Advertisement

ಡಾ|ಕೊಟ್ರೇಶಪ್ಪ ತಾಪಂ ಇಒ

05:50 PM Jun 05, 2020 | Naveen |

ಭದ್ರಾವತಿ: ನೂತನ ತಾಪಂ ಕಾರ್ಯ ನಿರ್ವಹಣಾಧಿಕಾರಿಯಾಗಿ ಡಾ| ಕೊಟ್ರೇಶಪ್ಪ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.

Advertisement

ಈ ಹಿಂದಿನ ಕಾರ್ಯ ನಿರ್ವಹಣಾಧಿಕಾರಿಗಳಾದ ತಮ್ಮಣ್ಣ ಗೌಡರ ಕಾರ್ಯವೈಖರಿಯನ್ನು ಪ್ರಶ್ನಿಸಿ ತಾಪಂ ಸದಸ್ಯರು ಅವರ ವರ್ಗಾವಣೆಗೆ ಆಗ್ರಹಿಸಿ ಬುಧವಾರ ತಾಪಂ ಅಧ್ಯಕ್ಷೆ ಆಶಾ ಶ್ರೀಧರ್‌ ಅವರ ಅಧ್ಯಕ್ಷತೆಯಲ್ಲಿ ತಾಪಂ ಸಭಾಂಗಣದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಅವರು ಪ್ರತಿಭಟನಾನಿರತರ ಜೊತೆ ದೂರವಾಣಿ ಮೂಲಕ ಮಾತನಾಡಿ ಗುರುವಾರದೊಳಗಾಗಿ ನೂತನ ಅಧಿಕಾರಿಯನ್ನು ಆ ಸ್ಥಾನಕ್ಕೆ ನೇಮಿಸುವ ಭರವಸೆ ನೀಡಿದ ಮೇರೆಗೆ ಸದಸ್ಯರು ಪ್ರತಿಭಟನೆ ಹಿಂಪಡೆದಿದ್ದರು.

ಆ ಪ್ರಕಾರ ಗುರುವಾರ ಇಲ್ಲಿನ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳಾಗಿದ್ದ ತಮ್ಮಣ್ಣ ಗೌಡ ಅವರನ್ನು ಅವರ ಮೂಲ ಇಲಾಖೆಯಾದ ಶಿವಮೊಗ್ಗ ರೇಷ್ಮೆ ಇಲಾಖೆಗೆ ವರ್ಗಾವಣೆ ಮಾಡಿ ಇಲ್ಲಿ ಅವರ ಸ್ಥಾನಕ್ಕೆ ನೂತನ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳಾಗಿ ಡಾ| ಕೊಟ್ರೇಶಪ್ಪ ಅವರನ್ನು ವರ್ಗಾವಣೆ ಮಾಡಲಾಗಿದೆ. ತಮ್ಮಣ್ಣ ಗೌಡ ಅವರು ಗುರುವಾ‌ರ ನೂತನ ಕಾರ್ಯ ನಿರ್ವಹಣಾಧಿಕಾರಿ ಡಾ| ಕೊಟ್ರೇಶಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ತಾಪಂ ಸದಸ್ಯ ಮಂಜುನಾಥ್‌ ಕದಿರೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next