Advertisement

Bharath Scout – Guides ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ಅಧಿಕಾರ ಸ್ವೀಕಾರ

12:46 AM Jul 15, 2024 | Team Udayavani |

ಉಡುಪಿ: ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌. ಸಿಂಧ್ಯಾ ಮಾರ್ಗದರ್ಶನ ಹಾಗೂ ಸೂಚನೆ ಯಂತೆ ಜಿಲ್ಲಾ ಮುಖ್ಯ ಆಯುಕ್ತರಾಗಿ ನೇಮಕಗೊಂಡ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅವರ ಪದಪ್ರದಾನ ಕಾರ್ಯಕ್ರಮವು ಪ್ರಗತಿನಗರ ಡಾ| ವಿ. ಎಸ್‌. ಆಚಾರ್ಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ರವಿವಾರ ನಡೆಯಿತು.

Advertisement

ಜಯಕರ ಶೆಟ್ಟರಿಗೆ ಜಿಲ್ಲಾ ಕಾರ್ಯ ದರ್ಶಿ ಆನಂದ ಅಡಿಗ ಕಂಠಹಾರ ತೊಡಿಸಿ, ರಾಜ್ಯ ಸಂಘಟನ ಆಯುಕ್ತ ಎಂ. ಪ್ರಭಾಕರ ಭಟ್‌ ಆದೇಶ ಪ್ರತಿ ನೀಡಿ ಅಧಿಕಾರ ಹಸ್ತಾಂತರಿಸಿದರು.

ಅಧಿಕಾರ ಸ್ವೀಕರಿಸಿದ ಜಯಕರ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿಯೇ ಶಿಸ್ತನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ನೀತಿ- ನಿಯಮಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿ ಸಂಸ್ಥೆ ಮತ್ತು ವಿದ್ಯಾರ್ಥಿಗಳಿಗೆ ಬೇಕಾದ ಆವಶ್ಯಕತೆಗಳನ್ನು ಪೂರೈಸು ವಲ್ಲಿ ಪ್ರಯತ್ನಿಸಲಾಗುವುದು. ಈ
ಜವಾಬ್ದಾರಿಯನ್ನು ಮುತುವರ್ಜಿ ಯಿಂದ ನಿಭಾಯಿಸಲಾಗುವುದು ಎಂದರು.

ಜಿಲ್ಲಾ ಆ್ಯತ್ಲೆಟಿಕ್ಸ್‌ ಅಸೋಸಿ ಯೇಶನ್‌ ಅಧ್ಯಕ್ಷ ಹರಿಪ್ರಸಾದ್‌ ರೈ, ಉದ್ಯಮಿಗಳಾದ ಮಹಮ್ಮದ್‌ ಮೌಲಾ, ದಿವಾಕರ ಸನಿಲ್‌, ಜಿಲ್ಲಾ ಖಜಾಂಚಿ ವಿ.ಜಿ. ಬೈಕಾಡಿ, ಜಿಲ್ಲಾ ಗೈಡ್‌ ಆಯುಕ್ತೆ ಜ್ಯೋತಿ ಜೆ. ಪೈ, ರಾಜ್ಯ ಸಹಾಯಕ ಸಂಘಟನ ಆಯುಕ್ತೆ ಸುಮನಾ ಶೇಖರ್‌, ಜಿಲ್ಲಾ ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಸ್ಥೆ ವತಿಯಿಂದ ಜಯಕರ ಶೆಟ್ಟಿಅವರನ್ನು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next