Advertisement

ಅತ್ಯುತ್ತಮ ಶಿಕ್ಷಕ ಪ್ರಶಸ್ತಿ: ಸತ್ಯ ಸಾಯಿ ಪ್ರಸಾದ್ ರಿಗೆ ನಾಗರಿಕ ಸಮಿತಿಯಿಂದ ಅಭಿನಂದನೆ

09:13 PM Sep 05, 2022 | Team Udayavani |

ಶಿರ್ವ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸರಕಾರಿ ಪ್ರಾರ್ಥಮಿಕ ಶಾಲೆ ರಾಜೀವ ನಗರ ಉಡುಪಿ ಇಲ್ಲಿಯ ಹಿರಿಯ ಶಿಕ್ಷಕ ಶ್ರೀ ಸತ್ಯ ಸಾಯಿ ಪ್ರಾಸಾದ್ ಬಂಟಕಲ್ಲು ಇವರು ಶಿಕ್ಷಕರ ದಿನಾಚರಣೆಯ ಸಂಧರ್ಭದಲ್ಲಿ ಅತ್ಯುತ್ತಮ ಶಿಕ್ಷಕ, ಜಿಲ್ಲಾ ಪ್ರಶಸ್ತಿ ಪಡೆದಿರುತ್ತಾರೆ. ಈ ಸಂಧರ್ಭ ಇವರನ್ನು ನಾಗರಿಕ ಸೇವಾ ಸಮಿತಿ ರಿ. ಬಂಟಕಲ್ಲು ಇವರು ಶಿಕ್ಷಕ ಸತ್ಯ ಸಾಯಿ ಪ್ರಸಾದ್ ರವರ ಮನೆಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.

Advertisement

ಸಮಿತಿ ಅಧ್ಯಕ್ಷ ಕೆ.ಆರ್. ಪಾಟ್ಕರ್ ರವರು ಪ್ರಸಾದ್ ರವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಪೇಟ ತೊಡಿಸಿ ಸನ್ಮಾನಿಸಿ ಅಭಿನಂದಿಸಿ ಈ ನಿಮ್ಮ ಪ್ರಶಸ್ತಿ ನಮ್ಮ ಊರಿಗೆ, ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದ್ದು ಮುಂದೆ ರಾಜ್ಯಪ್ರಶಸ್ತಿ ದೊರೆಯುವಂತಾಗಲಿ ಎಂದು ಶುಭಹಾರೈಸಿದರು.

ಸಮಿತಿಯ ಉಪಾಧ್ಯಕ್ಷರಾದ ಶ್ರೀ ಪುಂಡಲೀಕ ಮರಾಠೆಯವರು ಪ್ರಸಾದ್ ರವರ ಸೇವೆಯನ್ನು ಶ್ಲಾಘಿಸಿ ಶುಭಹಾರೈಸಿದರು. ಇನ್ನೂರ್ವ ಉಪಾಧ್ಯಕ್ಷರಾದ ಮಾಧವ ಕಾಮತ್, ಸಮಿತಿ ಕಾರ್ಯದರ್ಶಿ ದಿನೇಶ್ ದೇವಾಡಿಗ, ಸದಸ್ಯರಾದ ಉಮೇಶ್ ರಾವ್, ಹರೀಶ್ ಹೇರೂರು, ಡೆನಿಸ್ ಡಿ’ ಸೋಜ ಹಾಗೂ ಇಂದಿರಾ ಪ್ರಸಾದ್ ರವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next