Advertisement

Bidar: ಜಿ.ಪಂ ಉಪ ಕಾರ್ಯದರ್ಶಿಗೆ ಚಪ್ಪಲಿಯಿಂದ‌ ಹೊಡೆದ ಅಮಾನತ್ತಿನಲ್ಲಿದ್ದ ಪಿಡಿಒ

06:43 PM Mar 11, 2024 | Team Udayavani |

ಬೀದರ್: ಕೆಲಸದಿಂದ ಅಮಾನತ್ತಿನಲ್ಲಿದ್ದ ಪಿಡಿಒನಿಂದ ಜಿ.ಪಂ ಉಪ ಕಾರ್ಯದರ್ಶಿಗೆ ಚಪ್ಪಲಿಯಿಂದ‌ ಹೊಡೆದ ಘಟನೆ‌ ಬೀದರನಲ್ಲಿ ನಡೆದಿದೆ.

Advertisement

ಪ್ರಭುದಾಸ ಜಾಧವ ಎಂಬ ಪಿಡಿಓ ಉಪ ಕಾರ್ಯದರ್ಶಿ ಸೂರ್ಯಕಾಂತ ಬಿರಾದಾರ ಮೇಲೆ ಹಲ್ಲೆ ಮಾಡಿದ್ದಾನೆ.

ಅಕ್ರಮ ಎಸಗಿ ಆರ್ಥಿಕ ‌ನಷ್ಟ ಉಂಟು ಮಾಡಿದ ಆರೋಪದ ಮೇಲೆ ಔರಾದನ ಸುಂದಾಳ ಗ್ರಾಪಂ ಪಿಡಿಒ ಆಗಿದ್ದ ಪ್ರಭುದಾಸ ಅವರನ್ನು ಜಿಪಂ ಸಿಇಒ ಅಮಾನತ್ತು ಮಾಡಿದ್ದರು. ಕೆಲಸಕ್ಕೆ ಮರು‌ ನಿಯೋಜನೆ ಕುರಿತಂತೆ‌ ಉಪ ಕಾರ್ಯದರ್ಶಿಗಳ ಚೆಂಬರ್ ಗೆ ಹೋದಾಗ ಇಬ್ಬರ ನಡುವೆ ವಾಗ್ವಾದ ‌ನಡೆದಿದೆ. ನಂತ‌ರ ಕೋಪಗೊಂಡ‌ ಪಿಡಿಒ ಹಲ್ಲೆ ಮಾಡಿದ್ದಾನೆ.‌ ಈ ಕುರಿತು ಉಪ‌ ಕಾರ್ಯದರ್ಶಿಗಳು ಜಿ.ಪಂ ಸಿಇಒಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next