Advertisement

ಪುರಾಣವನ್ನು ಸತ್ಯ ಇತಿಹಾಸವಾಗಿ ರೂಪಿಸೋಣ: ಮಹೇಶ್‌

02:48 PM May 09, 2022 | Team Udayavani |

ಯಳಂದೂರು: ನಮ್ಮ ಅನೇಕ ಸತ್ಯ ಇತಿಹಾಸಗಳು ಪುರಾಣವಾಗಿವೆ. ಇದನ್ನು ಐತಿಹಾಸಿಕ ದೃಷ್ಟಿಕೋನ ದಿಂದ ನೋಡುವ ಕೆಲಸವಾಗಬೇಕಿದೆ. ಈ ಬಗ್ಗೆ ಕಾರ್ಯಪ್ರವೃತ್ತವಾಗುವ ಜರೂರತ್ತು ಪ್ರಸ್ತುತಕ್ಕಿದೆ, ಭಗೀರಥರ ವಿಷಯದಲ್ಲೂ ಇದು ತುರ್ತಾಗಿ ಆಗಬೇಕಿದೆ ಎಂದು ಶಾಸಕ ಎನ್‌. ಮಹೇಶ್‌ ಹೇಳಿದರು.

Advertisement

ಭಾನುವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉಪ್ಪಾರ ಸಮಾಜ ದೈಹಿಕವಾಗಿ ಬಲಿಷ್ಠವಾಗಿದೆ, ಶ್ರಮಜೀವಿಗಳು, ಕಾಯಕಯೋಗಿಗಳಾಗಿದ್ದಾರೆ. ಇವರನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆ ತರುವ ಕೆಲಸವಾಗಬೇಕು. ಮಕ್ಕಳಿಗೆ ವೈಜ್ಞಾನಿಕವಾಗಿ ನಮ್ಮ ಇತಿಹಾಸವನ್ನು ತಿಳಿಸಿಕೊಡುವ ಕೆಲಸವಾಗಬೇಕು. ಪರಿಶಿಷ್ಟ ಪಂಗಡಕ್ಕೆ ಈ ವರ್ಗವನ್ನು ಸೇರಿಸುವ ಎಲ್ಲಾ ಅರ್ಹತೆ ಇವರಿಗಿದ್ದು ಈ ಬಗ್ಗೆ ನನ್ನ ಪ್ರಯತ್ನ ನಿರಂತವಾಗಿರುತ್ತದೆ. ಮಲೆಮಹದೇಶ್ವರ ಬೆಟ್ಟದಲ್ಲಿ ಎಣ್ಣೆ ಮಜ್ಜನದ ವಿಚಾರವನ್ನು ನಾನು ಬಗೆಹರಿಸಲು ಉತ್ನಿಸುವೆ ಎಂದರು.

ಮುಖ್ಯ ಭಾಷಣಕಾರ ಗೌಡಹಳ್ಳಿ ಮಹೇಶ್‌ ಮಾತ ನಾಡಿ, ಉಪ್ಪಾರ ಸಮುದಾಯ ಇಡೀ ದೇಶದಲ್ಲಿ 12 ಕೋಟಿ ಜನಸಮುದಾಯವನ್ನು ಹೊಂದಿದೆ. ಆದರೆ ರಾಜಕೀಯ, ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ತೀರಾ ಹಿಂದುಳಿದ ಜನಾಂಗವಾಗಿದೆ. 1880 ರಲ್ಲಿ ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪೆನಿ ಉಪ್ಪಿನ ಮೇಲೆ ಕರವನ್ನು ಹಾಕಿದ ನಂತರ ತಮ್ಮ ಕುಲಕಸುಬನ್ನು ಬಿಟ್ಟ ಈ ಜನತೆ ಹರಿದು ಹಂಚಿ ಹೋಗಿ ಕಾಡು ಮೇಡುಗಳಲ್ಲಿ ವಾಸವಾಗಿತ್ತು ಇದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಹಾಗಾಗಿ ಇವರು ಪರಿಶಿಷ್ಟ ಪಂಗಡಕ್ಕೆ ಸೇರುವ ಎಲ್ಲಾ ಅರ್ಹತೆಗಳನ್ನು ಪಡೆದುಕೊಂಡಿದ್ದಾರೆ. ಭಗೀರಥ ಮಹರ್ಷಿ ರಾಜರಾಗಿದ್ದು ಇವರ ಕಾಲದಲ್ಲಿ ಗಂಗಾನದಿಯನ್ನು ತಪಸ್ಸು ಮಾಡಿ ಪಡೆದರು ಎಂಬುದಕ್ಕಿಂತ ಗೋಮುಖದಂತಹ ಎತ್ತರ ಪ್ರದೇಶಲ್ಲಿದ್ದ ನೀರನ್ನು ಧರೆಗೆ ತಂದರು ಎಂಬುದು ಇತಿಹಾಸವಾಗಿದ್ದು ಇದನ್ನು ತಿಳಿಸಿಕೊಡುವ ಕೆಲಸವಾಗಬೇಕು ಎಂದರು.

100 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ: ಹೊಸದುರ್ಗ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮಿಜಿ ಮಾತನಾಡಿ, ಭಗೀರಥರು ದೊಡ್ಡ ಅಭಿಯಂತರಾಗಿದ್ದು ನೀರನ್ನು ನೀಡಿದ ಮಹಾನ್‌ ಋಷಿಯಾಗಿದ್ದಾರೆ. ಉಪ್ಪಾರ ಸಮುದಾಯದಲ್ಲಿ ಅನಕ್ಷರತೆ, ಮೌಡ್ಯತೆ ಇನ್ನೂ ಇದೆ. ಇದನ್ನು ತೊಲಗಿಸಬೇಕು. ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡಲು ಪಣತೊಡಬೇಕಿದೆ. ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಅನುದಾನದ ಕೊರತೆ ಇದೆ. ಇದಕ್ಕೆ ಕನಿಷ್ಠ 100 ಕೋಟಿ ರೂ. ಅನುದಾನವನ್ನಾದರೂ ಬಿಡುಗಡೆ ಮಾಡಿಸಬೇಕು, ಈ ಬಗ್ಗೆ ಶಾಸಕರು ವಿಧಾನಸೌಧದಲ್ಲಿ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.

Advertisement

ಗಮನ ಸೆಳೆದ ಹಾಲಿ, ಮಾಜಿ ಶಾಸಕರು ಕುಣಿತ: ಪಟ್ಟಣದಲ್ಲಿ ನಡೆದ ಶ್ರೀಭಗೀರಥ ಮಹರ್ಷಿಯ ಜಯಂತಿಯ ಮೆರವಣಿಗೆಯಲ್ಲಿ ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದ ಶಾಸಕ ಎನ್‌. ಮಹೇಶ್‌ ಹಾಗೂ ಮಾಜಿ ಶಾಸಕ ಎ.ಆರ್‌.ಕೃಷ್ಣಮೂರ್ತಿ, ಜಿಪಂ ಮಾಜಿ ಸದಸ್ಯರಾದ ಜೆ. ಯೋಗೇಶ್‌, ಕಿನಕಹಳ್ಳಿ ಸಿದ್ದರಾಜು, ಮುಖಂಡರಾದ ಕಿನಕಹಳ್ಳಿ ರಾಚಯ್ಯ ಸೇರಿದಂತೆ ಹಾಡಿಗೆ ಕುಣಿದು ಕುಪ್ಪಳಿಸಿದ ಹೆಜ್ಜೆ ಹಾಕಿರುವುದು ಎಲ್ಲರ ಗಮನ ಸೆಳೆಯಿತು ಪಪಂ ಸದಸ್ಯರಾದ ಮಹೇಶ್‌, ವೈ.ಜಿ.ರಂಗನಾಥ, ಮಂಜು, ಮಹದೇವನಾಯಕ, ಶಾಂತಮ್ಮನಿಂಗರಾಜು ನಾಮನಿರ್ದೇಶಿತ ಸದಸ್ಯರಾದ ರಘು, ಮಹೇಶ್‌, ನಿಂಗರಾಜು ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್‌, ಸಿದ್ದರಾಜು ತಾಪಂ ಸಾಮಾಜಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು, ಮಾಂಬಳ್ಳಿ ನಂಜುಂಡಸ್ವಾಮಿ, ಬಾಲುಪ್ರಸಾದ್‌, ನಾಗರಾಜು, ವೈ.ಎಸ್‌. ನಂಜಶೆಟ್ಟಿ, ತಹಶೀಲ್ದಾರ್‌ ಕೆ.ಬಿ.ಆನಂದಪ್ಪನಾಯಕ್‌, ಇಒ ಉಮೇಶ್‌, ಬಿಇಒ ಕೆ. ಕಾಂತರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next