Advertisement

ಭಾರತ್‌ ಬಂದ್‌ : ತೆಲಂಗಾಣದಲ್ಲಿ ಸಪ್ಪೆ, ಪ್ರತಿಭಟನಕಾರರು ವಶಕ್ಕೆ

12:35 PM Sep 10, 2018 | Team Udayavani |

ಹೈದರಾಬಾದ್‌ : ತೆಲಂಗಾಣದಲ್ಲಿ  ಭಾರತ್‌ ಬಂದ್‌ ಗೆ ಮಿಶ್ರ ಪ್ರತಿಕ್ರಿಯೆ ತೋರಿ ಬಂದಿದೆ. ಇಂದಿನ ಭಾರತ್‌ ಬಂದ್‌ ನಲ್ಲಿ ಈ ತನಕ ಯಾವುದೇ ಅಹಿತಕರ ಘಟನೆ ಎಲ್ಲಿಯೂ ನಡೆದ ವರದಿಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಂತೆಯೇ ಜನಜೀವನ, ವಾಹನ ಸಂಚಾರ ಎಂದಿನಂತೆ ಸಾಗಿದೆ. 

Advertisement

ಕಾಂಗ್ರೆಸ್‌, ಎಡ ಮತ್ತು ತೆಲಗು ದೇಶಂ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಇಲ್ಲಿನ ರಾಜ್ಯ ಸಾರಿಗೆ ಬಸ್‌ ನಿಲ್ದಾಣದಲ್ಲಿ ಬಸ್ಸುಗಳ ಸಂಚಾರಕ್ಕೆ ತಡೆ ಒಡ್ಡಿದಾಗ ಪೊಲಿಸರು ಅವರನ್ನು ವಶಕ್ಕೆ ತೆಗೆದುಕೊಂಡರು. 

ಕರೀಂ ನಗರ ಜಿಲ್ಲೆಯ ಧರ್ಮಪುರಿ ಪಟ್ಟಣದಲ್ಲಿ  ಎಐಸಿಸಿ ಕಾರ್ಯದರ್ಶಿ ಶ್ರೀನಿವಾಸನ್‌ ಕೃಷ್ಣನ್‌ ಮತ್ತು ಇತರ 40 ಮಂದಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next