Advertisement

Benjanapadavu; ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ: ಗಾಯಗೊಂಡ ಸವಾರ

07:27 AM Mar 23, 2024 | Team Udayavani |

ಬಂಟ್ವಾಳ: ಖಾಸಗಿ ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ವಾಹನ ಸವಾರ ಗಾಯಗೊಂಡ ಘಟನೆ ಬೆಂಜನಪದವು ಸಮೀಪದ ಶಿವಾಜಿ ನಗರದಲ್ಲಿ ಮಾ.22 ರಂದು ಸಂಜೆ ವೇಳೆ ನಡೆದಿದೆ.

Advertisement

ಬೆಂಜನಪದವು ನಿವಾಸಿ ನವೀನ್ ಅಪಘಾತದಲ್ಲಿ ಗಾಯಗೊಂಡಿರುವ ವ್ಯಕ್ತಿಯಾಗಿದ್ದಾನೆ.

ಮಲ್ಲೂರು ಕಡೆಯಿಂದ ಬೆಂಜನಪದವು ಕಡಗೆ ಬರುತ್ತಿದ್ದ ರಾಜಲಕ್ಷೀ ಬಸ್ ಹಾಗೂ ಬೆಂಜನಪದವು ಕಡೆಯಿಂದ ಹೋಗುತ್ತಿದ್ದ ಸ್ಕೂಟರ್ ‌ನಡುವೆ ಶಿವಾಜಿನಗರದ ತಿರುವಿನಲ್ಲಿ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಸ್ಕೂಟರ್ ಸವಾರನಿಗೆ ಗಾಯವಾಗಿದ್ದು, ಈತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಬಸ್ ಡಿಕ್ಕಿಯಾದ ರಭಸಕ್ಕೆ ಚಾಲಕನಿಗೆ ನಿಯಂತ್ರಣ ಸಾಧಿಸಲು ಸಾಧ್ಯವಾಗದೆ ಕೆಂಪುಕಲ್ಲಿನ ಕೋರೆಯ ಗುಡ್ಡದ ಮೇಲೆ ಹತ್ತಿ ವಾರೆಯಾಗಿ ನಿಂತುಕೊಂಡಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ಪ್ರಯಾಣಿಕರು ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ.

Advertisement

ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಇನ್ಸ್ ಪೆಕ್ಟರ್ ಶಿವಕುಮಾರ್, ಮೆಲ್ಕಾರ್ ಟ್ರಾಫಿಕ್ ಎ.ಎಸ್.ಐ.ಸುರೇಶ್, ಎಚ್.ಸಿ.ಚಂದ್ರಿಕಾ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next