Advertisement

ಬಿರುಗಾಳಿ ಸಹಿತ ಮಳೆ: ಅಪಾರ ಹಾನಿ

05:02 PM May 31, 2020 | Naveen |

ಭಾಲ್ಕಿ: ತಾಲೂಕಿನ ವಿವಿಧೆಡೆ ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಮರ, ವಿದ್ಯುತ್‌ ಕಂಬ, ಪರಿವರ್ತಕ, ಮನೆಯ ಮೇಲಿನ ಶೀಟ್‌ಗಳು ಹಾರಿ ಹೋಗಿದ್ದು, ಅಪಾರ ಹಾನಿ ಉಂಟಾಗಿದೆ.

Advertisement

ತಾಲೂಕಿನ ಕೋನಮೇಳಕುಂದಾ ಗ್ರಾಮದಲ್ಲಿ ಎಸ್‌ಟಿ, ಎಲ್‌ಟಿ ಲೈನ್‌ ಕಡಿತಗೊಂಡಿದೆ. ಮರಗಳು ಉರುಳಿಬಿದ್ದು ಮೂರು ವಿದ್ಯುತ್‌ ಪರಿವರ್ತಕಗಳಿಗೆ ಹಾನಿಯಾಗಿದೆ. ಅಹಮದಾಬಾದ್‌, ಕೊಟಗ್ಯಾಳ ಸೇರಿದಂತೆ ಇತರ ಗ್ರಾಮಗಳಲ್ಲಿ ವಿದ್ಯುತ್‌ ಕಂಬಗಳು ಬಿದ್ದು ಮುರಿದಿವೆ. ಅಂದಾಜು 5ರಿಂದ 10 ಲಕ್ಷ ಹಾನಿಯಾಗಿದೆ ಎಂದು ಎಇಇ ಪುಂಡಲೀಕ ಗೋಖಲೆ ತಿಳಿಸಿದ್ದಾರೆ.

ಕೋನಮೇಳಕುಂದಾ, ಅಹಮದಾಬಾದ್‌ ಸೇರಿದಂತೆ ಇತರ ಗ್ರಾಮಗಳಲ್ಲಿ ಶನಿವಾರ ಸಂಜೆವರೆಗೂ ವಿದ್ಯುತ್‌ ಕಡಿತಗೊಂಡಿತ್ತು. ಜೆಸ್ಕಾಂ ಸಿಬ್ಬಂದಿ ರಿಪೇರಿ ಕಾರ್ಯದಲ್ಲಿ ತೊಡಗಿದ್ದರು. ತೇಗಂಪೂರ ಗ್ರಾಮದಲ್ಲಿ ಸುಮಾರು ಮೂರು ಮರಗಳು ಬುಡಸಮೇತ ಕೆಳಕ್ಕೆ ಉರುಳಿ ಬಿದ್ದಿದ್ದವು. ಮಳೆಯ ವಿವರ: ಭಾಲ್ಕಿ ಹೋಬಳಿ 3 ಮಿ.ಮೀ, ಹಲಬರ್ಗಾ 7, ಖಟಕಚಿಂಚೋಳಿ 2. ಲಖನಗಾಂವ 2, ನಿಟ್ಟೂರ ಹೋಬಳಿಯಲ್ಲಿ 3 ಮಿಮೀ ಸೇರಿದಂತೆ ತಾಲೂಕಿನಲ್ಲಿ 3 ಮಿಮೀ ಮಳೆ ಆಗಿದೆ. ಸಾಯಿಗಾಂವ ಹೋಬಳಿಯಲ್ಲಿ ಮಳೆ ಆಗಿಲ್ಲ ಎಂದು ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕ ಶತ್ರುಘ್ನ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next