Advertisement

ಮೈದುಂಬಿ ಹರಿಯುತ್ತಿರುವ ಭರಚುಕ್ಕಿ

10:37 AM Aug 07, 2020 | Suhan S |

ಕೊಳ್ಳೇಗಾಲ: ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಹಾಗೂ ಕೆಆರ್‌ಎಸ್‌ ಅಣೆಕಟ್ಟೆಯಿಂದ ನದಿಗೆ ನೀರು ಹರಿಸುತ್ತಿರುವುದರಿಂದ ತಾಲೂಕಿನ ಭರಚುಕ್ಕಿ ಜಲಪಾತಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ.

Advertisement

ಸುಮಾರು 50 ಸಾವಿರ ಕ್ಯೂಸೆಕ್‌ ನೀರು ಕಾವೇರಿ ನದಿಗೆ ಹರಿದು ಬರುತ್ತಿದೆ. ಹೀಗಾಗಿ ತಾಲೂಕಿನಲ್ಲಿರುವ ಪ್ರಸಿದ್ಧ ಭರಚುಕ್ಕಿ ಜಲಪಾತ ನಿಧಾನವಾಗಿ ಮೈದುಂಬಿಕೊಳ್ಳುತ್ತಿದೆ. ಇದರಿಂದ ನೀರಿಲ್ಲದೇ ಇಷ್ಟು ದಿನ ಸೊರಗಿ ಹೋಗಿದ್ದ ಜಲಪಾತ ಇದೀಗ ಕಳೆಗಟ್ಟುತ್ತಿದೆ. ಮುಂಬರುವ ದಿನಗಳಲ್ಲಿ ಕಬಿನಿ ಹಾಗೂ ಕೆಆರ್‌ಎಸ್‌ನಿಂದ ಇನ್ನಷ್ಟು ನೀರು ಬಿಡುವ ಸಾಧ್ಯತೆಯಿದ್ದು, ಜಲಪಾತ ಮತ್ತಷ್ಟು ಮೈದುಂಬಿ ಆಕರ್ಷಣೀಯವಾಗಲಿದೆ.

ಕೋವಿಡ್ ಹಿನ್ನೆಲೆಯಲ್ಲಿ ಜಲಪಾತಕ್ಕೆ ಪ್ರವಾಸಿಗರ ಪ್ರವೇಶವನ್ನು ಅರಣ್ಯ ಇಲಾಖೆ ನಿರ್ಬಂಧಿಸಿದೆ. ಶಿವನಸಮುದ್ರ ಸುತ್ತಮುತ್ತಲಿನ ಸ್ಥಳೀಯರು ಸೋಂಕು ಹರಡುತ್ತಿರುವ ಕಾರಣ, ಪ್ರವಾಸಿಗರು ಬರಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next