Advertisement

Suspend: ದೇಶದ್ರೋಹ ಆರೋಪ: ಪಿಎಚ್‌.ಡಿ. ವಿದ್ಯಾರ್ಥಿ 2 ವರ್ಷ ಅಮಾನತು

10:39 AM Apr 21, 2024 | Team Udayavani |

ಮುಂಬಯಿ: ಮುಂಬಯಿಯ ಟಾಟಾ ಇನ್‌ ಸ್ಟಿಟ್ಯೂಟ್‌ ಆಫ್ ಸೋಶಿಯಲ್‌ ಸೈನ್ಸಸ್‌ನ ಪಿಎಚ್‌.ಡಿ ವಿದ್ಯಾರ್ಥಿ ರಾಮದಾಸ್‌ ಪ್ರೀನಿ ಶಿವನಂದನ್‌ರನ್ನು 2 ವರ್ಷ ಅಮಾನತು ಮಾಡಲಾಗಿದೆ.

Advertisement

ಅವರ ವಿರುದ್ಧ ಪದೇಪದೆ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ ಹೊರಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ವಿರೋಧಿಸಿ ಮುಂಬಯಿಯಲ್ಲಿ ಕಳೆದ ಜನವರಿಯಲ್ಲಿ ವಿದ್ಯಾರ್ಥಿ ಸಂಘಟನೆ ಗಳು ಹೋರಾಟ ಕೈಗೊಂಡಿದ್ದವು.

ಪ್ರೋಗ್ರೆಸ್ಸಿವ್‌ ಸ್ಟೂಡೆಂಟ್‌ ಫೋರಂ(ಪಿಎಸ್‌ಎಫ್) ಎಂಬ ಅನಧಿಕೃತ ಸಂಘಟನೆಯ ಹೆಸರಿನಲ್ಲಿ ಹೋರಾಟದಲ್ಲಿ ಪಾಲ್ಗೊಂಡು ಸಂಸ್ಥೆಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಲಾಗಿದೆ ಎಂದು ಟಿಐಎಸ್‌ಎಸ್‌ ಹೇಳಿದೆ. ಇದು ವಿದ್ಯಾರ್ಥಿಗಳ ಧ್ವನಿ ಅಡಗಿಸುವ ಪ್ರಯತ್ನ ಎಂದು ಪಿಎಸ್‌ಎಫ್ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next