Advertisement

ಬಿಡುಗಡೆಗೆ ಸಿದ್ದವಾದ ಭೂತಃಕಾಲ 

06:01 AM Jan 21, 2019 | |

ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸುತ್ತಿರುವ ‘ಭೂತಃಕಾಲ’ (ಕಳೆದುಹೋದ ಕಾಲದ ಸುತ್ತ) ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಇತ್ತೀಚೆಗಷ್ಟೆ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ ಮುಂಬರುವ ಫೆಬ್ರವರಿ 1 ರಂದು ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದೆ. ದಿಂಡುದ ಮಹಾಲಕ್ಷ್ಮೀ ಕ್ರಿಯೇಷನ್ಸ್‌ ಲಾಂಛನದಲ್ಲಿ ಹಂಸ ಶ್ರೀಕಾಂತ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 

Advertisement

ನಿಗೂಢ ಸ್ಥಳವೊಂದರಲ್ಲಿ, ಭಯಾನಕ ಘಟನೆಗಳ ಸುತ್ತ ನಡೆಯುವ ಹಾರರ್‌-ಥ್ರಿಲ್ಲರ್‌ ಕಥಾಹಂದರವಿರುವ ಈ ಚಿತ್ರಕ್ಕೆ ಸಚಿನ್‌ ಬಾಡಾ ನಿರ್ದೇಶನವಿದೆ. ಈ ಚಿತ್ರಕ್ಕೆ ಪ್ರಮೋದ್‌ ಸೂರ್ಯ ಸಂಗೀತವಿದ್ದು, ಚಿತ್ರದಲ್ಲಿ ಆನಂದ್‌ ಗಣೇಶ್‌, ರಕ್ಷಿತ, ಅನನ್ಯ ಭಟ್‌, ಟೆನ್ನಿಸ್‌ ಕೃಷ್ಣ, ಶ್ರೀನಿವಾಸ ಪ್ರಭು, ಅರುಣಾ ಬಾಲರಾಜ್‌, ಕಿರಣ್‌ ಕುಮಾರ್‌, ತರಂಗ ವಿಶ್ವ, ಬೇಬಿ ವೈಭವಿ, ಹರೀಶ್‌, ರಮೇಶ್‌, ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next