Advertisement

“ಯುವಕರು ಭಗತ್‌ ಸಿಂಗ್‌ ಆದರ್ಶ ಮೈಗೂಡಿಸಿಕೊಳ್ಳಿ’

08:50 AM Mar 29, 2018 | |

ತೆಕ್ಕಟ್ಟೆ (ಬೇಳೂರು): ಭಗತ್‌ ಸಿಂಗ್‌ ಕ್ರಾಂತಿಕಾರಿ ಬಳಗ, ಬೇಳೂರು ದೇಲಟ್ಟು ಘಟಕವನ್ನು ಬೇಳೂರು ಗ್ರಾಮ ಪಂಚಾಯತ್‌
ಅಧ್ಯಕ್ಷ  ಬೇಳೂರು ಕರುಣಾಕರ ಶೆಟ್ಟಿ ಅವರು ಮಾ. 25ರಂದು ದೇಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಉದ್ಘಾಟಿಸಿದರು.

Advertisement

ಅನಂತರ ಮಾತನಾಡಿದ ಅವರು, ಸಾಮಾಜಿಕವಾಗಿ ನ್ಯಾಯ ಒದಗಿಸುವ ನಿಟ್ಟಿನಿಂದ ಕೆಲವೊಮ್ಮೆ ಕ್ರಾಂತಿಕಾರಿ ಹೋರಾಟಗಳು ಕೂಡ  ಅನಿವಾರ್ಯ. ಬದಲಾದ ವೇಗದ ಬದುಕಿನಲ್ಲಿ ಯುವ ಸಮುದಾಯದಲ್ಲಿ ದೇಶಾಭಿಮಾನ ಮೂಡುವ ನಿಟ್ಟಿನಿಂದ ಭಗತ್‌ ಸಿಂಗ್‌ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಗತ್‌ ಸಿಂಗ್‌ ಕ್ರಾಂತಿಕಾರಿ ಬಳಗ, ಬೇಳೂರು ದೇಲಟ್ಟು ಘಟಕದ ನೂತನ ಅಧ್ಯಕ್ಷ ಮನೀಷ್‌ ದೇಲಟ್ಟು, ಕೋಟ ಘಟಕದ ಅಧ್ಯಕ್ಷ ಪ್ರಸಾದ್‌ ಬಿಲ್ಲವ, ತಾಲೂಕು ಸಂಚಾಲಕ ರಾಜೇಶ್‌ ಕೋಟೇಶ್ವರ, ಪ್ರವೀಣ ಕುಮಾರ್‌ ಶೆಟ್ಟಿ ಬಡಾಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.ನಿತ್ಯಾನಂದ ದೇಲಟ್ಟು ಸ್ವಾಗತಿಸಿ, ದಿನೇಶ್‌ ಶೆಟ್ಟಿ ದೇಲಟ್ಟು ವಂದಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next