Advertisement

ಸುಪ್ರೀಂ ಕೋರ್ಟಿನ ಮೀಸಲಾತಿ ತೀರ್ಪನ್ನು ಖಂಡಿಸಿ ಭೀಮ್‌ ಆರ್ಮಿ ಪ್ರತಿಭಟನೆ

09:43 AM Feb 17, 2020 | Team Udayavani |

ಹೊಸದಿಲ್ಲಿ: ಸರಕಾರಿ ಉದ್ಯೋಗ ಮತ್ತು ಭಡ್ತಿಯಲ್ಲಿ ಮೀಸಲಾತಿಯು ಎಸ್‌ಸಿ, ಎಸ್‌ಟಿಗಳ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂ ಕೋರ್ಟ್‌ ತೀರ್ಪನ್ನು ಖಂಡಿಸಿ ಹೊಸದಿಲ್ಲಿಯಲ್ಲಿ ರವಿವಾರ ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಮಂಡಿಹೌಸ್‌ನಿಂದ ಜಂತರ್‌ಮಂತರ್‌ವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

Advertisement

ಸುಪ್ರೀಂ ಕೋರ್ಟ್‌ನ ಈ ತೀರ್ಪು ದೇಶದ ಸಂವಿಧಾನವು ನೀಡಿರುವ ಸಮಾನತೆಯ ಹಕ್ಕಿನ ಸಂಪೂರ್ಣ ಉಲ್ಲಂಘನೆ ಎಂದು ಭೀಮ್‌ ಆರ್ಮಿ ಹೇಳಿದೆ. ಇನ್ನು ಈ ತೀರ್ಪನ್ನು ರದ್ದು ಮಾಡುವ ಕುರಿತು ಕೇಂದ್ರ ಸರಕಾರ ಅಧ್ಯಾದೇಶ ಹೊರಡಿಸಬೇಕೆಂದು ಆಗ್ರಹಿಸಿ ಫೆ. 23ರಂದು ‘ಭಾರತ್‌ ಬಂದ್‌’ಗೂ ಆಜಾದ್‌ ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next