿ‌ ಓವರ್ ಹೆಡ್ ಟ್ಯಾಂಕ್ ನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ತಾಲೂಕಿನ ಆಣದೂರ ಗ್ರಾಮದಲ್ಲಿ‌ ನಡೆದಿದೆ.‌ ಗ್ರಾಮದ ರಾಜಕುಮಾರ ದಾಸ ‌ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

Advertisement

ಮೂರು ದಿನಗಳ ಬಳಿಕ ವ್ಯಕ್ತಿಯ ಶವ ಪತ್ತೆಯಾಗಿದೆ. ನೀರು‌ ಕೆಟ್ಟ ವಾಸನೆ‌ ಬಂದ ಹಿನ್ನೆಲೆ‌ ಗ್ರಾಮದ ಯುವಕನೊಬ್ಬ ಟ್ಯಾಂಕ್ ಹತ್ತಿ ನೋಡಿದಾಗ ಶವ ಇರುವುದು ಗೊತ್ತಾಗಿದೆ.

ಮೂರು ದಿನಗಳಿಂದ ನೀರನ್ನು ಸೇವಿಸಿರುವ ಗ್ರಾಮಸ್ಥರು‌ ಈಗ ಶವ ನೋಡಿ ಆತಂಕಗೊಂಡಿದ್ದಾರೆ. ಸದ್ಯ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳು ಎರಡು ಕ್ಯಾಂಪ್ ಗಳನ್ನು ಹಾಕಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.

1.5 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕರ್ ಇದ್ದು, 250 ರಿಂದ 300 ಜನನ ನೀರು ಸೇವಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next