Advertisement

ಕಾರಿಗೆ ಡಿಕ್ಕಿ ಹೊಡೆದ ವಿಚಾರ ಕೇಳಲು ಹೋದ ಮೂವರ ಮೇಲೆ ಹಲ್ಲೆ… ದೂರು ದಾಖಲು

08:52 PM Jun 30, 2023 | Team Udayavani |

ಭಟ್ಕಳ: ಪಿಕ್ ಅಪ್ ವಾಹನವೊಂದು ಕಾರಿಗೆ ಡಿಕ್ಕಿಯಾಗಿದ್ದನ್ನು ಕೇಳಲು ಹೋದ ಮೂವರಿಗೆ ಧಮ್ಕಿ ಹಾಕಿ ಕೈಯಿಂದ, ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿರುವ ಘಟನೆ ಗುರುವಾರ ರಾತ್ರಿ ೧೨.೩೦ರ ಸುಮಾರಿಗೆ ನಗರದ ಖಲೀಫಾ ಸ್ಟೀಟ್‌ನಲ್ಲಿ ನಡೆದಿದೆ.

Advertisement

ಚಂದ್ರಶೇಖರ ತಿಮ್ಮಪ್ಪ ಗೊಂಡ, ಪ್ರವೀಣ ರತ್ನಾಕರ ಶೆಟ್ಟಿ, ಸಂತೋಷ ವೆಂಕಟೇಶ ನಾಯ್ಕ ಮೂವರು ಭಟ್ಕಳದಿಂದ ಮಾರುಕೇರಿಯ ಕಡೆಗೆ ಹೋಗುತ್ತಿರುವಾಗ ಕಲ್ಲಬ್ಬೆಯ ಬಳಿಯಲ್ಲಿ ಪಿಕ್‌ಅಪ್ ವಾಹನವೊಂದರ ಚಾಲಕ ಕಾರಿಗೆ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೇ ಪರಾರಿಯಾಗಿದ್ದ, ಕಾರಿನಲ್ಲಿ ಪಿಕ್ ಅಪ್ ವಾಹನವನ್ನು ಬೆನ್ನಟ್ಟಿ ಹೋದಾಗ ಆತ ವಾಹನವನ್ನು ಖಲೀಫಾ ಸ್ಟೀಟ್‌ಗೆ ತೆಗೆದುಕೊಂಡು ಹೋಗಿದ್ದಾನೆ ಈ ವೇಳೆ ಕಾರಿನಲ್ಲಿ ತೆರಳಿದ ಮೂವರು ಪಿಕ್ ಅಪ್ ವಾಹನ ಹಿಂಬಾಲಿಸಿ ಚಾಲಕನಲ್ಲಿ ಅಪಘಾತ ಮಾಡಿದ ಕುರಿತು ವಿಚಾರಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ತಾವು ಅಪಘಾತದ ಮಾಡಿರುವ ವಿಚಾರ ಕೇಳಲು ಹೋದಾಗ ನಮ್ಮ ಕಾರನ್ನು ಅಡ್ಡಗಟ್ಟಿ ಸುಮಾರು ೫೦-೬೦ ಜನರು ಕಾರನ್ನು ಕಲ್ಲಿನಿಂದ ಜಜ್ಜಿ ಜಖಂ ಗೊಳಿಸಿದ್ದಲ್ಲದೇ ನಮ್ಮನ್ನು ಕಾರಿನಿಂದ ಹೊರಕ್ಕೆ ಎಳೆದು ಎಳೆದಾಡಿ, ಕೈಯಿಂದ ಹಾಗೂ ದೊಣ್ಣೆಯಿಂದ ಹೊಡೆದು ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ. ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡ ನಗರ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರ್ ಹನುಮಂತಪ್ಪ ಕುಡಗುಂಟಿ ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ನಾಗರಹೊಳೆಯಲ್ಲಿ ಹುಲಿ – ಚಿರತೆ ಕಾದಾಟ… ಹೆಣ್ಣು ಚಿರತೆ ಸಾವು

Advertisement

Udayavani is now on Telegram. Click here to join our channel and stay updated with the latest news.

Next