Advertisement

ಎರಡನೇ ದಿನ ಪಾವಗಡದ ನಾಲ್ಕು ದೇವಾಲಯಗಳಲ್ಲಿ ಭಜನೆ 

11:13 AM May 10, 2022 | Team Udayavani |

ಪಾವಗಡ: ರಾಜ್ಯದೆಲ್ಲೆಡೆ ಅಜಾನ್ ಪ್ರತಿಯಾಗಿ ಭಜನೆ ಅಭಿಯಾನ ಆರಂಭಗೊಂಡ ಹಿನ್ನೆಲೆ ಪಾವಗಡ ಪಟ್ಟಣದಲ್ಲಿ ಎರಡನೇ ದಿನ ನಾಲ್ಕು ದೇವಾಲಯಗಳಲ್ಲಿ ಭಜನೆ ಅಭಿಯಾನ ನಡೆಯಿತು.

Advertisement

ಮೊದಲನೆ ದಿನ ಒಂದು ದೇವಸ್ಥಾನದಲ್ಲಿ ಭಜನೆ ಪ್ರಾರಂಭವಾಗಿದ್ದು, ಎರಡನೇ ದಿನ ನಾಲ್ಕು ದೇವಸ್ಥಾನಗಳಲ್ಲಿ ಭಜನೆ ನಡೆಯಿತು.

ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕರೆಕೊಟ್ಟ ಹಿನ್ನಲೆ ಪಾವಗಡದ ನಾಲ್ಕು ದೇವಾಲಯಗಳಲ್ಲಿ ಶ್ರೀರಾಮ ಸೇನಾ ವತಿಯಿಂದ ಇಂದು ಬೆಳಿಗ್ಗೆ 4.54 ಗಂಟೆಗೆ ಹನುಮಾನ್ ಚಾಲೀಸಾನ್ನು ಪಠಿಸಲಾಯಿತು.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಕಾಶಿವಿಶ್ವನಾಥ ದೇವಸ್ಥಾನ, ಪ್ರಸನ್ನಾಂಜನೇಯಸ್ವಾಮಿ ದೇವಸ್ಥಾನ ಹಾಗೂ ಶಿರಿಡಿ ಸಾಯಿಬಾಬಾಗಳಲ್ಲಿ ಭಜನೆ  ಅಭಿಯಾನ ನಡೆಯಿತು.

ಶ್ರೀ ರಾಮಸೇನೆಯ ತಾಲೂಕು ಅಧ್ಯಕ್ಷ ಕಾವಲಗೇರಿ ರಾಮಾಂಜಿ ನೇತ್ರತ್ವದಲ್ಲಿ  ಶೇಖರ್ ಬಾಬು,ರಾಘವೇಂದ್ರ,ಅಲ್ಕೂಂದ ರಾಜ್,ರಾಕೇಶ್,ವಾಸು ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

ಪಾವಗಡ ಪೊಲೀಸ್ ಠಾಣೆಯ ಪೊಲೀಸ್ ಇನ್ಸೆಪೆಕ್ಟರ್ ಲಕ್ಷ್ಮಿಕಾಂತ್ ನೇತೃತ್ವದಲ್ಲಿ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next