Advertisement

ಕಾಪಾಡೋ ಬಿದನಗೆರೆಯ ಶನೈಶ್ಚರ

12:12 PM May 12, 2018 | |

ಬಿದನಗೆರೆ, ಸತ್ಯ ಶನೈಶ್ಚರ ಸ್ವಾಮಿಯ ನೆಲೆವೀಡು ಎಂದೇ ಹೆಸರಾಗಿದೆ. ಬಸವಣ್ಮ ಹಾಗೂ ಪಂಚಮುಖೀ ಆಂಜನೇಯನ ದೇಗುಲಗಳೂ ಇಲ್ಲಿವೆ. ಸಾಮೂಇಕ ವಿವಾಹ, ಉಚಿತ ಆರೋಗ್ಯ ತಪಾಸಣೆಯಂಥ ಕಾರ್ಯಕ್ರಮಗಳಿಂದಲೂ ಈ ಕ್ಷೇತ್ರ ಜನಮನ್ನಣೆ ಹಾಗೂ ಮೆಚ್ಚುಗೆಗೆ ಪಾತ್ರವಾಗಿದೆ. 

Advertisement

 ತುಮಕೂರು ಜಿಲ್ಲೆ ಕುಣಿಗಲ್‌ ತಾಲ್ಲೂಕು ಬಿದನಗೆರೆ ಎಂದರೆ ಅದು ಐತಿಹಾಸಿಕ ಶ್ರೀ ಸತ್ಯಶನೇಶ್ಚರಸ್ವಾಮಿ ದೇವಾಲಯವಿರುವ ಪುಣ್ಯ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿದೆ. ಇದರ ಜೊತೆಗೆ ಉದ್ಬವ ಬಸವ, ಪಂಚಮುಖೀ ಆಂಜನೇಯಸ್ವಾಮಿಯ ದೇಗುಲಗಳೂ ಇಲ್ಲಿವೆ. ಅರಸಿ ಬಂದ ಭಕ್ತರ ಕಷ್ಟನಿವಾರಣೆ ಇಲ್ಲಿ ಸಾಧ್ಯ ಎನ್ನುವ ನಂಬಿಕೆ ಎಲ್ಲೆಡೆ ಹರಡಿರುವುದರಿಂದ ಈ ಕ್ಷೇತ್ರದಲ್ಲಿ ನಿತ್ಯ ಜನಸಾಗರ. 

 ಈ ದೇವಾಲಯದ ಹಿಂದೆ ಕೌತುಕವಾದ ಇತಿಹಾಸವೇ ಅಡಗಿದೆ. 
 ಸುಮಾರು  200 ವರ್ಷಗಳ ಹಿಂದೆ ಬಿದನಗೆರೆಯ ಕುರುಬರಹಟ್ಟಿ ಗ್ರಾಮದ ಬಸವಣ್ಣನ ಕಟ್ಟೆಯಲ್ಲಿ ಉದ್ಬವ ಬಸವಣ್ಣನನ್ನು ಗ್ರಾಮದ ಜನರು ಪ್ರತಿಷ್ಠಾಪಿಸಿ, ಆರಾಧ್ಯ ದೆ„ವವಾಗಿ ಪೂಜಿಸುತ್ತಿದ್ದರಂತೆ. ಈ ಬಸವಣ್ಣನ ಮೂರ್ತಿ ಚಾಲುಕ್ಯರ ಶೆ„ಲಿಯ ಕೆತ್ತನೆ ರೂಪದಲ್ಲಿ ಇತ್ತು. ಹೀಗಿರುವಾಗಲೇ ಅದೊಮ್ಮೆ ಭೀಕರ ಬರಗಾಲ ಎದುರಾಯಿತು. ಪರಿಣಾಮ, ಜನರು ತಮ್ಮ ಗ್ರಾಮವನ್ನು ತೊರೆದು ಬೇರೆಡೆಗೆ ವಲಸೆ ಹೋಗುವ ಪರಿಸ್ಥಿತಿ ಎದುರಾಯಿತು. ಊರು ಬರಿದಾದ ಮೇಲೆ, ಆದರೆ ಪ್ರಾಕೃತಿಕ ಹೊಡೆತಕ್ಕೆ ಸಿಲುಕಿದ ಬಸವಣ್ಣನ ಮೂರ್ತಿ ಮಣ್ಣಿನಲ್ಲಿ ಮುಚ್ಚಿಹೊಯಿತು. ವರ್ಷಗಳು ಉರುಳಿದಂತೆ ಮಳೆಯ ನೀರು ಹರಿದು ಮಣ್ಣು ಕರಗಿ ಬಸವಣ್ಣನ ಮೂರ್ತಿ ಕಾಣಿಸತೊಡಗಿತು.  ಇದನ್ನು ಬಿದನಗೆರೆ ಗ್ರಾಮದ ಡಾ.ಧನಂಜಯ್ಯಸ್ವಾಮೀಜಿ ಗಮನಿಸಿ, ಮಣ್ಣಿನಿಂದ ಬಸವಣ್ಣನನ್ನು  ಹೊರತೆಗೆದು ಪೂಜಿಸಲು ಶುರುಮಾಡಿದರು.  ಜೊತೆಗೆ ಶ್ರೀ ಸತ್ಯ ಶನೇಶ್ವರಸ್ವಾಮಿಯನ್ನು ಪ್ರತಿಷ್ಠಾಪಿಸಿ ಅಲ್ಲೊಂದು ದೇವಾಲಯವನ್ನು ನಿರ್ಮಿಸಿದರು ಎನ್ನುತ್ತದೆ ಇತಿಹಾಸ.  

  ದೇವಾಲಯ ಗೋಪುರದ ಮೇಲೆ ಈಶ್ವರ, ಗಣಪತಿ, ಷಣ್ಮುಖ, ಸುಬ್ರಮಣ್ಯ, ಲಕ್ಷಿ$¾à ಸೇರಿದಂತೆ 21 ವಿವಿಧ ದೇವರುಗಳ ಸುಂದರ ಕೆತ್ತನೆಗಳಿದ್ದು, ಭಕ್ತಾದಿಗಳನ್ನು ಆಕರ್ಷಿಸುತ್ತಿವೆ. ಪ್ರವೇಶ ದ್ವಾರವನ್ನು ಅಂದಗಾಣಿಸಲು ಮಾಡಿರುವ ಕುಸುರಿ ಕೆಲಸ ಎಂಥವರನ್ನೂ ನಿಬ್ಬೆರಗಾಗಿಸುತ್ತದೆ. ಗರ್ಭಗುಡಿಯಲ್ಲಿ ಶನೈಶ್ಚರಸ್ವಾಮಿಯೊಂದಿಗೆ ಶಿವ ,ಗಣಪತಿ ಹಾಗೂ  ನವಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಎದುರಿನಲ್ಲಿ ನಂದಿ ವಿಗ್ರಹವಿದೆ.  ನಿತ್ಯ ಪೂಜೆ ನಡೆಯುವ ಈ ದೇವಾಲಯದಲ್ಲಿ ಶಿವರಾತ್ರಿಯಂದು ಸುತ್ತಮುತ್ತಲ ಹತ್ತಾರು ಗ್ರಾಮಗಳು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತಾದಿಗಳು ಸೇರುತ್ತಾರೆ. ಈ ಸಂದರ್ಭದಲ್ಲಿ ವಿಶೇಷವಾದ ಅಭಿಷೇಕಗಳು ನಡೆಯುತ್ತವೆ. 

Advertisement

 ಭಕ್ತಾದಿಗಳಿಗೆ ಅನ್ನ ಸಂತರ್ಪಣೆ,  ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ದೇವಾಲಯದ ಆಡಳಿತ ಮಂಡಳಿಯಿಂದ ವ್ಯವಸ್ಥೆ ಮಾಡಲಾಗಿದೆ. ಈಗ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಸಹಾಸ್ರರು ಭಕ್ತರ ಅರಾಧ್ಯ ದೆ„ವವಾಗಿದೆ. 

  ಜಾತಿ, ಭಾಷೆ, ವರ್ಗ ಎನ್ನದೆ ಮದುವೆಯಾಗಲು ಇಚ್ಛಿಸುವ ವಧುವರರಿಗೆ ಶ್ರೀ ಕ್ಷೇತ್ರದಲ್ಲಿ ಸರಳ ವಿವಾಹ ನಡೆಯುತ್ತದೆ. ಆಡಳಿತ ಮಂಡಳಿಯಿಂದ ವಧು ಹಾಗೂ ವರನಿಗೆ ಮಾಂಗಲ್ಯ, ಕಾಲುಂಗರ, ವಸ್ತ್ರಗಳನ್ನು ಉಚಿತವಾಗಿ ನೀಡುತ್ತಾರೆ. ಈಗಾಗಲೇ 169 ಹೆಚ್ಚು ಜೋಡಿಗಳು ಇಲ್ಲಿ ಸಪ್ತಪದಿ ತುಳಿದಿದ್ದಾರೆ. ಗ್ರಾಮೀಣ ಪ್ರದೇಶದ ಜನರಿಗೆ ಶ್ರೀ ಕ್ಷೇತ್ರದಲ್ಲಿ ನುರಿತ ತಜ್ಞ ವೈದ್ಯರಿಂದ   ವಿವಿಧ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಒದಗಿಸಲಾಗುತ್ತಿದೆ.  ಹೀಗೆ ಧಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿಕ ಕಾರ್ಯಗಳೂ ಈ ಕ್ಷೇತ್ರದಲ್ಲಿ ನಡೆಯುತ್ತಿದೆ.  ದೇವಾಲಯವು ತುಮಕೂರು ಜಿಲ್ಲಾ ಕೇಂದ್ರದಿಂದ 38 ಕಿ.ಮೀ ಹಾಗೂ ಕುಣಿಗಲ್‌ ಪಟ್ಟಣದಿಂದ 7 ಕಿ.ಮೀ ದೂರದಲ್ಲಿ ಇದೆ. ಬಿದನಗೆರೆ ತಲುಪಲು ಕುಣಿಗಲ್‌ನಿಂದ ಸಾಕಷ್ಟು ಬಸ್‌ ಹಾಗೂ ಆಟೋಗಳ ವ್ಯವಸ್ಥೆ ಇರುತ್ತದೆ. 

ಲೋಕೇಶ್‌

Advertisement

Udayavani is now on Telegram. Click here to join our channel and stay updated with the latest news.

Next