Advertisement

Bantwal ಭಂಡಾರಿಬೆಟ್ಟು: ಸ್ಕೂಟರ್‌ ಬಿದ್ದು ಸವಾರನಿಗೆ ಗಾಯ

12:20 AM Jun 22, 2024 | Team Udayavani |

ಬಂಟ್ವಾಳ: ಬಿ.ಸಿ. ರೋಡು- ಪುಂಜಾಲಕಟ್ಟೆ ಹೆದ್ದಾರಿಯ ಬಂಟ್ವಾಳದ ಭಂಡಾರಿಬೆಟ್ಟು ಬಳಿ ಗೂಡ್ಸ್‌ ಟೆಂಪೋವೊಂದನ್ನು ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಸ್ಕೂಟರೊಂದು ಬಿದ್ದು ಸವಾರ ಗಾಯಗೊಂಡ ಘಟನೆ ಜೂ. 19ರಂದು ನಡೆದಿದೆ.

Advertisement

ಬಿ.ಸಿ. ರೋಡಿನ ಶಾಂತಿಯಂಗಡಿ ನಿವಾಸಿ ಮಹಮ್ಮದ್‌ ಇರ್ಷಾದ್‌ ಗಾಯ ಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಟೆಂಪೋ ಚಾಲಕ ನಾಸೀರ್‌ನ ನಿರ್ಲಕ್ಷ್ಯತನದಿಂದ ಈ ಅಪಘಾತ ನಡೆದಿದೆ ಎಂದು ದೂರಿನಲ್ಲಿ ಆರೋಪಿಸ ಲಾಗಿದೆ. ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next