Advertisement

ಭಾರತ್ ಬಂದ್ : ಕೊಪ್ಪಳದಲ್ಲೂ ನೀರಸ ಪ್ರತಿಕ್ರಿಯೆ; ಅಂಗಡಿ ಮುಂಗಟ್ಟುಗಳು ಆರಂಭ

10:34 AM Jan 09, 2020 | keerthan |

ಕೊಪ್ಪಳ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಪ್ರತಿಭಟನೆಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಕೊಪ್ಪಳದಲ್ಲಿ ಎಂದಿನಂತೆ ಸರ್ಕಾರಿ ಬಸ್, ಖಾಸಗಿ ವಾಹನಗಳ ಸಂಚಾರ ಆರಂಭವಾಗಿದೆ. ನಗರದಿಂದ ಊರುಗಳಿಗೆ ಸಾರಿಗೆ ಸಂಸ್ಥೆ ಬಸ್ ಗಳು ಸಂಚಾರ ಆರಂಭಸಿದೆ. ಹಾಗಾಗಿ ನಗರದಲ್ಲಿ ಯಾವುದೇ ರೀತಿಯ ಬಂದ್ ಬಿಸಿ ತಟ್ಟಿಲ್ಲ.

ಜಿಲ್ಲೆಯಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟುಗಳು ಆರಂಭವಾಗಿದೆ. ಹೋಟೆಲ್, ಅಂಗಡಿ, ಪೆಟ್ರೋಲ್ ಬಂಕ್, ತರಕಾರಿ ಮಾರುಕಟ್ಟೆಗಳು ಎಂದಿನಂತೆ ವಹಿವಾಟು ಆರಂಭಿಸಿದ್ದು ಜನಜೀವನ ಯಥಾಸ್ಥಿತಿ ಮುಂದುವರಿದಿದೆ.

ಶಾಲಾ ಕಾಲೇಜಿಗೆ ಯಾವುದೇ ರಜೆ ಘೋಷಿಸಿಲ್ಲ. ವಿದ್ಯಾರ್ಥಿಗಳು ಶಾಲಾ ಕಾಲೇಜಿನತ್ತ ಪ್ರತಿನಿತ್ಯದಂತೆ ಹೆಜ್ಜೆ ಹಾಕಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next