Advertisement

ಬೀದರ್: ಹಿರಿಯ ಪತ್ರಕರ್ತ ವಿಶ್ವನಾಥ ಪಾಟೀಲ್ ನಿಧನ

06:09 PM Feb 14, 2021 | Team Udayavani |

ಬೀದರ್: ಹಿರಿಯ ಪತ್ರಕರ್ತ, ಕರ್ನಾಟಕದ ಪ್ರಥಮ ಹಿಂದಿ ಪತ್ರಿಕೆ (ದಮನ್) ಸಂಪಾದಕರಾಗಿದ್ದ ವಿಶ್ವನಾಥ ಪಾಟೀಲ ಹಕ್ಯಾಳ್ ಅವರು ರವಿವಾರ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

Advertisement

ಬೀದರ್ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಹಾಯಕ ನಿರ್ದೇಶಕರಾಗಿ ವೃತ್ತಿ ಜೀವನ ಆರಂಭಿಸಿದ್ದ ವಿಶ್ವನಾಥ ಪಾಟೀಲ ಅವರು, ನಂತರ ಕಲ್ಬುರ್ಗಿ ಮತ್ತು ವಿಜಯಪುರದ ಜಿಲ್ಲಾ ವಾರ್ತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಂತರ 1970ರಲ್ಲಿ ದಮನ್ ಪತ್ರಿಕೆಯನ್ನು ಆರಂಭಿಸಿದ್ದರು. ಅಭಿವೃದ್ಧಿ ಪತ್ರಿಕೋದ್ಯಮ ಸೇರಿದಂತೆ ಹಲವು ಪ್ರಶಸ್ತಿ, ಸಮ್ಮಾನಗಳಿಗೆ ಪಾತ್ರರಾಗಿದ್ದರು.

ಜಿಲ್ಲೆಯಲ್ಲಿ ದಮನ್ ಪಾಟೀಲ ಎಂದೇ ಕರೆಯಿಸಿಕೊಳ್ಳುತ್ತಿದ್ದ ವಿಶ್ವನಾಥ ಅವರು ವಯೋ ಸಹಜ ರೋಗದಿಂದ ಬಳಲುತ್ತಿದ್ದರು. ರವಿವಾರ ನಗರದ ಎಸ್‌ಬಿಐ ಬ್ಯಾಂಕ್ ಕಾಲೋನಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತರು ಮೂವರು ಗಂಡು, ಓರ್ವ ಹೆಣ್ಣು ಮಗಳು ಸೇರಿ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ಬೆ. 11.30ಕ್ಕೆ ನಗರದ ನರಸಿಂಹ ಝರಣಾ ಬಳಿಯ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ‘ಪಠಾಣ್’ ಚಿತ್ರದಲ್ಲಿ ಭಾಯ್ ಜಾನ್…. ಶಾರುಖ್ ಗೆ ಸಾಥ್ ನೀಡಿದ ಸಲ್ಮಾನ್

Advertisement

Udayavani is now on Telegram. Click here to join our channel and stay updated with the latest news.

Next