Advertisement

ಹೆಗಡೆಕಟ್ಟಾದಲ್ಲಿ ಗೋವಿನ ತಲೆ ಪತ್ತೆ ಪ್ರಕರಣ: ದುಷ್ಕರ್ಮಿಗಳ ಪತ್ತೆಗೆ ಶಾಸಕ ಭೀಮಣ್ಣ ಸೂಚನೆ

03:03 PM Jul 02, 2023 | Team Udayavani |

ಶಿರಸಿ: ತಾಲೂಕಿನ ಹೆಗಡೆಕಟ್ಟಾ ವ್ಯಾಪ್ತಿಯಲ್ಲಿ ಸಿಕ್ಕಿದ ಗೋವಿನ ತಲೆಗೆ ಸಂಬಂಧಿಸಿ ಯಾರೇ ತಪ್ಪಿತಸ್ಥರಾದರೂ ಕ್ರಮ ಕೈಗೊಳ್ಳುವಂತೆ ಶಾಸಕ ಭೀಮಣ್ಣ‌ ನಾಯ್ಕ ಪೊಲೀಸರಿಗೆ ಸೂಚಿಸಿದ್ದಾರೆ.

Advertisement

ಈ ಕೃತ್ಯವನ್ನು ಖಂಡಿಸುತ್ತೇನೆ ಹಾಗೂ ಈ ಕೃತ್ಯ ನಡೆಸಿದ ದುಷ್ಕರ್ಮಿಗಳು ಯಾರೇ ಇರಲಿ ಅವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಪೊಲೀಸ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಕೂಡ ಶಾಸಕ ಭೀಮಣ್ಣ‌ ತಿಳಿಸಿದ್ದಾರೆ.

ಈ‌ ಮಧ್ಯೆ‌ ಆನ್ ಲೈನ್ ಗೇಮ್‌ ಮೂಲಕ ಹಣ‌ ಕಳೆದುಕೊಂಡು ಸಾವಿಗೆ ಶರಣಾದ ಯುವಕನ ಕುರಿತು ಸಾಂತ್ವನ ನುಡಿದ ಅವರು, ಯಾರೂ ಇಂತಹ ಮೋಸದ ಕೃತ್ಯಕ್ಕೆ ಬಲಿ ಆಗಬಾರದು. ಹಣ ಹಾಕಿ ಆಡುವ ಆಟ ಕೂಡ ಆಡಬಾರದು. ಗೌರವಯುತ ಬದುಕಿಗೆ ಸಾಕಷ್ಟು ಮಾರ್ಗಗಳು ಇವೆ. ಸರಕಾರದ ಮಟ್ಟದಲ್ಲೂ ಆನ್ ಲೈನ್‌ ಮೋಸದಾಟದ‌ ಬಗ್ಗೆ, ಯುವಕರಲ್ಲಿ‌ ಹೆಚ್ಚುತ್ತಿರುವ ಗೀಳಿನ ಬಗ್ಗೆ ಮಾತನಾಡುವದಾಗಿ ಪ್ರತಿಕ್ರಿಯೆ‌ ನೀಡಿದರು.

ಇದನ್ನೂ ಓದಿ: ನಾವು ಕೊಟ್ಟಂತ ಭಾಷೆ ಉಳಿಸಿಕೊಳ್ಳುತ್ತಿದ್ದೇವೆ, ನಮಗೆ ಕೆಲಸ ಮಾಡಲು ಬಿಡಿ… :ಹೆಬ್ಬಾಳ್ಕರ್

Advertisement

Udayavani is now on Telegram. Click here to join our channel and stay updated with the latest news.

Next