Advertisement

KhubaVsChauhan: ಪ್ರಭು ಚವ್ಹಾಣ್ ವಿರುದ್ಧ ₹100 ಕೋಟಿ ಮಾನನಷ್ಟ ಮೊಕದ್ದಮೆಗೆ ಮುಂದಾದ ಖೂಬಾ

12:30 PM Aug 12, 2023 | Team Udayavani |

ಬೀದರ: ನನ್ನ ವಿರುದ್ಧ ಗಂಭೀರ ಆರೋಪ ಮಾಡಿ ಶಾಸಕ ಪ್ರಭು ಚವ್ಹಾಣ ಅವರು ಚಾರಿತ್ರೆಗೆ ಧಕ್ಕೆ ತಂದಿದ್ದು, ಅವರ ವಿರುದ್ಧ ನೂರು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಲು ಚಿಂತಿಸಿದ್ಧೆನೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಮುಂದಿನ ಏಳು ಜನ್ಮ ಹಾಗೂ ಹಿಂದಿನ ಏಳು ಜನ್ಮದಲ್ಲೂ ಈ ರೀತಿ ನೀಚ ಕೃತ್ಯ ಮಾಡುವ ಯೋಚನೆ ನನ್ನಲ್ಲಿ ಬರಲ್ಲ. ಶಾಸಕ ಚವ್ಹಾಣ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದು, ಅದಕ್ಕಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಇದನ್ನೂ ಓದಿ:Instagram ಪೋಸ್ಟ್ ನಿಂದ ವಿರಾಟ್ ಕೊಹ್ಲಿ 11.45 ಕೋಟಿ ರೂ ಪಡೆಯುವುದು ನಿಜವೇ? ಅಸಲೀಯತ್ತೇನು

ಜಿಲ್ಲೆಯಲ್ಲಿ ಬಿಜೆಪಿ ಅಂದರೆ ನಾನು, ನಾನು ಅಂದರೆ ಬಿಜೆಪಿ ಎಂಬ ಅಹಂಕಾರ ಚವ್ಹಾಣ ಬೆಳಿಸಿಕೊಂಡಿದ್ದಾರೆ. ಚವ್ಹಾಣ ಅವರ ಆರೋಪ ಕುರಿತಂತೆ ಪಕ್ಷದ ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ. ಇಬ್ಬರ ನಡುವಿನ ಗೊಂದಲವನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಇದು ಬಗೆಹರಿಯದಿದ್ದರೆ, ಪಕ್ಷದ ಅನುಮತಿ ಪಡೆದು ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರದ ಲಾಭ ಪಡೆದುಕೊಳ್ಳಬೇಕು. ಬೀದರ್ ಲೋಕಸಭಾ ಕ್ಷೇತ್ರದಿಂದ ಯಾರಾದರೂ ಡಮ್ಮಿ ಅಭ್ಯರ್ಥಿಯನ್ನು ಹಾಕಿ ಕಾಂಗ್ರೆಸ್ ಗೆ ಲಾಭ ಮಾಡಬೇಕು ಎಂಬ ಉದ್ದೇಶ ಚವ್ಹಾಣ ಅವರದ್ದು. ಬರೀ ಮೋಸ, ಕಪಟ, ಸ್ವಾರ್ಥದಿಂದ ಈ ಆರೋಪಗಳು ಕೂಡಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next