Advertisement

ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಉಡುಪಿ: ಗುರುಪೂರ್ಣಿಮಾ ಉತ್ಸವ

08:18 PM Jul 01, 2023 | Team Udayavani |

ಉಡುಪಿ: ನಗರದ ಕೆ.ಎಂ ಮಾರ್ಗದಲ್ಲಿರುವ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ಜುಲೈ 03, ಸೋಮವಾರ ಗುರುಪೂರ್ಣಿಮಾ ಉತ್ಸವ ನಡೆಯಲಿದೆ.

Advertisement

ಬೆಳಗ್ಗೆ ಗಂಟೆ 5 ಗಂಟೆಗೆ ಕಾಕಡ ಆರತಿ, 6 ಗಂಟೆಯಿಂದ 8-00 ಗಂಟೆಯವರೆಗೆ ಗುರುದೇವರಿಗೆ ಸರ್ವಭಕ್ತಾದಿಗಳಿಂದ ಸೀಯಾಳ ಅಭಿಷೇಕ, 8 ಕ್ಕೆ ಆರತಿ. 8-30 ರಿಂದ ಮಧ್ಯಾಹ್ನ 12-00 ಗಂಟೆಯವರೆಗೆ ನಿತ್ಯಾನಂದ ಭಜನಾ ಮಂಡಳಿ ಉಡುಪಿ ಇವರಿಂದ ಭಜನಾ ಕಾರ್ಯಕ್ರಮ, ಮಹಾಪೂಜೆ. ಬಳಿಕ 12-30 ರಿಂದ ಸಂಜೆ ಗಂಟೆ 5-45 ರ ವರೆಗೆ, ಡಾ.ದೀಪಕ್ ಪ್ರಭು ಮತ್ತು ಬಳಗದವರಿಂದ ಭಜನಾ ಕಾರ್ಯಕ್ರಮ.ಸಂಜೆ 5-45 ರಿಂದ ರಾತ್ರಿ 7-45 ರವರೆಗೆ ಶ್ರೀ ನಾರಾಯಣ ಗುರು ಭಜನಾ ಮಂಡಳಿ ಬನ್ನಂಜೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 7-45 ಗಂಟೆಗೆ ಪಲ್ಲಕಿ ಉತ್ಸವ, 8 ಗಂಟೆಗೆ ಮಹಾಪೂಜೆ, ಬಳಿಕ ಪ್ರಸಾದ ವಿತರಣೆ ನಡೆಯಲಿದೆ.

ಭಗವಾನ್ ನಿತ್ಯಾನಂದ ಮಂದಿರ ಮಠ-ಉಡುಪಿ ಇದರ ಕಾರ್ಯಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಭಕ್ತಾಭಿಮಾನಿಗಳಿಗೆ ಆದರದ ಸ್ವಾಗತ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next