Advertisement

ವ್ಯಾಸ ವಾಲ್ಮೀಕಿಯಷ್ಟೇ ಭೈರಪ್ಪ ಜನಪ್ರಿಯ 

01:30 AM Jan 20, 2019 | |

ಮೈಸೂರು: ಬ್ರಿಟಿಷರ ಇಂಗ್ಲಿಷ್‌ ಶಿಕ್ಷಣ ಒಪ್ಪಿಕೊಂಡು ಪಶ್ಚಿಮಕ್ಕೆ ಮರುಳಾದ ಭಾರತೀಯ ಬರಹಗಾರರ ಅಸ್ಮಿತೆ ಮರೆಯಾಗಿ ಕೀಳರಿಮೆ ಕಾಡುತ್ತಿತ್ತು. ಆದರೆ, ಕುವೆಂಪು ಮತ್ತು ಭೈರಪ್ಪ ತಮ್ಮ ಕಾದಂಬರಿಗಳ ಮೂಲಕವೇ ಬದಲಾವಣೆ ತಂದರು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಹೇಳಿದರು.

Advertisement

ನಗರದ ಕಲಾಮಂದಿರದಲ್ಲಿ ಡಾ.ಎಸ್‌.ಎಲ್‌.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ಖ್ಯಾತ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಸಾಹಿತ್ಯೋತ್ಸವ-2019 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕುವೆಂಪು ಅವರ ರಾಮಾಯಣ ದರ್ಶನಂ, ಭೈರಪ್ಪನವರ ವಂಶವೃಕ್ಷ ಮತ್ತಿತರ ಕೃತಿಗಳು ದೊಡ್ಡ ಕ್ರಾಂತಿಯನ್ನೇ ಉಂಟು ಮಾಡಿದವು. ಭಾರತೀಯರ ಮುಖ್ಯ ಪ್ರಕಾರ ಕಥನ ಶೈಲಿಯಾಗಿದ್ದು, ಭೈರಪ್ಪನವರ ಒಂದೊಂದೂ ಕಾದಂಬರಿಯೂ ಒಂದೊಂದು ಕಥನವಾಗಿದೆ. ಭೈರಪ್ಪನವರು ಇವೇ ಮೊದಲಾದ ಕಾರಣಗಳಿಂದ ದೇಶ ಅಲ್ಲದೆ ವಿದೇಶದಲ್ಲೂ ಓದುಗ ಅಭಿಮಾನಿಗಳನ್ನು ಹೊಂದಿದ್ದಾರೆ. ವ್ಯಾಸ, ವಾಲ್ಮೀಕಿಯಷ್ಟೇ ಜನಪ್ರಿಯತೆ, ಸಮಾನ ಖ್ಯಾತಿ ಹೊಂದಿದ್ದಾರೆಂದು ಅಭಿಪ್ರಾಯಪಟ್ಟರು.

ಭೈರಪ್ಪನವರಲ್ಲಿ ನಾಟಕೀಯತೆ ಇಲ್ಲ. ಭಾಷೆ ಬಗ್ಗೆ ಅವರು ಎಷ್ಟು ತೀವ್ರವಾದ ಕಳಕಳಿ ಉಳ್ಳವರಾಗಿದ್ದಾರೆಂದರೆ, ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಜಾರಿಗೆ ತರಬೇಕೆಂದು ಹೊರಟಾಗ ಮೊಟ್ಟ ಮೊದಲುಪ್ರತಿಕ್ರಿಯೆ ವ್ಯಕ್ತಪಡಿಸಿದವರು ಅವರೇ ಎಂದರು. ನವ್ಯ ಕಾಲದಲ್ಲಿ ನವ್ಯರನ್ನು ಎದುರಿಸುವುದು ಸಾಮಾನ್ಯದ ಮಾತಾಗಿರಲಿಲ್ಲ. ಭೈರಪ್ಪನವರು ಅಂಥ ಕಾಲದಲ್ಲೂ ನವ್ಯರನ್ನು ಸಮರ್ಥವಾಗಿ ಎದುರಿಸಿದರು.

ಭೈರಪ್ಪ ಅವರು ಈಗ ಅಷ್ಟೊಂದು ಜನಪ್ರಿಯತೆ ಹೊಂದಿದ್ದಾರೆ. ನಾನು ಕೇಂದ್ರಸಾಹಿತ್ಯ ಅಕಾಡೆಮಿ ಅಧ್ಯಕ್ಷನಾದ ಮೇಲೆ ಹೋದೆಡೆಯಲ್ಲೆಲ್ಲ ಭೈರಪ್ಪನವರ ಬಗ್ಗೆ ಕೇಳುತ್ತಾರೆ. ಅವರು ನಿಮ್ಮ ರಾಜ್ಯದವರಂತೆ, ಮೈಸೂರಿನವರಂತೆ ಅನ್ನುತ್ತಾರೆ. ದೇಶದ ಅನೇಕ ಭಾಷೆಗಳಲ್ಲೂ ಭೈರಪ್ಪ ಜನಪ್ರಿಯತೆ ಹೊಂದಲು ಕಾದಂಬರಿಗಳೇ ಕಾರಣ ಎಂದರು. ಅವರ ಬಗ್ಗ ನನಗೆ ಅಪಾರ ಗೌರವವಿದೆ. ಅವರಷ್ಟು ನಿಖರವಾಗಿ, ಖಚಿತವಾಗಿ ವಿಷಯ ಮಂಡನೆ ಮಾಡಲು ನನಗೆ ಸಾಧ್ಯವಿಲ್ಲ ಎಂದು ಕಂಬಾರರು ಮುಕ್ತ ಕಂಠದಿಂದ ಪ್ರಶಂಸಿಸಿದರು.

Advertisement

ಭೈರಪ್ಪನವರ ಕೃತಿಗಳಲ್ಲಿ ನನ್ನನ್ನು ಅತಿಯಾಗಿ ಕಾಡಿದ್ದು ಪರ್ವ. ಪಂಪ ಭಾರತದಲ್ಲಿ ಅರ್ಜುನನ ಬಗ್ಗೆ, ಕುಮಾರವ್ಯಾಸ ಭಾರತದಲ್ಲಿ ಕೃಷ್ಣನ ಬಗ್ಗೆ ಹೇಳಿದರು. ಪರ್ವದಲ್ಲಿ ಭೈರಪ್ಪನವರು ಭಾರತವನ್ನು ವಿಶಿಷ್ಟವಾಗಿನೋಡಿದ್ದಾರೆ ಎಂ ದರು.

ತಾವು ಹಂಪಿ ವಿವಿ ಕುಲಪತಿಯಾಗಿದ್ದಾಗ ಪ್ರವಾಹ ಬಂದು ಗ್ರಂಥಾಲಯದ ಪುಸ್ತಕಗಳೆಲ್ಲ ಕೊಚ್ಚಿ ಹೋದಾಗ, ನೀರಿನಿಂದ ತೊಯ್ದಾಗ ಬಟ್ಟೆ ಒಣಗಿ ಹಾಕುವಂತೆ ಅವನ್ನೆಲ್ಲ ಬಿಸಿಲಿನಲ್ಲಿ ಹಾಕಿದ್ದೆ. ಅಲ್ಲಿಗೆ ಧಾವಿಸಿದ ಭೈರಪ್ಪ ಆ ವೇಳೆ ಎಂಟು ದಿನ ಅಲ್ಲಿಯೇ ಇದ್ದು ಎಲ್ಲವನ್ನೂ ನೋಡಿಕೊಂಡರೆಂದು ಕಂಬಾರರು ಸ್ಮರಿಸಿದರು. ಭೈರಪ್ಪನವರ ಮುಂದೆ ನಾನು ಮಾತನಾಡೋದು ಸ್ವಲ್ಪ ಕಷ್ಟ. ನಾನು ಈ ಕಾರ್ಯಕ್ರಮಕ್ಕೆ ಬರುವ ಮುನ್ನ ಏನು ಮಾತನಾಡಬೇಕೆಂದು ಅಂದುಕೊಂಡಿದ್ದೆನೋ ಆ ರೀತಿ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಕಂಬಾರರು ಮಧ್ಯೆ ನಕ್ಕು ನುಡಿದರು. ಸಾಹಿತಿ ಡಾ. ಎಸ್‌.ಎಲ್‌. ಭೈರಪ್ಪ, ಭಾಷಾ ಶಾಸOಉಜ್ಞ ಡಾ. ಪ್ರಧಾನ ಗುರುದತ್ತ, ಶತಾವಧಾನಿ ಗಣೇಶ್‌ ಇತರರಿದ್ದರು.

ಭೈರಪ್ಪ ಬರಹದಲ್ಲಿದೆ ಅಧ್ಯಯನ
ಸಾಹಿತಿ ಡಾ. ಎಸ್‌.ಎಲ್‌. ಭೈರಪ್ಪ ಅವರ ಬರಹದಲ್ಲಿ ವ್ಯಾಪಕ ಅಧ್ಯಯನ, ಆಳವಾದ ಸಂಶೋಧನೆ,
ಗಹನವಾದ ಚಿಂತನೆ, ಪೂರ್ವಗ್ರಹರಹಿತ ಗ್ರಹಿಕೆ, ಐತಿಹಾಸಿಕ ಪರಿಪೇಕ್ಷ ಎಂಬ ಐದು ಅಂಶಗಳು
ಪ್ರಧಾನವಾಗಿವೆ ಎಂದು ಲೇಖಕ, ಭಾಷಾ ಶಾಸOಉಜ್ಞ ಡಾ. ಪ್ರಧಾನ ಗುರುದತ್ತ ವಿಶ್ಲೇಷಿಸಿದರು.
ಎಸ್‌.ಎಲ್‌. ಭೈರಪ್ಪ ಸಾಹಿತ್ಯೋತ್ಸವದಲ್ಲಿ ಭೈರಪ್ಪನವರೊಂದಿಗಿನ ಸಂದರ್ಶನಗಳ ಸಂಕಲನವನ್ನು
ಬಿಡುಗಡೆ ಮಾಡಿ ಮಾತನಾಡಿದರು. ಭೈರಪ್ಪನವರು ಹಿಂದುತ್ವವಾದಿ ಎಂದು ಹೇಳುವವರು, ಪ್ಲೇಟೋನನ್ನು ಸರಿಯಾಗಿ ಓದಿಕೊಂಡಿಲ್ಲ. ಓದಿಕೊಂಡಿದ್ದರೂ ಅರ್ಥ ಮಾಡಿಕೊಂಡಿಲ್ಲ. ತಪ್ಪಾಗಿ ಅರ್ಥೈಸಿದ್ದಾರೆ. ಅವರು ಬ್ರಿಟಿಷ್‌ ಸಾಹಿತಿಗಳಂತೆ ನಕಾರಾತ್ಮಕವಾಗಿ ಚಿಂತಿಸುತ್ತಾರೆ. ಅವರ ಅವಿವೇಕಕ್ಕೆ ಏನು ಹೇಳಬೇಕು? ಎಂದು ಭೈರಪ್ಪನವರು ಪ್ರಶ್ನಿಸುತ್ತಾರೆ. ಇಂಥವರಿಗೆ ಭೈರಪ್ಪನವರು ಉತ್ತರ ಕೊಡಲು ಹೋಗಿಲ್ಲ. ಉತ್ತರ ಕೊಡಲು ಹೋಗಿದ್ದರೆ ನನ್ನ ಬರವಣಿಗೆಯ ಸತ್ವ ಹೋಗುತ್ತಿತ್ತು . ಆದ್ದರಿಂದ ಸಂಪೂರ್ಣವಾಗಿ ಅಲಕ್ಷಿಸಿದೆ ಎಂದು ಭೈರಪ್ಪನವರೇ ತಿಳಿಸಿದ್ದಾರೆ. 16 ಮಂದಿ ಲೇಖಕರು ಭೈರಪ್ಪನವರನ್ನು ಸಂದರ್ಶಿಸಿರುವ ಚಿಂತನ ಮಂಥನ ಕೃತಿಯನ್ನು ಡಾ. ಪ್ರಧಾನ ಗುರುದತ್ತ ಬಿಡುಗಡೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next