Advertisement

ಬೀದರ್ ನಲ್ಲಿ ಕೋವಿಡ್ ಅಟ್ಟಹಾಸ : ಇಂದು ಮತ್ತೆ 8 ಜನ ಬಲಿ

07:34 PM Jul 06, 2020 | sudhir |

ಬೀದರ್: ಕೋವಿಡ್-19 ಹೆಮ್ಮಾರಿಯ ಅಟ್ಟಹಾಸಕ್ಕೆ ಬಿಸಿಲೂರಿನ ಜನ ಅಕ್ಷರಶ: ಬೆಚ್ಚಿ ಬಿದ್ದಿದ್ದಾರೆ. ಸೋಮವಾರ ಮತ್ತೆ 8 ಜನ ಸೋಂಕಿತರನ್ನು ಸಾವಿನ ಕೂಪಕ್ಕೆ ತಳ್ಳುವ ಮೂಲಕ ಗಡಿ ನಾಡಿನಲ್ಲಿ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ವೈರಸ್‌ನ ದಾಳಿಗೆ ಕೇವಲ ಮೂರು ದಿನದಲ್ಲಿ 23 ಜನರು ಸಾವನ್ನಪ್ಪಿರುವುದು ಆತಂಕ ಮೂಡಿಸಿದೆ.

Advertisement

ಜಿಲ್ಲೆಯಲ್ಲಿ ಶನಿವಾರ 6 ಜನ ಮತ್ತು ರವಿವಾರ 9 ಜನರನ್ನು ಬಲಿ ಪಡೆದಿರುವ ಕೋವಿಡ್ ಸೋಂಕು ಸತತ ಮೂರನೇ ದಿನವೂ ಮತ್ತೆ 8 ಜನರೊಂದಿಗೆ ಸಾವಿನ ಬೇಟೆಯನ್ನಾಡಿದೆ. ಈ ಪೈಕಿ ಐದು ಮೃತರಲ್ಲಿ ಕೋವಿಡ್ ನ ಯಾವುದೇ ಲಕ್ಷಣಗಳೇ ಇಲ್ಲದಿರುವುದು ಭೀತಿ ಹೆಚ್ಚಿಸಿದೆ.

ಜಿಲ್ಲೆಯಲ್ಲಿ ವೈರಸ್‌ನಿಂದಾಗಿ ಈವರೆಗೆ 45 ಜನರು ಸಾವನ್ನಪ್ಪಿದಂತಾಗಿದೆ. ನೆರೆಯ ಮಹಾರಾಷ್ಟ್ರ, ತೆಲಂಗಾಣದಿಂದ ವಲಸಿಗರ ಆಗಮನ, ಕೊನೆ ಕ್ಷಣದಲ್ಲಿ ಸೋಂಕಿತರು ಆಸ್ಪತ್ರೆಗೆ ದಾಖಲು ಮತ್ತು ಅವರಲ್ಲಿ ಕಿಡ್ನಿ, ಶುಗರ್- ರಕ್ತದೊತ್ತಡ ಸಮಸ್ಯೆಗಳಿರುವುದು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎನ್ನುತ್ತಿದ್ದಾರೆ ವೈದ್ಯಾಧಿಕಾರಿಗಳು.

90 ವರ್ಷದ ಹೆಣ್ಣು ಪಿ- ಬಿಡಿಆರ್ 756, 75 ವರ್ಷದ ಗಂಡು ಪಿ-ಬಿಡಿಆರ್ 757, 70 ವರ್ಷದ ಗಂಡು ಪಿ-ಬಿಡಿಆರ್ 758,  22 ವರ್ಷದ ಗಂಡು ಪಿ-ಬಿಡಿಆರ್ 759, 65 ವರ್ಷದ ಹೆಣ್ಣು ಪಿ- ಬಿಡಿಆರ್ 760, 64 ವರ್ಷದ ಗಂಡು ಪಿ-ಬಿಡಿಆರ್746, 65 ವರ್ಷದ ಹೆಣ್ಣು ಪಿ- ಬಿಡಿಆರ್761 ಮತ್ತು 40 ವರ್ಷದ ಗಂಡು ಪಿ-ಬಿಡಿಆರ್762 ರೋಗಿಗಳು ಸಾವನ್ನಪ್ಪಿದ್ದಾರೆ.

ಇನ್ನೊಂದೆಡೆ ಜಿಲ್ಲೆಯಲ್ಲಿ ಸೋಮವಾರ ಮತ್ತೆ 44 ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದು, ಈವರೆಗೆ ಸೋಂಕಿತರ ಸಂಖ್ಯೆ 799ಕ್ಕೆ ಏರಿಕೆ ಆಗಿದೆ. ಅದರಲ್ಲಿ 561 ಮಂದಿ ಗುಣಮುಖರಾಗಿದ್ದರೆ 194 ಕೇಸ್‌ಗಳು ಸಕ್ರೀಯವಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next