Advertisement

ಸುಂಟರ ಗಾಳಿಗೆ ಹಾರಿ ಹೋದ ಚೆಕ್‌ಪೋಸ್ಟ್‌ ಶೆಡ್‌

01:25 PM Apr 29, 2020 | Naveen |

ಕಮಲನಗರ(ಬೀದರ): ಮಹಾರಾಷ್ಟ್ರದ ಗಡಿಗೆ ಅಂಟಿಕೊಂಡ ಕಮಲನಗರ ಗಡಿ ಭಾಗದಲ್ಲಿ ನಿರ್ಮಿಸಿರುವ ಚೆಕ್‌ಪೋಸ್ಟ್‌ನ ಶೆಡ್‌ ಸುಂಟರ ಗಾಳಿಗೆ ಹಾರಿ ಹೋಗಿದ್ದು, ಕೋವಿಡ್ ಯೋಧರಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳವಾರ ಜರುಗಿದೆ.

Advertisement

ಕಳೆದ ಕೆಲ ದಿನಗಳ ಹಿಂದೆಯೇ ಭಾರಿ ಗುಡುಗು ಮಿಂಚು ಸಹಿತ ಮಳೆಯಿಂದ ಇದೇ ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿಗೆ ಅಗತ್ಯ ಸೌಲಭ್ಯಗಳಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಎಚ್ಚೆತ್ತುಕೊಳ್ಳದ ತಾಲೂಕು ಆಡಳಿತ ಮತ್ತು ಗ್ರಾಪಂ ನಿಷ್ಕಾಳಜಿಯಿಂದ ಇಂತದೊಂದು ಅನಾಹುತ ನಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಏ.13 ರಂದು ಬೀದರನ ಹೆಚ್ಚುವರಿ ಪೊಲೀಸ್‌ ಅಧಿಧೀಕ್ಷಕ ಡಾ|ಗೋಪಾಲ ಚೆಕ್‌ ಪೋಸ್ಟ್‌ಗೆ ಭೇಟಿ ನೀಡಿದ್ದಾಗ ಸಿಬ್ಬಂದಿಗೆ ಕುಳಿತುಕೊಳ್ಳಲು ಶೆಡ್‌ ನಿರ್ಮಿಸಲು ಸೂಚಿಸಿದ್ದರು.  ಅವರ ಆದೇಶದಂತೆ ತಹಶೀಲ್ದಾರ್‌ ಶೆಡ್‌ ನಿರ್ಮಿಸಿದ್ದರು. ಸರಿಯಾಗಿ ಕಾಮಗಾರಿ ನಿರ್ವಹಿಸದಿದ್ದರಿಂದ ಇಂಥ ದುರ್ಘ‌ಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next