Advertisement

ನಗರದಲ್ಲಿ ಬರಲಿ ಸೈಕಲ್‌ ಬೂತ್‌ 

03:48 PM May 20, 2018 | Team Udayavani |

ಮಂಗಳೂರಿನಂತಹ ನಗರದಲ್ಲಿ ವಾಹನಗಳ ಸಂಖ್ಯೆ ಏರಿಕೆಯಾಗಿ ನಗರದಲ್ಲಿ ಟ್ರಾಫಿಕ್‌ ಜತೆಗೆ ಪಾರ್ಕಿಂಗ್‌ ಸಮಸ್ಯೆಯೂ ಇದೆ. ಇದೆಲ್ಲವನ್ನು ದೂರ ಮಾಡುವುದಕ್ಕಾಗಿ ನಗರದ ಅಲ್ಲಲ್ಲಿ ಸೈಕಲ್‌ ಬೂತ್‌ಗಳನ್ನು ನಿರ್ಮಿಸಬೇಕಿದೆ. ಆಗ ನಗರಕ್ಕೆ ಆಗಮಿಸುವವರು ಸೈಕಲನ್ನೇ ಉಪಯೋಗಿಸಲು ಅನುಕೂಲವಾಗುತ್ತದೆ. ಜತೆಗೆ ಇದು ಪರಿಸರಕ್ಕೂ ಪ್ರಯೋಜನವಾಗುತ್ತದೆ.

Advertisement

ಅಂದರೆ ಬೈಕ್‌, ಇತರೆ ವಾಹನಗಳನ್ನು ಬಾಡಿಗೆಗೆ ಪಡೆದಂತೆ ಸೈಕಲ್‌ಗ‌ಳನ್ನು ಒಂದು ಬೂತ್‌ನಲ್ಲಿ ಬಾಡಿಗೆಗೆ ಪಡೆಯಬೇಕಾಗುತ್ತದೆ. ಬಳಿಕ ತಮ್ಮ ಕೆಲಸ ಮುಗಿಸಿ ಅದೇ ಬೂತ್‌ನಲ್ಲಿ ತಂದು ಕೊಡಬಹುದಾಗಿದೆ. ಇಲ್ಲದೇ ಇದ್ದರೆ ತನಗೆ ಹೋಗಬೇಕಾದ ಪ್ರದೇಶಕ್ಕೆ ತೆರಳಿ ಪಕ್ಕದಲ್ಲಿರುವ ಬೂತ್‌ನಲ್ಲಿ ನೀಡುವ ವ್ಯವಸ್ಥೆ ಇರಬೇಕಾಗುತ್ತದೆ.

ಉದಾಹರಣೆಗೆ ಸ್ಟೇಟ್‌ಬ್ಯಾಂಕ್‌ ನಲ್ಲಿರುವ ಒಬ್ಬ ವ್ಯಕ್ತಿಯು ಪಿವಿಎಸ್‌ನಲ್ಲಿ, ಲಾಲ್‌ಬಾಗ್‌ನಲ್ಲಿ, ಬಿಜೈನಲ್ಲಿ ಕೆಲಸ ಮುಗಿಸಿ ಕೊನೆಗೆ ಉರ್ವಸ್ಟೋರ್‌ಗೆ ಹೋಗಬೇಕಿದೆ.

ಆತ ಬಸ್‌ ಅಥವಾ ಆಟೋವನ್ನು ಬಳಸಿದರೆ ಎಲ್ಲ ಸ್ಥಳಕ್ಕೂ ಹೋಗುವುದಕ್ಕೆ ಹೆಚ್ಚಿನ ಹಣ ಖರ್ಚಾಗುತ್ತದೆ. ಆದರೆ ಆತ ಸೈಕಲ್‌ ಬಾಡಿಗೆಗೆ ಪಡೆದರೆ ಎಲ್ಲ ಕೆಲಸ ಮುಗಿಸಿ ಕೊನೆಯ ಬೂತ್‌ನಲ್ಲಿ ಸೈಕಲನ್ನು ಹಿಂತಿರುಗಿಸಬಹುದಾಗಿದೆ. ನಗರದಲ್ಲಿ ಇಂತಹ ವ್ಯವಸ್ಥೆ ಇದ್ದಾಗ ಹೆಚ್ಚಿನ ಮಂದಿ ತಮ್ಮ ವಾಹನವನ್ನು ಬಿಟ್ಟು ಸೈಕಲನ್ನು ಉಪಯೋಗಿಸುತ್ತಾರೆ. ಆರಂಭದಲ್ಲಿ ಇದು ಯಶಸ್ಸು ಪಡೆಯದೇ ಇದ್ದರೂ, ಟ್ರಾಫಿಕ್‌ನಲ್ಲಿ ಸಿಲುಕಿ ಸುಸ್ತಾದವರು ನಿಧಾನಕ್ಕೆ ಇಂತಹ ಸೈಕಲ್‌ ಗಳ ಲಾಭ ಪಡೆಯಲು ಅನುಕೂಲವಾಗುತ್ತದೆ. ಇದರಿಂದ ಖರ್ಚು ಕಡಿಮೆಯಾಗುವ ಜತೆಗೆ ಪರಿಸರ ಸ್ನೇಹಿಯಾಗುತ್ತದೆ. ಜತೆಗೆ ಸೈಕಲ್‌ಗ‌ಳನ್ನು ಪಾರ್ಕ್‌ ಮಾಡುವುದಕ್ಕೂ ಹೆಚ್ಚಿನ ಸ್ಥಳಾವಕಾಶದ ಅಗತ್ಯವಿಲ್ಲ. ಯಾವ ಒಳರಸ್ತೆಗಳಲ್ಲೂ ಸುಲಭವಾಗಿ ಸೈಕಲನ್ನು ಚಲಾಯಿಸಿಕೊಂಡು ಹೋಗಬಹುದಾಗಿದೆ. ಹೀಗಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಇಂತಹ ಸೈಕಲ್‌ ಬೂತ್‌ಗಳನ್ನು ಸ್ಥಾಪಿಸಿದರೆ ನಗರದ ಸಂಚಾರ ದಟ್ಟಣೆಗೆ ಪರಿಹಾರ ಲಭಿಸಿದಂತಾಗುತ್ತದೆ. 

ಕಿರಣ್‌ ಸರಪಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next