Advertisement

Bharat Jodo Nyay Yatra; ಇಂಫಾಲ್ ಗೆ ತೆರಳಬೇಕಿದ್ದ ರಾಹುಲ್ ಗಾಂಧಿ ವಿಮಾನ ವಿಳಂಬ

10:38 AM Jan 14, 2024 | Team Udayavani |

ಹೊಸದಿಲ್ಲಿ: ಭಾರತ್ ಜೋಡೋ ನ್ಯಾಯ್ ಯಾತ್ರೆಗಾಗಿ ಇಂಫಾಲ್ ಗೆ ತೆರಳಬೇಕಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಯಾಣ ವಿಳಂಬವಾಗಿದೆ. ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಕವಿದ ಕಾರಣ ರಾಹುಲ್ ಅವರ ವಿಶೇಷ ವಿಮಾನ ಟೇಕ್ ಆಫ್ ಆಗುವುದು ತಡವಾಗಿದೆ.

Advertisement

ದಟ್ಟವಾದ ಮಂಜಿನ ಪರಿಸ್ಥಿತಿಯಿಂದ ಕಡಿಮೆ ಗೋಚರತೆಯಿಂದಾಗಿ ವಿಮಾನವು ವಿಳಂಬವಾಯಿತು.

ರಾಹುಲ್ ಗಾಂಧಿ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅವರು ಇಂದು ಮಣಿಪುರದ ತೌಬಲ್‌ ನಿಂದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಗೆ ಚಾಲನೆ ನೀಡಲಿದ್ದಾರೆ. ಯಾತ್ರೆಯು 110 ಜಿಲ್ಲೆಗಳ ಮೂಲಕ 67 ದಿನಗಳಲ್ಲಿ 6,700 ಕಿಲೋಮೀಟರ್‌ಗಳನ್ನು ಕ್ರಮಿಸಲಿದೆ. ಈ ಯಾತ್ರೆಯು ಈಶಾನ್ಯ ರಾಜ್ಯಗಳಲ್ಲಿ ಆರಂಭವಾಗಲಿದ್ದು, ಉತ್ತರ ಮತ್ತು ಮಧ್ಯ ಭಾಗದ ಮೂಲಕ ಮಾರ್ಚ್ 20 ರಂದು ಮಹಾರಾಷ್ಟ್ರದಲ್ಲಿ ಮುಕ್ತಾಯಗೊಳ್ಳಲಿದೆ.

ಇದನ್ನೂ ಓದಿ:Bengaluru; ರಾಸಲೀಲೆ ಕಂಡ ಪತಿಯ ಕೊಂದ ಪತ್ನಿ,ಪ್ರಿಯಕರ!; ರುಬ್ಬುವ ಕಲ್ಲು ಎತ್ತಿಹಾಕಿ ಹತ್ಯೆ

ಮಂಜಿನ ನಡುವೆ ಕಡಿಮೆ ಗೋಚರತೆಯಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಹಲವಾರು ವಿಮಾನ ಕಾರ್ಯಾಚರಣೆಗಳು ವಿಳಂಬವಾಗಿವೆ

Advertisement
Advertisement

Udayavani is now on Telegram. Click here to join our channel and stay updated with the latest news.

Next