Advertisement

Bharamasagara ಗ್ರಾಪಂ ಪಿಡಿಒ ಲೋಕಾ ಬಲೆಗೆ

09:57 PM Dec 16, 2023 | Team Udayavani |

ಭರಮಸಾಗರ: ಮನೆಯೊಂದರ ಖಾತೆ ಬದಲಾವಣೆ ಮಾಡಿಕೊಡುವ ಸಂಬಂಧ 40 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಇಲ್ಲಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಬಿ.ಎನ್‌. ಕುಮಾರಸ್ವಾಮಿ ಎಂಬುವರಿಗೆ ಸಂಬಂ ಧಿಸಿದ ಮನೆಯ ಖಾತೆ ಬದಲಾವಣೆ ಸಂಬಂಧ ಪಿಡಿಒ ಶಿವಪ್ಪ 50,000 ರೂ.ಗಳ ಲಂಚಕ್ಕೆ ಹೊಳಲ್ಕೆರೆಯ ಸ್ಟಾಂಪ್‌ ವೆಂಡರ್‌ ಕಲ್ಲೇಶ್‌ ಎಂಬುವವರ ಮೂಲಕ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ಹತ್ತು ಸಾವಿರ ರೂ. ಪಡೆದಿದ್ದರು. ಶನಿವಾರ ಭರಮಸಾಗರ ಗ್ರಾಮ ಪಂಚಾಯಿತಿಯಲ್ಲಿ ಉಳಿದ ಹಣ 40,000 ರೂಗಳನ್ನು ಸ್ವೀಕರಿಸುವ ವೇಳೆ ಚಿತ್ರದುರ್ಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪಿಡಿಒ ಶಿವಪ್ಪ ಮತ್ತು ಕಲ್ಲೇಶ್‌ ಅವರನ್ನು ಬಂಧಿ ಸಿದರು.

ಕುಮಾರಸ್ವಾಮಿ ನೀಡಿದ ದೂರು ಆಧರಿಸಿ ಚಿತ್ರದುರ್ಗ ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ವಾಸುದೇವರಾಮ ಮಾರ್ಗದರ್ಶನದಲ್ಲಿ ಪೊಲೀಸ್‌ ನಿರೀಕ್ಷಕರಾದ ವೈ.ಎಸ್‌. ಶಿಲ್ಪಾ, ಬಿ. ಮಂಜುನಾಥ್‌ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿತು.

 

Advertisement

Udayavani is now on Telegram. Click here to join our channel and stay updated with the latest news.

Next