Advertisement

ಕೋರ್ಟ್‌ ಸುತ್ತಮುತ್ತ ಸ್ಥಳ ಪರಿಶೀಲನೆ

12:40 PM Jun 18, 2020 | Naveen |

ಭಾಲ್ಕಿ: ನ್ಯಾಯಾಧೀಶ ಪ್ರಶಾಂತ ಬಾದವಾಡಗಿ, ತಹಶೀಲ್ದಾರ್‌ ಅಣ್ಣಾರಾವ ಪಾಟೀಲ ಮತ್ತು ಇತರ ಅಧಿಕಾರಿಗಳು ಕೋರ್ಟ್‌ ಸುತ್ತಮುತ್ತಲಿನ ಸ್ಥಳ ಪರಿಶೀಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯಾಧೀಶ ಪ್ರಶಾಂತ ಬಾದವಾಡಗಿ, ಕೋರ್ಟ್‌ ಆವರಣದ ಹೊರಗಿನ ಸ್ಥಳ ಸದಾಕಾಲ ಸ್ವತ್ಛತೆಯಿಂದ ಕೂಡಿರಲು ಶೌಚಾಲಯ ನಿರ್ಮಿಸಬೇಕು ಮತ್ತು ಜನರಿಗೆ ಓಡಾಡಲು ಅನುಕೂಲವಾಗಲು ಫುಟ್‌ಪಾತ್‌ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಪುರಸಭೆ ಸಮುದಾಯ ಸಂಘಟಕ ಅಧಿಕಾರಿ ಸ್ವಾಮಿದಾಸ, ಪರಿಸರ ಅಭಿಯಂತರ ವೀರಶೆಟ್ಟಿ ರಕ್ಷೆ, ಆರೋಗ್ಯ ನಿರೀಕ್ಷಕ ಸಂಗಮೇಶ ಬಿರಾದಾರ, ಗುತ್ತಿಗೆದಾರ ಚನ್ನಬಸವ ಬಳತೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next