Advertisement

ಕೊಪ್ಪಳಕ್ಕೆ ತೆರಳಿದ ಕೂಲಿ ಕಾರ್ಮಿಕರು

06:35 PM May 06, 2020 | Naveen |

ಭದ್ರಾವತಿ: ಕೂಲಿ ಕೆಲಸಕ್ಕೆಂದು ತಾಲೂಕಿನ ಬಿಳಕಿ ಗ್ರಾಮದ ಮಜ್ಜಿಗೇನಹಳ್ಳಿಗೆ ಬಂದು ಲಾಕ್‌ ಡೌನ್‌ ಕಾರಣ ತಮ್ಮ ಜಿಲ್ಲೆಗೆ ಹೋಗಲಾಗದೆ ಉಳಿದುಕೊಂಡಿದ್ದ ಕೊಪ್ಪಳದ ಯಲಬುರ್ಗ ತಾಲೂಕಿನ ಚಿಕ್ಕೊಪ್ಪ ತಾಂಡಾದಿಂದ ಬಂದಿದ್ದ ಆರು ಮಹಿಳೆಯರು,ನಾಲ್ವರು ಪುರುಷರು ಮತ್ತು 9 ಮಕ್ಕಳು ಸೇರಿದಂತೆ 19 ಜನರು ಮಂಗಳವಾರ ತಮ್ಮ ಸ್ವಗ್ರಾಮಕ್ಕೆ ಉಚಿತವಾಗಿ ತೆರಳಲು ತಾಲೂಕು ಆಡಳಿತ ಬಸ್ಸಿನ ವ್ಯವಸ್ಥೆ ಮಾಡಿತು.

Advertisement

ಮಂಗಳವಾರ ಕನಕ ಮಂಟಪ ಮೈದಾನದಲ್ಲಿ ತಹಶೀಲ್ದಾರ್‌ ಚಂದ್ರಶೇಖರ್‌ ಅವರ ಸಮ್ಮುಖದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಅವರೆಲ್ಲರ ದೇಹದ ತಾಪಮಾನವನ್ನು ಪರೀಕ್ಷಿಸಿ ನಂತರ ಬಸ್ಸಿನಲ್ಲಿ ಅವರನ್ನು ಅವರ ಸ್ವಗ್ರಾಮಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next