Advertisement

ಪ್ರತಿಗಾಮಿ ಮನಸ್ಸುಗಳಿಂದ ತಪ್ಪಿದ ಭಾರತರತ್ನ

01:41 AM Jan 28, 2019 | Team Udayavani |

ಕೂಡಲಸಂಗಮ: ‘ಸಮಾನತೆಯ ಪ್ರತಿಪಾದಕರಾಗಿದ್ದ ಸಿದ್ಧಗಂಗಾ ಮಠದ ಡಾ| ಶಿವಕುಮಾರ ಶ್ರೀಗಳು ಬಸವಣ್ಣನವರ ಅನುಯಾಯಿಗಳಾಗಿದ್ದ ಕಾರಣಕ್ಕಾಗಿಯೇ ಕೆಲವೊಂದು ಪ್ರತಿಗಾಮಿ ಮನಸ್ಸುಗಳು ಭಾರತರತ್ನ ತಪ್ಪಿಸಿರುವ ಶಂಕೆಯಿದೆ’ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಿಂದ ಆಯ್ಕೆಯಾದ ಕೇಂದ್ರ ಸಚಿವರು ಶ್ರೀಗಳ ಬಗ್ಗೆ ಗೌರವ ಹೊಂದಿದ್ದರೆ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಮೂಲಕ ಶ್ರೀಗಳ, ಭಕ್ತರ ಪರ ನಿಲ್ಲಬೇಕು ಎಂದರು. ರಾಜ್ಯದಿಂದ ಆಯ್ಕೆಯಾದ ಲೋಕಸಭಾ ಸದಸ್ಯರು ಸಹ ಸಿದ್ಧಗಂಗಾ ಮಠದ ಪ್ರಸಾದದ ಋಣದಲ್ಲಿದ್ದು, ಈ ಋಣ ತೀರಿಸಲು ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಬೇಕು. ಸಿದ್ಧಗಂಗಾ ಶ್ರೀಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ಘೋಷಿಸುವ ಮೂಲಕ ಪ್ರಧಾನಿ ಮೋದಿ ಗೌರವ ಹೆಚ್ಚಿಸಿಕೊಳ್ಳಬೇಕು. ಇಲ್ಲವಾದರೆ ಜನರ ವಿಶ್ವಾಸ, ನಂಬಿಕೆ ಕಳೆದುಕೊಳ್ಳುವ ಸಂದರ್ಭ ಬರಬಹುದೆಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next