Advertisement

ಪ್ರಜ್ವಲ್‌ ಸ್ಪರ್ಧೆ ಗೌಡರಿಗೆ ಬಿಟ್ಟಿದ್ದು: ಭವಾನಿ ರೇವಣ್ಣ

07:00 AM Oct 31, 2017 | Team Udayavani |

ಬೆಂಗಳೂರು:“ಪ್ರಜ್ವಲ್‌ ಚುನಾವಣೆ ಸ್ಪರ್ಧೆ ಬಗ್ಗೆ ಎಚ್‌.ಡಿ. ದೇವೇಗೌಡರು ತೀರ್ಮಾನಿಸುತ್ತಾರೆ’ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣನವರ ಪತ್ನಿ, ಹಾಸನ ಜಿಪಂ ಸದಸ್ಯೆ ಭವಾನಿ ರೇವಣ್ಣ ತಿಳಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಜ್ವಲ್‌ ರೇವಣ್ಣ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು, ಅವರಿಗೆ ಎಲ್ಲಿ ಟಿಕೆಟ್‌ ನೀಡಬೇಕು ಎಂಬುದ ದೇವೇಗೌಡರಿಗೆ ಬಿಟ್ಟ ವಿಚಾರ. ನಮ್ಮ ಕುಟುಂಬದಲ್ಲೇ ಏನೇ ತೀರ್ಮಾನವಾದರೂ ದೇವೇಗೌಡರದೇ ಅಂತಿಮ ನಿರ್ಧಾರ ಎಂದು ಹೇಳಿದರು.

Advertisement

ರಾಜಕೀಯ ವಿಚಾರ ಹಾಗೂ ಪಕ್ಷದ ವಿಷಯಕ್ಕೆ ಸಂಬಂಧಿಸಿದಂತೆ ಬಾಲಿಶ ಹೇಳಿಕೆ ಕೊಡಬೇಡ ಎಂದು ನಾನು ಪ್ರಜ್ವಲ್‌ಗೆ ತಿಳಿ ಹೇಳಿದ್ದೇನೆ ಎಂದರು. ಅನಿತಾ ಕುಮಾರಸ್ವಾಮಿ ಅವರು ನನ್ನ ಸಹೋದರಿ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್‌ ದೊರೆತರೆ ನಾನು ಪ್ರಚಾರಕ್ಕೆ ಹೋಗುತ್ತೇನೆ ಎಂದು ತಿಳಿಸಿದರು.

ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರ ನನ್ನ ಮುಂದಿಲ್ಲ. ನಾನು ಒಂದೇ ಕ್ಷೇತ್ರಕ್ಕೆ ಸೀಮಿತವಾಗುವ
ಬದಲು ಪಕ್ಷದ ಕಾರ್ಯಕರ್ತೆಯಾಗಿ ಎಲ್ಲ ಕಡೆ ಪ್ರಚಾರಕ್ಕೆ ಹೋಗುತ್ತೇನೆ ಎಂದರು. ಒಂದೊಮ್ಮೆ ಕಾರ್ಯಕತರು
ಹಾಗೂ ಮುಖಂಡರು ವಿಧಾನಸಭೆ ಚುನಾವಣೆಗೆ ಒತ್ತಡ ತಂದು ಗೌಡರು ಒಪ್ಪಿಗೆ ಸೂಚಿಸಿದರೆ ಎಂಬ ಪ್ರಶ್ನೆಗೆ, ಅದು
ದೇವರ ಇಚ್ಛೆ, ನೋಡೋಣ ಎಂದಷ್ಟೇ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next