Advertisement

ಸೇವಾನಿರತರಿಗೆ ಭಾರತ್‌ ಬ್ಯಾಂಕ್‌ ಅತ್ಯುತ್ತಮ ಸಂಸ್ಥೆ : ವಾಸುದೇವ ಸಾಲ್ಯಾನ್‌

01:18 PM Aug 07, 2021 | Team Udayavani |

ಮುಂಬಯಿ: ಭಾರತ್‌ ಕೋ-ಆಪರೇಟಿವ್‌ ಬ್ಯಾಂಕ್‌ ಇದರ ಕೇಂದ್ರ ಕಚೇರಿಯ ಮಹಾಪ್ರಬಂಧಕ ವಾಸುದೇವ ಎಂ. ಸಾಲ್ಯಾನ್‌ ಜೂ. 30ರಂದು ಸೇವಾ ನಿವೃತ್ತರಾಗಿದ್ದು, ಅವರಿಗೆ ಭಾರತ್‌ ಬ್ಯಾಂಕ್‌ ನಿರ್ದೇಶಕ ಮಂಡಳಿಯಿಂದ ವಿದಾಯಕೂಟವನ್ನು ಜು. 17ರಂದು ಕೇಂದ್ರ
ಕಚೇರಿಯಲ್ಲಿ ಆಯೋಜಿಸಲಾಗಿತ್ತು.

Advertisement

ಈ ಸಂದರ್ಭದಲ್ಲಿ ಭಾರತ್‌ ಬ್ಯಾಂಕ್‌ ನಿರ್ದೇಶಕ ಮಂಡಳಿ ಸದಸ್ಯರು ವಾಸುದೇವ ಎಂ. ಸಾಲ್ಯಾನ್‌ ಅವರನ್ನು ಶಾಲು ಹೊದೆಸಿ, ಹೂಗುತ್ಛ
ನೀಡಿ ಸಮ್ಮಾನಿಸಿದರು. ಸಮ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ವಾಸುದೇವ ಸಾಲ್ಯಾನ್‌, ಸೇವಾನಿರತ ಉದ್ಯೋಗಿಗಳಿಗೆ ಭಾರತ್‌ ಬ್ಯಾಂಕ್‌ ಒಂದು ಅತ್ಯುತ್ತಮ ಸಂಸ್ಥೆಯಾಗಿದೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದು ತಿಳಿಸಿದರು.

ಬ್ಯಾಂಕಿನ ಕಾರ್ಯಾಧ್ಯಕ್ಷ ಯು. ಶಿವಾಜಿ ಪೂಜಾರಿ, ಉಪ ಕಾರ್ಯಾಧ್ಯಕ್ಷೆ ರೋಹಿಣಿ ಜೆ. ಸಾಲ್ಯಾನ್‌, ನಿರ್ದೇಶಕರಾದ ಶಾರದಾ ಸೂರು
ಕರ್ಕೇರ, ಎಲ್‌. ವಿ. ಅಮೀನ್‌, ಜಯ ಎ. ಕೋಟ್ಯಾನ್‌, ಪುರುಷೋತ್ತಮ್‌ ಕೋಟ್ಯಾನ್‌, ಭಾಸ್ಕರ ಎಂ. ಸಾಲ್ಯಾನ್‌, ಪ್ರೇಮನಾಥ್‌ ಪಿ.
ಕೋಟ್ಯಾನ್‌, ಸೂರ್ಯಕಾಂತ ಜಯ ಸುವರ್ಣ, ಸೋಮನಾಥ ಬಾಬು ಅಮೀನ್‌, ನಾರಾಯಣ ಟಿ. ಪೂಜಾರಿ, ಮೋಹನ್‌ದಾಸ್‌ ಎ. ಪೂಜಾರಿ,
ಗಂಗಾಧರ ಜೆ. ಪೂಜಾರಿ, ಕೆ. ಬಿ. ಪೂಜಾರಿ, ರಾಜಾ ವಿ. ಸಾಲ್ಯಾನ್‌, ಹರಿಜನ್‌ ಅನºಳಗನ್‌, ಜ್ಯೋತಿ ಕೃಷ್ಣ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ:ಬದಲಾವಣೆ ತರುವ ನಿಟ್ಟಿನಲ್ಲಿ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ: ಸಿಎಂ ಬೊಮ್ಮಾಯಿ

ಬ್ಯಾಂಕ್‌ನ ಆಡಳಿತ ನಿರ್ದೇಶಕ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿದ್ಯಾನಂದ ಎಸ್‌. ಕರ್ಕೇರ, ಜಂಟಿ ಆಡಳಿತ ನಿರ್ದೇಶಕ ದಿನೇಶ್‌ ಬಿ.
ಸಾಲ್ಯಾನ್‌, ಮುಖ್ಯ ಮಾಹಿತಿ ಅಧಿಕಾರಿ ನಿತ್ಯಾನಂದ ಎಸ್‌. ಕಿರೋಡಿಯನ್‌, ಮಹಾಪ್ರಬಂಧಕರಾದ ಮಹೇಶ್‌ ಬಿ. ಕೋಟ್ಯಾನ್‌, ವಿಶ್ವನಾಥ
ಜಿ. ಸುವರ್ಣ, ಉಪ ಮಹಾಪ್ರಬಂಧಕ ಸತೀಶ್‌ ಎಂ. ಬಂಗೇರ, ಸಹಾಯಕ ಮಹಾಪ್ರಬಂಧಕಿ ಮಂಜುಳಾ ಎನ್‌. ಸುವರ್ಣ ಮತ್ತಿತರರಿದ್ದರು.

Advertisement

ಬ್ಯಾಂಕ್‌ನ ನಿರ್ದೇಶಕ ಮಂಡಳಿ ಹಾಗೂ ಆಡಳಿತ ಮಂಡಳಿಯು ವಾಸುದೇವ ಸಾಲ್ಯಾನರ ನಿವೃತ್ತ ಬದುಕು ಸಂತೋಷದಾಯಕವೂ ಸುಖಕರವೂ ಆಗಿರಲಿ ಎಂದು ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next