Advertisement

22ರಂದು ಸಕ್ಕರೆ ಕಾರ್ಖಾನೆಗೆ ಭೂಮಿಪೂಜೆ

11:03 AM Nov 10, 2021 | Team Udayavani |

ಚಿಂಚೋಳಿ: ಪಟ್ಟಣ ಹೊರ ವಲಯದ ಕಲಬುರಗಿ-ಚಿಂಚೋಳಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಕಳೆದ ಎರಡು ದಶಕಗಳಿಂದ ನನೆಗುದಿಗೆ ಬಿದ್ದಿರುವ ಚಿಂಚೋಳಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ನ.22ರಂದು ಭೂಮಿ ಪೂಜೆ ಮಾಡಲಾಗುತ್ತಿದೆ.

Advertisement

ಮಾಜಿ ಸಚಿವ ದಿ. ವೈಜನಾಥ ಪಾಟೀಲ 1988ರಲ್ಲಿ ಶಾಸಕರಾಗಿದ್ದಾಗ ಸರ್ಕಾರದಿಂದ ಅನುಮತಿ ಪಡೆದು ಈ ಸಕ್ಕರೆ ಕಾರ್ಖಾನೆ ಮಂಜೂರಿ ಮಾಡಿದ್ದರು. ಐದು ಸಾವಿರ ಮೆಟ್ರಿಕ್‌ ಟನ್‌ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿದ ಕಾರ್ಖಾನೆ ಇದಾಗಿದ್ದರೂ ಸಂಪೂರ್ಣ ಯಂತ್ರೋಪಕರಣ ಜೋಡಣೆ ಮಾಡಿರಲಿಲ್ಲ. ಎರಡು ದಶಕಗಳ ನಂತರ ತಾಲೂಕು ರೈತ ಹಿತರಕ್ಷಣಾ ಹೋರಾಟ ಸಮಿತಿ ಮುಖಂಡರು ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಒತ್ತಾಯಿಸಿ ನಿಯೋಗದೊಂದಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಸಲಹೆ ಮೇರೆಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಕ್ಕರೆ ಕಾರ್ಖಾನೆಯನ್ನು ಹರಾಜಿನಲ್ಲಿ ಖರೀದಿಸಿದ್ದು, ಈಗ ಭೂಮಿ ಪೂಜೆಗೆ ಸಿದ್ಧವಾಗಿದೆ. ಸ

ಕ್ಕರೆ ಕಾರ್ಖಾನೆ ಪ್ರಾರಂಭೋತ್ಸವಕ್ಕೆ ಮುಹೂರ್ತ ನಿಗದಿ ಆಗಿರುವುದರಿಂದ ಕಾರ್ಖಾನೆ ಸುತ್ತಮುತ್ತ ದಟ್ಟವಾಗಿ ಬೆಳೆದಿರುವ ಗಿಡಗಂಟಿ, ಮುಳ್ಳಿನ ಪೊದೆಗಳನ್ನು ತೆಗೆದು ಹಾಕಲಾಗುತ್ತಿದೆ. ಹೀಗಾಗಿ ಕಬ್ಬು ಬೆಳೆಗಾರರ ಮೊಗದಲ್ಲಿ ಸಂತಸ ಮೂಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next