Advertisement

ಬೆಳ್ತಂಗಡಿ: ಕರ್ನಾಟಕ ತ್ರೋಬಾಲ್ ತಂಡಕ್ಕೆ ಆಯ್ಕೆಯಾದ ಬಂದಾರು ಗ್ರಾಮದ ಭರತೇಶ್ ಗೌಡ

12:11 PM Oct 26, 2021 | Team Udayavani |

 

Advertisement

ಬೆಳ್ತಂಗಡಿ: ಬಂದಾರು ಗ್ರಾಮದ ಮೈರೋಳ್ತಡ್ಕದ ಭರತೇಶ್ ಗೌಡ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾವಳಿಗಾಗಿ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಅ. 29 ರಿಂದ 31ರ ವರೆಗೆ ಹರಿಯಾಣ ವಿಶ್ವವಿದ್ಯಾಲಯ ದಲ್ಲಿ‌ ಪಂದ್ಯಾಕೂಟ ನಡೆಯಲಿದ್ದು, ಪ್ರಸ್ತುತ ಇವರು ವಿವೇಕಾನಂದ ಕಾಲೇಜಿನಲ್ಲಿ ಅಂತಿಮ‌ ವರ್ಷದ  ಬಿ.ಕಾಂ ಪದವಿ  ವಿದ್ಯಾರ್ಥಿಯಾಗಿದ್ದಾರೆ.

ಬೆಳ್ತಂಗಡಿ ವಾಣಿ ಪಿ,ಯು‌ ಕಾಲೇಜಿನ ಹಳೆ  ವಿದ್ಯಾರ್ಥಿಯಾಗಿದ್ದಾರೆ. ಪಿ,ಯು ವಿದ್ಯಾಭ್ಯಾಸದ  ಸಂದರ್ಭದಲ್ಲೂ‌ ರಾಷ್ಟಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ‌ ಆಯ್ಕೆಯಾಗಿ ಉತ್ತಮ ಪ್ರದರ್ಶನದೊಂದಿಗೆ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದರು.

ಇವರು ಬಂದಾರು ಗ್ರಾಮದ ಮೈರೋಳ್ತಡ್ಕ, ನೆಲ್ಲಿದಖಂಡ‌  ಶ್ರೀ ಬೊಮ್ಮಣ್ಣ ಗೌಡ  ಮತ್ತು ಶ್ರೀಮತಿ ಚೆಲುವಮ್ಮ ದಂಪತಿಗಳ ಪುತ್ರರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next