Advertisement

“ಜೀವಿಗಳ ಹೃದಯ ಭಗವಂತನಿರುವ ಗರ್ಭಗುಡಿ’

03:15 PM Mar 18, 2017 | Team Udayavani |

ಸುಳ್ಯ : ದೇವಾಲಯದಲ್ಲಿ ಪೂಜೆ ಮಾಡಿದರೆ ಭಗವಂತ ಎಂತಹ ಅನುಗ್ರಹವನ್ನು ಕೊಡುತ್ತಾನೆಯೋ ಅದೇ ಅನುಗ್ರಹವನ್ನು ಬಡವರ ಸೇವೆ ಮಾಡಿದಾಗಲೂ ಭಗವಂತ ಕೊಡುತ್ತಾನೆ.ಗರ್ಭಗುಡಿಯಲ್ಲಿ ಇರುವಂತೆಯೇ ದೇವರ ಸಾನ್ನಿಧ್ಯ  ಜೀವಿಗಳ ಹೃದಯದಲ್ಲೂ  ಇರುವುದು ಇದಕ್ಕೆ ಕಾರಣ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀಯವರು ಹೇಳಿದರು. 

Advertisement

ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದಲ್ಲಿ ಮಂಗಳೂರಿನ ರಾಮಕೃಷ್ಣ ಮಿಷನ್ನಿನ ವತಿಯಿಂದ ನಡೆಸಲಾದ 25ನೇ ಉಚಿತ ಬಟ್ಟೆ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮದ ಸಂಚಾಲಕರಾದ  ಶ್ರೀಕೃಷ್ಣ ಉಪಾ ಧ್ಯಾಯರು ಮಾತನಾಡಿ ರಾಮಕೃಷ್ಣ ಮಠಗಳು ಮಾಡುತ್ತಿರುವ ಜನಪರ ಸೇವಾಚಟುವಟಿಕೆಗಳ ಬಗ್ಗೆ ಮತ್ತು ಮಠದ ಇತಿಹಾಸದ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ.ನ ಅಧ್ಯಕ್ಷೆ ಶಕುಂತಳಾ ಕೇವಳರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಮಡಪ್ಪಾ$ಡಿ ಸೇವಾ ಸಹಕಾರಿ ಸಂಘದ ನಿರ್ದೇಶಕ ಪಿ.ಸಿ ಜಯರಾಮರು ಸ್ವಾಗತ ಮತ್ತು ಪ್ರಸ್ತಾವನೆಗೈದು ಸುಳ್ಯ ಎ.ಪಿ.ಎಂ.ಸಿ ಸದಸ್ಯ ಜಯರಾಮ ಹಾಡಿಕಲ್ಲು ವಂದಿ ಸಿದರು. ಈ ಕಾರ್ಯಕ್ರಮದಲ್ಲಿ 100 ಜನ ಅರ್ಹ ಫ‌ಲಾನುಭವಿಗಳನ್ನು ಆಯ್ಕೆ ಮಾಡಿ ಐ.ಟಿ.ಸಿ ಕಂಪೆನಿಯ ತಯಾ ರಿಕೆಗಳಾದ ಉತ್ಕೃಷ್ಟ ಗುಣಮಟ್ಟದ ಪ್ಯಾಂಟ…, ಶರ್ಟ್‌, ಚೂಡಿದಾರಗಳನ್ನು ಉಚಿತವಾಗಿ ವಿತರಿಸಲಾಯಿತು.
 

Advertisement

Udayavani is now on Telegram. Click here to join our channel and stay updated with the latest news.

Next