Advertisement

ಸರ್ಕಾರದ ಆಫರ್ ಬೇಡವೆಂದು ಪಿಯುಸಿ ಪರೀಕ್ಷೆ ಬರೆಯಲು ಮುಂದಾದ ವಿದ್ಯಾರ್ಥಿನಿ

11:07 AM Aug 19, 2021 | Team Udayavani |

ಗಂಗಾವತಿ: ಕೋವಿಡ್ ಮಹಾಮಾರಿ ಲಾಕ್ ಡೌನ್ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸದೆ ಸರಕಾರ ವಿದ್ಯಾರ್ಥಿಗಳು ಉತ್ತೀರ್ಣಗೊಳಿಸಿದೆ. ಪಿಯುಸಿ ಬೋರ್ಡ್ ಆಸಕ್ತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದರಿಂದ ಕೊಪ್ಪಳ ರಾಯಚೂರು ಜಿಲ್ಲೆಗಳ ಪೈಕಿ ಗಂಗಾವತಿಯ ಅಕ್ಷರ ಶ್ರೀ ವೆಂಕಟೇಶ್ವರ ಪಿಯುಸಿ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು. ಭೂಮಿಕಾ ಚಂದ್ರೇಗೌಡ ತಾವರಗೇರಾ ಅವರು ಸರಕಾರ ಕೊಟ್ಟ ಆಫರನ್ನೂ ತಿರಸ್ಕರಿಸಿ ಸ್ವತಃ ಪರೀಕ್ಷೆ ಬರೆದು ಫಲಿತಾಂಶ ಪಡೆಯುವುದಾಗಿ ಸರ್ಕಾರಕ್ಕೆ ಮನವಿ ಮಾಡಿದ್ದರು.

Advertisement

ಇಂದಿನಿಂದ ಖಾಸಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಜತೆಗೂಡಿ ಪರೀಕ್ಷೆ ಬರೆಯಲು ಭೂಮಿಕಾ ನಗರದ ಜೂನಿಯರ್ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾರೆ. ಇಂದಿನಿಂದ ಪರೀಕ್ಷೆ ಆರಂಭಗೊಂಡರೂ ಪರೀಕ್ಷೆ ಕೇಂದ್ರದಲ್ಲಿ ಭೂಮಿಕಾ ಗೌಡ ಮಾತ್ರ ಒಬ್ಬಳೇ ಪರೀಕ್ಷೆ ಬರೆಯುತ್ತಿದ್ದಾಳೆ. ಖಾಸಗಿ ವಿದ್ಯಾರ್ಥಿಗಳು ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಇರುವುದರಿಂದ ಅವರಿಗೆ ನಾಳೆಯಿಂದ ಪರೀಕ್ಷೆಗಳು ಆರಂಭವಾಗಲಿವೆ. ಓರ್ವ ವಿದ್ಯಾರ್ಥಿನಿ ಪರೀಕ್ಷೆಗಾಗಿ ಸುಮಾರು ಇಪ್ಪತ್ತಾರು ಜನ ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸಬೇಕಾಗಿದೆ.

ಪರೀಕ್ಷೆ ಇಲ್ಲದೆ ಉತ್ತೀರ್ಣ ಆದರೆ ಸಾಕು ಎಂದು ಎದುರು ನೋಡುವ ವಿದ್ಯಾರ್ಥಿಗಳ ಪೈಕಿ ಭೂಮಿಕಾ ಗೌಡ ವಿಶೇಷವಾಗಿದ್ದಾರೆ. ಗಂಗಾವತಿಯ ಸೈಂಟ್ ಪಾಲ್ಸ್ ಸಿಬಿಎಸ್ ಸಿ ಶಾಲೆಯಲ್ಲಿ ಹತ್ತನೇ ತರಗತಿ ಓದಿರುವ ಭೂಮಿಕಾ ನಂತರ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡಲು ನಗರದ ಅಕ್ಷರ ಶ್ರೀ ವೆಂಕಟೇಶ ವಿಜ್ಞಾನ ಪಿಯುಸಿ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ.

ಇದನ್ನೂ ಓದಿ:ಹಣದಾಸೆಗೆ 38 ದಿನದ ಮಗು ಮಾರಾಟ: ಸಾಮಾಜಿಕ ಕಾರ್ಯಕರ್ತೆ ಸೇರಿ ಮೂವರ ಬಂಧನ

ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹತ್ತನೇ ತರಗತಿ ಮತ್ತು ಪ್ರಥಮ ಪಿಯುಸಿ ಪರೀಕ್ಷೆಯ ಶೇಕಡವಾರು ಮತ್ತು ಸರ್ಕಾರದ ಕೃಪಾಂಕದಲ್ಲಿ ವಿದ್ಯಾರ್ಥಿಗಳನ್ನ ಈ ವರ್ಷ ಪರೀಕ್ಷೆ ನಡೆಸದೆ ಉತ್ತೀರ್ಣ ಗೊಳಿಸಿದೆ. ಭೂಮಿಕಾ ಸರಕಾರದ ಆಫರ್ ತಿರಸ್ಕಾರ ಮಾಡಿ ಸ್ವತಃ ತಾನೇ ಪರೀಕ್ಷೆ ಬರೆದು ಉತ್ತೀರ್ಣಗೊಂಡು ಮುಂದಿನ ವಿದ್ಯಾಭ್ಯಾಸಕ್ಕೆ ತೆರಳಲು ಅನುವು ಮಾಡಿಕೊಡುವಂತೆ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದರು.

Advertisement

ಪ್ರಾಚ್ಯವಸ್ತು ಪುರಾತತ್ವ ಕೋರ್ಸ್ ನಲ್ಲಿ ಆಸಕ್ತಿ: ಕೋವಿಡ್ ಮಹಾಮಾರಿಯ ಪರಿಣಾಮವಾಗಿ ಸರಕಾರ ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳನ್ನು ಉತ್ತೀರ್ಣ ಗೊಳಿಸಿದೆ. ಆದರೆ ತಮಗೆ ಪರೀಕ್ಷೆ ಬರೆದು ಉತ್ತೀರ್ಣ ರಾಗುವ ಬಯಕೆ ಇದ್ದ ಕಾರಣ ಇದನ್ನು ಪಾಲಕರು ಮತ್ತು ಕಾಲೇಜು ಆಡಳಿತ ಮಂಡಳಿ ಮನವಿ ಮಾಡಿದಾಗ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಆನ್ ಲೈನ್ ತರಗತಿ ಮತ್ತು ಉಪನ್ಯಾಸಕರು ನೀಡಿದ ನೋಟ್ಸ್ ಗಳಿಂದ ಮನೆಯಲ್ಲಿಯೇ ಸೆಲ್ಪ್ ಸ್ಟಡಿ ಮಾಡಿದ್ದು ಉತ್ತಮ ಅಂಕ ಬರುವ ಸಾಧ್ಯತೆ ಇದೆ.

ಸಿಇಟಿ ಹಾಗೂ ನೀಟ್ ಪರೀಕ್ಷೆ ಬರೆದು ಉತ್ತಮ ಕೋರ್ಸ್ ಸೇರುವ ಆಸಕ್ತಿ ಇದೆ. ಮುಖ್ಯವಾಗಿ ಪ್ರಾಚ್ಯವಸ್ತು ಮತ್ತು ಪುರಾತತ್ವ ಕೋರ್ಸನ್ನು ಮಾಡುವ ಬಯಕೆಯಿದೆ ಎಂದು ಭೂಮಿಕಾ ಚಂದ್ರಶೇಖರಗೌಡ ಉದಯವಾಣಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next